ನಟ್ಟು ಬೋಲ್ಟ್ ಟೈಟ್ ಟಾಪಿಕ್ ನಡುವೆ ತರುಣ್ ಸುಧೀರ್ ಸಿನಿಮಾಗೆ ಬಿತ್ತು ದಂಡ..!

ತುಮಕೂರು; ಅಂತರಾಷ್ಟ್ರೀಯ ಚಲನಚಿತ್ರೋವಕ್ಕೆ ಚಂದನವನದ ಮಂದಿಯೇ ಬಾರದಿದ್ದಕ್ಕೆ ಆಕ್ರೋಶಗೊಂಡಿದ್ದ ಡಿಸಿಎಂ ಡಿಕೆ ಶಿವಕುಮಾರ್ ನಟ್ಟು, ಬೋಲ್ಟ್ ಟೈಟ್ ಮಾಡ್ತೇನೆ ಎಂದಿದ್ದರು. ಈ ವಿಚಾರ ಪರ ವಿರೋಧದ ಚರ್ಚೆ ಹುಟ್ಟು ಹಾಕಿರುವಾಗಲೇ, ತರುಣ್ ಸುಧೀರ್ ಸಿನಿಮಾಗೆ ದಂಡ ಬಿದ್ದಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಂದ ರಾಣಾ ಸಿನಿಮಾಗೆ ದಂಡ ವಿಧಿಸಲಾಗಿದೆ.

ನಿರ್ದೇಶಕ ತರುಣ್ ಸುಧೀರ್ ಪ್ರೊಡಕ್ಷನ್ ನಲ್ಲಿ ನಟಿ ರಕ್ಷಿತಾ ತಮ್ಮ ರಾಣಾ ಅವರ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಇದು ಕಳೆದ ಐದು ದಿನಗಳಿಂದ ತುಮಕೂರಿನ ನಾಮದ ಚಿಲುಮೆಯಲ್ಲಿ ನಡೆಯುತ್ತಿದೆ. ಅನುಮತಿ ಇಲ್ಲದೆ ಚಿತ್ರೀಕರಣ ಮಾಡುತ್ತಿದ್ದ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಚಿತ್ರೀಕರಣವನ್ನ ನಿಲ್ಲಿಸಿ, ಕ್ಯಾರಾವಾನ್, ಲೈಟ್, ಕ್ಯಾಮೆರಾ ಲೈಟ್, ಅಡುಗೆ ಸಾಮಾಗ್ರಿ, ಟೆಂಪೋವನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಚಿತ್ರೀಕರಣ ನಿಂತಿದೆ.

ಈ ಸಂಬಂಧ ಮಾತನಾಡಿರುವ ತರುಣ್ ಸುಧೀರ್, ನಾವೂ ಕಾಡಿನಲ್ಲಿ ಶೂಟಿಂಗ್ ಮಾಡಿರೋದಲ್ಲ. ಒಂದು ಬಾರ್ ಅಂಡ್ ರೆಸ್ಟೋರೆಂಟ್ ಸೃಷ್ಟಿಸಿ ಶೂಟಿಂಗ್ ಮಾಡೋದಕ್ಕೆ ಹೊರಟಿದ್ವಿ. ಮಾರ್ಗ ಮಧ್ಯೆ ನಮ್ಮ ಪ್ರೊಡಕ್ಷನ್ ವಾಹನ ನಿಲ್ಲಿಸಿದ್ವಿ. ಊಟಕ್ಕೆಂದು ಪಕ್ಕದಲ್ಲಿಯೇ ಒಂದು ಲೈಟ್ ಹಾಕಲಾಗಿತ್ತು. ಇದನ್ನ ನೋಡಿದ ಯಾರೋ ವ್ಯಕ್ತಿ ಶೂಟಿಂಗ್ ನಡೆಯುತ್ತಿದೆ ಎಂದು ಭಾವಿಸಿ, ದೂರು ನೀಡಿದ್ದಾರೆ. ನಮಗೆ ಅದು ಫಾರೆಸ್ಟ್ ಎಂಟ್ರಿ, ನಾಮಚಿಲುಮೆ ಇರುವ ಜಾಗ ಎಂದು ಗೊತ್ತಿರಲಿಲ್ಲ. ನಮ್ಮ ಸಿನಿಮಾದ ವಸ್ತುಗಳನ್ನ ಸೀಜ್ ಮಾಡಿಲ್ಲ. ದಂಡ ಹಾಕಿದ್ರು ಕಟ್ಟಿದ್ದೀವಿ ಅಷ್ಟೇ ಎಂದು ನಿರ್ದೇಶಕ ತರುಣ್ ಸುಧೀರ್ ತಿಳಿಸಿದ್ದಾರೆ.

suddionenews

Recent Posts

ಚಿತ್ರದುರ್ಗ : ನಗರದ ಮದ್ಯ ಭಾಗದಲ್ಲಿ ಆಕಸ್ಮಿಕ ಅಗ್ನಿ ಅವಘಡ : ಹೊತ್ತಿ ಉರಿದ ಫೋಟೋ ಫ್ರೇಂ ಅಂಗಡಿ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಹೃದಯ ಭಾಗದಲ್ಲಿರುವ ಬಿ.ಡಿ. ರಸ್ತೆಯ ಎಸ್.ಬಿ.ಐ. ಬ್ಯಾಂಕ್ ಸಮೀಪ, ಶಾರ್ಟ್ ಸರ್ಕ್ಯೂಟ್…

7 hours ago

ರನ್ಯಾ ರಾವ್ ಕೇಸ್ ವರದಿ ಸಲ್ಲಿಕೆ ; ಯಾರೆಲ್ಲರ ಹೆಸರು ಬಹಿರಂಗ..?

ಬೆಂಗಳೂರು; ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಜೈಲು ವಾಸ ಅನಿಭವಿಸುತ್ತಿದ್ದಾರೆ. ಇದರ ನಡುವೆ ತನಿಖೆಯು ನಡೆಯುತ್ತಿದ್ದು, ಗೌರವ…

13 hours ago

ಕಳೆದ ಬಾರಿ ಮೋದಿ ಭವಿಷ್ಯ ನುಡಿದಿದ್ದ ಧಾರವಾಡ ಬೊಂಬೆಗಳು ಈ ಬಾರಿ ಹೇಳಿದ್ದೇನು..?

ಧಾರವಾಡ; ಇಲ್ಲಿನ ಹನುಮಕೊಪ್ಪ ಗೊಂಬೆಗಳು ಭವಿಷ್ಯ ನುಡಿದಿವೆ. ಯುಗಾದಿ ಹಬ್ಬದಂದು ಇಲ್ಲಿನ ಗೊಂಬೆಗಳ ಬಳಿ ಭವಿಷ್ಯ ಕೇಳುವ ಪ್ರತೀತಿ‌ ಇದೆ.…

16 hours ago

ಚಿತ್ರದುರ್ಗ : ಪ್ರಭಾಕರ ವರ್ಧನ ನಿಧನ

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 30 : ನಗರದ ಬ್ಯಾಂಕ್ ಕಾಲೋನಿ ವಾಸಿ ಹಾಗೂ ದೊಡ್ಡ ಸಿದ್ದವ್ವನಹಳ್ಳಿ ಮೂಲದ ನಿವೈತ್ತ ಶಿಕ್ಷಕ…

17 hours ago

ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬಂದಿದೆ ; ಹಬ್ಬದ ಸಡಗರಕ್ಕೆ ಸುದ್ದಿಒನ್ ಶುಭಾಶಯಗಳು

ಇಂದು ಯುಗಾದಿ ಹಬ್ಬ. ಹಿಂದೂಗಳ ಹೊಸ ವರ್ಷಾರಂಭ. ಮರ ಗಿಡಗಳು ಹಳೆ ಎಲೆಗಳನ್ನ ಉದುರಿಸಿ ಹೊಸ ಚಿಗುರನ್ನ ಹೊತ್ತು, ಸುಂದರವಾಗಿ…

21 hours ago

ಈ ರಾಶಿಯವರಿಗೆ ಮದುವೆ ಸಂಭ್ರಮ, ಆರ್ಥಿಕ ಅಭಿವೃದ್ಧಿ, ಕೆಲಸ ಬದಲಾವಣೆ, ವಿದೇಶ ಯೋಗ, ಆಟದಲ್ಲಿ ಗೆಲವು

ಈ ರಾಶಿಯವರಿಗೆ ಮದುವೆ ಸಂಭ್ರಮ, ಆರ್ಥಿಕ ಅಭಿವೃದ್ಧಿ, ಕೆಲಸ ಬದಲಾವಣೆ, ವಿದೇಶ ಯೋಗ, ಆಟದಲ್ಲಿ ಗೆಲವು, ಭಾನುವಾರದ ರಾಶಿ ಭವಿಷ್ಯ…

24 hours ago