ಶಾಸಕರು ಮಾಡಬೇಕಾದ ಕೆಲಸವನ್ನು ನಾನೇ ಮಾಡ್ತಾ ಇದ್ದೀನಿ : ಜೆಡಿಎಸ್ ವಿರುದ್ಧ ಸಂಸದೆ ಸುಮಲತಾ ವಾಗ್ದಾಳಿ

suddionenews
1 Min Read

 

ಮಂಡ್ಯ: ಅಭಿವೃದ್ಧಿ ವಿಚಾರದಲ್ಲಿ ಸಂಸದೆ ಸುಮಲತಾ ಶಾಸಕರ ವಿರುದ್ಧ ಗರಂ ಆಗಿದ್ದಾರೆ. ಶಾಸಕರು ಮಾಡಬೇಕಾದ ಕೆಲಸಗಳನ್ನ ನಾನು ಮಾಡ್ತಿದ್ದೇನೆ. ಆದ್ರೆ ಕ್ರೆಡಿಟ್ ಮಾತ್ರ ಅವರು ತೆಗೆದುಕೊಳ್ಳುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಎಲ್ಲಿ ಹೋದರೂ ನನ್ನ ಬಳಿ ಸಮಸ್ಯೆಗಳನ್ನ ಹೊತ್ತು ತರ್ತಾರೆ. ನಾನು ಮಾಡಿದ ಕೆಲಸದ ಕ್ರೆಡಿಟ್ ಅವರು ತೆಗೆದುಕೊಳ್ಳುತ್ತಿದ್ದಾರೆ. ಸಂಸದೆಯಾಗಿ ಶಿಂಷಾ ನದಿಗೆ ಸೇರುವೆ ನಿರ್ಮಾಣ ಮಾಡಿದ್ದೇನೆ. ನಿತಿನ್ ಗಡ್ಕರಿಯನ್ನ ಎಷ್ಟು ಬಾರಿ ಭೇಟಿಯಾಗಿದ್ದೇನೆಂದು ಮೊದಲು ತಿಳಿಯಲಿ. ಈ ಬಗ್ಗೆ ಸಚಿವಾಲಯದಿಂದ ತಿಳಿದುಕೊಳ್ಳಬಹುದಾಗಿದೆ. ಅಲ್ಲಿ ಹೋಗಿ ತಿಳಿದುಕೊಳ್ಳಲಿ.

ಕ್ಷೇತ್ರದ ಸಮಸ್ಯೆಗೆ ಪರಿಹಾರ ಕೇಳಿದಾಗ ಗಡ್ಕರಿ ಸ್ಪಂದಿಸಿದ್ದಾರೆ.
ಶಾಸಕರಿಗೆ 2 ಕೋಟಿ ಅನುದಾನ ಸಿಗುತ್ತೆ. ಆದ್ರೆ ಕೆಲಸ ಮಾಡ್ತಿಲ್ಲ.
ನನಗೆ ಪ್ರತಿ ತಾಲೂಕಿಗೆ 40 ಲಕ್ಷ ಮಾತ್ರ ಸಿಗುತ್ತೆ. ಶಾಸಕರು ಕೆಲಸ ಮಾಡಿದ್ದರೆ ಜನರು ನನ್ನನ್ನು ಏಕೆ ಕೇಳುತ್ತಿದ್ದರು. ಇಂತಹ ರಾಜಕಾರಣಿಗಳಿಗೆ ಬುದ್ಧಿ ಕಲಿಸಲು ಜನ ಕಾಯುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *