ಬೆಂಗಳೂರು; ಕಡೆಗೂ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಬರುವ ಸಮಯ ಹತ್ತಿರವಾಗಿದೆ. ಆದರೆ ಕಳೆದ ಒಂಭತ್ತು ತಿಂಗಳಿನಿಂದ ಬಾಹ್ಯಾಕಾಶದ ವಾತಾವರಣಕ್ಕೆ ಹೊಂದಿಕೊಂಡಿರುವ ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಬಂದಾಕ್ಷಣವೇ ಇಲಗಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ಅದಕ್ಕೆ ಸಾಕಷ್ಟು ಸಮಯ ಬದಲಾಗುತ್ತದೆ. ಅವರಿಗೆ ಕಾಡುವ ಸಮಸ್ಯೆಗಳೇನು ಎಂಬ ಮಾಹಿತಿ ಇಲ್ಲಿದೆ.
ಈಗಂತೂ ಇಬ್ಬರ ಪಾದಗಳು ಮಗುವಿನಂತೆ ಸ್ಮೂಥ್ ಆಗಿರುತ್ತವೆ. ಯಾಕಂದ್ರೆ ಒಂಭತ್ತು ತಿಂಗಳು ಪಾದವನ್ನು ನೆಲಕ್ಕೆ ಇಟ್ಟಿಲ್ಲ. ತೇಲಾಡಿಕೊಂಡೆ ಇದ್ದ ಕಾರಣ, ಭೂಮಿಗೆ ಬಂದ ಮೇಲೂ ಅದೇ ಅನುಭವವಾಗುತ್ತದೆ. ದೇಹ ಭಾರವಿದೆ ಎಂಬ ಅನುಭವವೇ ಅವರಿಗೆ ಆಗುವುದಿಲ್ಲ. ದೇಹದ ಚರ್ಮವೂ ಮಾಮೂಲಿಯಂತೆ ಇರುವುದಿಲ್ಲ. ಮೂಳೆಯ ಸಾಂಧ್ರತೆ ಹಾಗೂ ದ್ನಾಯು ಕ್ಷೀಣತೆಯ ಸಮಸ್ಯೆಯನ್ನು ಅವರು ಅನುಭವಿಸಿರುತ್ತಾರೆ. ಭೂಮಿಯ ಗುರುತ್ವಾಕರ್ಷಣೆಯೇ ಬೇರೆ ಬಾಹ್ಯಾಕಾಶದ ಗುರುತ್ವಾಕಾರ್ಷಣೆಯೇ ಬೇರೆ. ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗಿರುತ್ತದೆ, ಕಣ್ಣಿನಾ ರೇಟಿನಾ ಭಾಗಕ್ಕೂ ಸಮಸ್ಯೆ ಆಗಿರುತ್ತದೆ, ಶ್ವಾಸ ಕೋಶ, ಮೂತ್ರಪಿಂಡ, ಹೃದಯ, ಮೆದುಳಿಗೂ ಸಮಸ್ಯೆಯಾಗಿರುತ್ತದೆ.
ಹೀಗಾಗಿ ಸುನೀತಾ ವಿಲಿಯಮ್ಸ್ ಭೂಮಿಗೆ ಬಂದ ಮೇಲೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಇದಕ್ಕೆ ಬಾಹ್ಯಾಕಾಶ ಸಂಸ್ಥೆಗಳೆ ಪುನರ್ವಸತಿ ಕೇಂದ್ರಗಳನ್ನ ತೆರೆಯುತ್ತಾರೆ. ಅಲ್ಲಿ ಗಗನಾಯಾತ್ರಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ದೈನಂದಿನ ವ್ಯಾಯಾಮ, ಬ್ಯಾಲೆನ್ಸ್ ಕಾಯ್ದುಕೊಳ್ಳಲು ತರಬೇತಿ, ಆಹಾರ, ಅಗತ್ಯ ಔಷಧಿಗಳನ್ನು ದೇಹದ ಪರಿಸ್ಥಿತಿಗೆ ಅನುಗುಣವಾಗಿ ನೀಡುವುದು. ನಾಸಾ ವೈದ್ಯಕೀಯ ತಂಡದಿಂದ ನಿರಂತರ ಮೇಲ್ವಿಚಾರಣೆ ಮೂಲಕ ಅವರ ಆರೋಗ್ಯದ ಕಡೆಗೆ ಗಮನ ಹರಿಸುತ್ತಾರೆ. ಸಹಜ ಸ್ಥಿತಿಗೆ ಅವರ ಆರೋಗ್ಯ ತರಲು ಪ್ರಯತ್ನಿಸುತ್ತಾರೆ.
ಸುದ್ದಿಒನ್, ಹಿರಿಯೂರು, ಮಾರ್ಚ್. 19 : ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಬೆಂಬಲಿಗರಿಬ್ಬರು ಸೋಮವಾರ ರಾತ್ರಿ ಟೆಂಡರ್…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಬ್ಯಾಂಕ್ ಕಾಲೋನಿ ನಿವಾಸಿ ಜಿ.ಪಿ.ಉಮೇಶ್(63) ಬುಧವಾರ ಬೆಳಿಗ್ಗೆ 11-30 ಕ್ಕೆ ಹೃದಯಾಘಾತದಿಂದ ನಿಧನರಾದರು.…
ಚಿತ್ರದುರ್ಗ. ಮಾ. 19: ಸಾರ್ವಜನಿಕರೊಂದಿಗೆ ನೇರವಾಗಿ ವ್ಯವಹರಿಸುವ ಇಲಾಖೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅತಿ ಮುಖ್ಯವಾದದು.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…
ಸುದ್ದಿಒನ್, ಹರಿಹರ, ಮಾರ್ಚ್. 19 : ಪವಿತ್ರ ರಂಜಾನ್ ತಿಂಗಳು ದಾನ, ಪರೋಪಕಾರಿ ಸೇವೆ ಮತ್ತು ಮಾನವೀಯತೆಯ ಸಮಯ. ಈ…
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 19 : ಒಂಬತ್ತು ತಿಂಗಳು ಕಾಲ ಬಾಹ್ಯಾಕಾಶದಲ್ಲಿದ್ದು, ಕ್ಯಾಪ್ಸೂಲ್ ಮೂಲಕ ಭೂಮಿಯನ್ನು ತಲುಪಿದ ಗಗನಯಾನಿಗಳಾದ ಸುನಿತಾ…