Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಇನ್ಮುಂದೆ ಸಹಿಸಿ ಕೂರೋದಕ್ಕೆ ಆಗಲ್ಲ, ಹೈಕೋರ್ಟ್ ತೀರ್ಪು ಉಲ್ಲಂಘಿಸಿದರೆ ಕ್ರಮ : ಸಚಿವ ಆರಗ ಜ್ಞಾನೇಂದ್ರ

Facebook
Twitter
Telegram
WhatsApp

ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸಬಾರದು ಎಂದು ಹೈಕೋರ್ಟ್ ಆದೇಶ ನೀಡಿದೆ. ಈ ಆದೇಶದ ನಡುವೆ ಕೆಲವು ಜಿಲ್ಲೆಯಲ್ಲಿ ನಮ್ಗೆ ಶಿಕ್ಷಣಕ್ಕಿಂತ ಧರ್ಮವೇ ಮುಖ್ಯವೆಂದು ವಿದ್ಯಾರ್ಥಿನಿಯರು ಹಠ ಮಾಡಿದ್ದಾರೆ.

ಈ ಸಂಬಂಧ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಹಿಜಾಬ್ ಧರಿಸಿ ಹೋಗುವ ಆಗಿಲ್ಲ. ಹೈಕೋರ್ಟ್ ತೀರ್ಪು ನೀಡಿದೆ. ಬಲವಂತವಾಗಿ ಬರೋದಕ್ಕೆ ಪ್ರಯತ್ನ ಪಟ್ಟರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ. ಇನ್ಮುಂದೆ ಇದನ್ನೆಲ್ಲಾ ಸಹಿಸಿ ಕೂರೋದಕ್ಕೆ ಆಗಲ್ಲ.

ಕಳೆದ ಎರಡು ವರ್ಷದಿಂದ ಶಿಕ್ಷಣ ಹಾಳಾಗಿದೆ. ಈ ವರ್ಷ ಆದ್ರೂ ಶಿಕ್ಷಣ ಮುಂದುವರೆಸಲಿ. ಮಕ್ಕಳಿಗೆ ಅವಕಾಶ ಮಾಡಿಕೊಡಬೇಕು. ಯಾರೋ ಆ ಮಕ್ಕಳ ತಲೆಯಲ್ಲಿ ಮತಾಂದತೆ ತುಂಬುತ್ತಿದ್ದಾರೆ. ಶಾಲೆ ಒಳಗೆ ಅಣ್ಣ ತಮ್ಮಂದಿರು ಅನ್ನೋ ಭಾವನೆ ಇರಬೇಕು. ನಾವೂ ಈ ದೇಶದ ಮಕ್ಕಳು ಎಂಬ ಭಾವನೆ ನಿರ್ಮಾಣ ಮಾಡಬೇಕು. ಈ ರೀತಿ ಆದ್ರೆ ಎಲ್ಲಿ ನಿರ್ಮಾಣ ಆಗುತ್ತೆ.

ಎಲ್ಲಿಯೂ ಪರಿಸ್ಥಿತಿ ಹದಗೆಡಲ್ಲ. ಸಾರ್ವಜನಿಕರು ಇದನ್ನ ಒಪ್ಪಲ್ಲ. ಯಾರಿಗೆ ಜಡ್ಜ್ ಮೆಂಟ್ ತೃಪ್ತಿಕರವಾಗಿಲ್ಲ, ಅವರು ಸುಪ್ರೀಂ ಕೋರ್ಟ್ ಹೋಗೋದಕ್ಕೆ ಅವಕಾಶವಿದೆ. ನಾನು ನಿನ್ನೆ ನೋಡಿದೆ. ನಂಗೆ ಶಿಕ್ಷಣಕ್ಕಿಂತ ಧರ್ಮ ಮುಖ್ಯ ಅಂತಿದ್ದಾರೆ ಮಕ್ಕಳು. ಈ ಧರ್ಮದ ಅಫೀಮನ್ನ ಯಾರು ಹಚ್ಚಿದ್ದು. ಮತಾಂಧತೆಯನ್ನ ಮಕ್ಕಳ ತಲೆಯಲ್ಲಿ ತುಂಬುವುದನ್ನ ತಪ್ಪಿಸಬೇಕು. ಆ ಸಮುದಾಯದವರೇ ಇದನ್ನ ಖಂಡಿಸಬೇಕು. ಸುಮ್ ಸುಮ್ನೆ ಶಾಂತಿ ಕದಡುವುದಕ್ಕೆ ಬಿಡೋದಿಲ್ಲ. ಪೊಲೀಸರಿದ್ದಾರೆ. ನಮ್ಮ ಎಲ್ಲಾ ಅಧಿಕಾರಿಗಳು ಫೀಲ್ಡ್ ನಲ್ಲಿದ್ದಾರೆ. ಯಾವುದೇ ಕಾರಣಕ್ಕೂ ಶಾಂತಿ ಸುವ್ಯವಸ್ಥೆ ಕದಡಲು ಬಿಡೋದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅದ್ದೂರಿಯಾಗಿ ಜರುಗಿದ ಬೆಳಗೆರೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729   ಚಳ್ಳಕೆರೆ, ಏಪ್ರಿಲ್. 25 : ತಾಲೂಕಿನ ಬೆಳಗೆರೆ ಹಾಗೂ ನಾರಾಯಣಪುರದ ಮಧ್ಯ ಕೆರೆ  ಏರಿ ಬುಡದಲ್ಲಿ ನೆಲೆಸಿರುವ

ಗುಡುಗು, ಸಿಡಿಲು ಬಡಿತ: ಸಾರ್ವಜನಿಕರಿಗೆ ಪ್ರಮುಖ ಸಲಹೆಗಳು

ಚಿತ್ರದುರ್ಗ. ಏ.25 : ಗುಡುಗು, ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳ ಸಂದರ್ಭದಲ್ಲಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿ ತಿಳಿಸಿದ ನಿಯಮಗಳನ್ನು ಸಾರ್ವಜನಿಕರು ಚಾಚು ತಪ್ಪದೆ ಪಾಲನೆ ಮಾಡಬೇಕು

ಕಾಯಕ ಸಮುದಾಯ ಬಿ.ಎನ್.ಚಂದ್ರಪ್ಪ, ಪ್ರಭಾ ಮಲ್ಲಿಕಾರ್ಜನ್ ರವರನ್ನು ಬೆಂಬಲಿಸಲಿ : ಎನ್.ಡಿ.ಕುಮಾರ್ ಮನವಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ.25 : ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಎನ್.ಚಂದ್ರಪ್ಪ, ಮತ್ತು ದಾವಣಗೆರೆ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜನ್ ಅವರನ್ನು

error: Content is protected !!