ದಾವಣಗೆರೆಯಲ್ಲಿ ಬೇಸಿಗೆ ಹೆಚ್ಚಳ, ಕಾಡ್ಗಿಚ್ಚು ಸಂಭವ : 1926 ಸಹಾಯವಾಣಿ

ದಾವಣಗೆರೆ ಮಾ.28 : ದಾವಣಗೆರೆ ಪ್ರಾದೇಶಿಕ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಂಡುಬಂದರೆ ಕೂಡಲೇ ಅರಣ್ಯ ಸಹಾಯವಾಣಿ 1926 ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ. ಅಜಾಗರೂಕತೆಯಿಂದ ಬೆಂಕಿಕಡ್ಡಿಗಳು, ಬೀಡಿ ಹಾಗೂ ಸಿಗರೇಟ್ ತುಂಡುಗಳು ಅರಣ್ಯ ಬೆಂಕಿಗೆ ಕಾರಣವಾಗಿ, ಪರಿಸರಕ್ಕೆ ಹಾನಿಯುಂಟು ಮಾಡಬಹುದು. ಇದರಿಂದ ನೈಸರ್ಗಿಕವಾದ ಅರಣ್ಯ ಸಂಪತ್ತಿಗೆ ಹಾನಿ ಮಾಡುವುದರೊಂದಿಗೆ ನೆಲೆಸಿರುವ ಪ್ರಾಣಿ-ಪಕ್ಷಿ, ಸಸ್ಯ ಸಂಕುಲಗಳ ನಾಶಕ್ಕೆ ಕಾರಣವಾಗುತ್ತದೆ.

 

ಸಹಾಯವಾಣಿ ಜೊತೆಗೆ ರತ್ನಾಕರ್ ಓಬಣ್ಣವರ-ವಲಯ ಅರಣ್ಯಾಧಿಕಾರಿ ಮೊ.ಸಂ.9986230824, ರಾಮಚಂದ್ರಪ್ಪ- ಉಪ ವಲಯ ಅರಣ್ಯಾಧಿಕಾರಿ, ಹೆಬ್ಬಾಳ್ ಶಾಖೆ ಮೊ.ಸಂ: 9513474666, ಹಸನ್ ಬಾಷಾ- ಉಪವಲಯ ಅರಣ್ಯಾಧಿಕಾರಿ, ಮಲೇಬೆನ್ನೂರು ಶಾಖೆ ಮೊ.ಸಂ: 8971081044, ಖಾಲೀದ್ ಮುಜ್ತಾಬಾ- ಉಪ ವಲಯ ಅರಣ್ಯಾಧಿಕಾರಿ, ಹರಿಹರ ಶಾಖೆ ಮೊ.ಸಂ:8105559874, ದಿನೇಶ್ ಕುಮಾರ್ ಕೆ.- ಉಪ ವಲಯ ಅರಣ್ಯಾಧಿಕಾರಿ, ದಾವಣಗೆರೆ ನಗರ ಶಾಖೆ ಮೊ.ಸಂ: 9535852070. ಕರೆಮಾಡಬೇಕೆಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

ಅಪಾಯಕಾರಿಯಾದ ಮರಗಳ ತೆರವು : ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಳೆ ಗಾಳಿಗೆ ಮತ್ತು ಇತರೆ ನೈಸರ್ಗಿಕ ಕಾರಣಗಳಿಂದಾಗಿ ಕೆಲವೊಂದು ಮರಗಳು ಟೊಳ್ಳಾಗಿ, ಬಾಗಿ ಒಣಗಿ ಸಂಚಾರಕ್ಕೆ ಆಸ್ತಿಪಾಸ್ತಿಗೆ ಅಪಾಯಕಾರಿಯಾಗಿರುತ್ತದೆ.

ಇಂತಹ ಮರಗಳನ್ನು ಆದ್ಯತೆಯ ಮೇಲೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇಂತಹ ಮರಗಳನ್ನು ಸಾರ್ವಜನಿಕರು ಗಮನಿಸಿದಾಗ ಅರಣ್ಯ ಇಲಾಖೆ ಅಥವಾ ಮಹಾನಗರಪಾಲಿಕೆಗೆ ಮಾಹಿತಿ ನೀಡಬೇಕೆಂದು ವಲಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.

suddionenews

Recent Posts

ಹಿಂದೆ ಸರಿದಿದ್ದ ಹೊರಟ್ಟಿ‌ ಮತ್ತೆ ರಾಜೀನಾಮೆ ಮಾತಾಡಿದ್ದಾರೆ ; ಕಾರಣವೇನು ಗೊತ್ತಾ..?

    ಇತ್ತೀಚೆಗಷ್ಟೇ ಸದನದಲ್ಲಿ ಆದ ಬೆಳವಣಿಗೆಯಿಂದ ಬೇಸತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬಸವರಾಜ್ ಹೊರಟ್ಟಿ ಅವರು…

10 minutes ago

ಹೊಸ ಆರ್ಥಿಕ ವರ್ಷ ಪ್ರಾರಂಭ ; ಯಾವುದೆಲ್ಲ ಹೆಚ್ಚಳವಾಗಲಿದೆ..?

ಬೆಂಗಳೂರು; ಇಂದಿನಿಂದ ಹೊಸ ಆರ್ಥಿಕ ವರ್ಷ ಪ್ರಾರಂಭವಾಗಿದೆ. ಕೆಲವೊಂದರ ದರ ಏರಿಕೆಯನ್ನು ಜನರು ಅನುಭವಿಸಬೇಕಾಗುತ್ತದೆ. ಹಾಗಾದ್ರೆ ಯಾವುದೆಲ್ಲರ ದರ ಏರಿಕೆಯಾಗಿದೆ..?…

22 minutes ago

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ..? ಸುನೀತಾ ವಿಲಿಯಮ್ಸ್ ಕೊಟ್ಟ ಉತ್ತರವೇನು..?

ಸುಮಾರು ಒಂಭತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿದ್ದ ಸುನೀತಾ ವಿಲಿಯಮ್ಸ್ ಹಲವು ಸಂಶೋಧನೆಗಳನ್ನ ಮಾಡಿದ್ದಾರೆ. ಪ್ರತಿದಿನ ಏನಾದರೊಂದು ಕಂಡುಹಿಡಿಯುತ್ತಾ ಜೀವಿಸಿದ್ದಾರೆ.…

47 minutes ago

ಮೊಳಕಾಲ್ಮೂರು : ಭೀಕರ ರಸ್ತೆ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು…!

ಸುದ್ದಿಒನ್, ಮೊಳಕಾಲ್ಮೂರು, ಏಪ್ರಿಲ್. 01 : ತಾಲೂಕಿನ ಬೊಮ್ಮಕ್ಕನಹಳ್ಳಿಯಲ್ಲಿ ಇಂದು ಬೆಳ್ಳಂ ಬೆಳಿಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ…

3 hours ago

ಈ ರಾಶಿಯವರಿಗೆ ಗುರು ಬಲ ಬಂದಿದೆ ಮದುವೆ ಸಡಗರ ಕಂಡಿತು

ಈ ರಾಶಿಯವರಿಗೆ ಗುರು ಬಲ ಬಂದಿದೆ ಮದುವೆ ಸಡಗರ ಕಂಡಿತು, ಈ ರಾಶಿಯವರು ಯಾವುದೇ ಕಾರಣಕ್ಕೂ ಉದ್ಯೋಗದ ಸ್ಥಳ ಬದಲಾಯಿಸಬಾರದು,…

7 hours ago

ಈ ಪುಟಾಣಿಯ ಚಿಕಿತ್ಸೆಗೆ 16 ಕೋಟಿಯ ಅಗತ್ಯ ; ಕೈಜೋಡಿಸಿದ ಕಿಚ್ಚ ಸುದೀಪ್

ಬೆಂಗಳೂರು; ಮಕ್ಕಳೆಂದರೆ ಯಾವ ಪೋಷಕರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳಾದ ಮೇಲೆ ಅವರ ಉಜ್ವಲ ಭವಿಷ್ಯಕ್ಕಾಗಿಯೇ ಹೋರಾಡುತ್ತಾರೆ. ಅವರ…

17 hours ago