Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತುಂಬಾ ಅನುಭವ ಇರುವ ರಾಜಕಾರಣಿಯಂತೆ ಸಲಹೆ ಕೊಟ್ಟರು, ಸ್ವೀಕರಿಸೋಣಾ : ನಿಖಿಲ್ ಬಗ್ಗೆ ಸುಮಲತಾ ವ್ಯಂಗ್ಯ

Facebook
Twitter
Telegram
WhatsApp

 

ದೆಹಲಿ: ಆತ್ಮಾವಲೋಕನ ಮಾಡಿಕೊಳ್ಳಬೇಕು ಅವರು. ಅವರದ್ದು ಏನು ಸಾಧನೆ, ಏನು ಕೊಡುಗೆ ಅನ್ನೋ ರೀತಿ ನಿಖಿಲ್ ಕುಮಾರಸ್ವಾಮಿ ಅವರು ಮಾತಾಡಿದ್ದರು. ಇದೀಗ ಆ ಮಾತಿಗೆ ಸಂಸದೆ ಸುಮಲತಾ ತಿರುಗೇಟು ಕೊಟ್ಟಿದ್ದಾರೆ.

ಮೊನ್ನೆ ನಿಖಿಲ್ ಕುಮಾರಸ್ವಾಮಿ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದರು. ರಾಜಕಾರಣದಲ್ಲಿ ಅನುಭವ ಇರುವಂತ ದೊಡ್ಡವರು ಹೇಗೆ ಸಲಹೆಯನ್ನ ಕೊಡುತಾರೆ ಆ ರೀತಿ ಒಂದು ಸಲಹೆಯನ್ನ ಕೊಟ್ಟಿದ್ದರು. ಅದು ಸಂತೋಷವೇ ನನಗೆ. ಚಿಕ್ಕವರಾದರೂ ಸರಿ ದೊಡ್ಡವರಾದರೂ ಸರಿ ನನ್ನಲ್ಲಿ ತಪ್ಪು ಅಂತ ಕಂಡು ಬಂದಿದ್ದನ್ನ ಹೇಳಿದ್ರೆ ಅದನ್ನ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ನನ್ನಲ್ಲಿ ತಪ್ಪಿದ್ರೆ ತಿದ್ದಿಕೊಳ್ಳುತ್ತೇನೆ.

ರವೀಂದ್ರ ಶ್ರೀಕಂಠಯ್ಯ ಅವರು ಮಾತಾಡಿದ್ದರು, ಅಂಬರೀಶ್ ಅವರು 25-30 ವರ್ಷ ಎಂಪಿ ಸ್ಥಾನದಲ್ಲಿದ್ದರು. ಮಂಡ್ಯ ಜಿಲ್ಲೆಯಂತು ಏನು ಅಭಿವೃದ್ಧಿಯಾಗಿಲ್ಲ. ಪಕ್ಕದ ಹಾಸನ ಜಿಲ್ಲೆಯೇ ಹೆಚ್ಚು ಅಭಿವೃದ್ಧಿಯಾಗಿದೆ ಎಂದಿದ್ದರು. ಆ ಮಾತಿಗೆ ನಾನು ಸ್ಪಷ್ಟನೆ ಕೊಡ್ತೀನಿ. ರವೀಂದ್ರ ಶ್ರೀಕಂಠಯ್ಯ ಅವರ ಕುಟುಂಬಸ್ಥರು ಹಲವಾರು ವರ್ಷ ರಾಜಕಾರಣದಲ್ಲಿ ಇರುವುದರಿಂದ ಸತ್ಯ ಏನು ಅನ್ನೋದನ್ನ ತಿಳಿದು ಮಾತಾನಾಡಬೇಕು.

ಅಂಬರೀಶ್ ಅವರು 25-30 ವರ್ಷ ರಾಜಕೀಯದಲ್ಲಿ ಇರಲಿಲ್ಲ. ಬರೀ 11 ವರ್ಷ ರಾಜಕಾರಣದಲ್ಲಿ ಇದ್ದವರು. ಮೂರು ಟೈಮ್ ಎಂಪಿ ಆಗಿದ್ದರು. ನಿಮ್ಮ ಪಕ್ಷದವರೆ ಎರಡು ಬಾರೀ ಮುಖ್ಯಮಂತ್ರಿಯಾಗಿದ್ದಾರೆ. ಅದರಲ್ಲಿ ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಹಾಸನ ಆಗಿದೆ ಎಂದಾಗ ನೀವೆ ಪಾಯಿಂಟ್ ಔಟ್ ಮಾಡಿದ ಹಾಗೇ ಅಯ್ತಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬಿ ಎನ್ ಚಂದ್ರಪ್ಪ ಪರ ಮತಯಾಚನೆ ಮಾಡಿ, ಮೋದಿ, ಅಮಿತ್ ಶಾ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಚಿತ್ರದುರ್ಗ: ಈ ತಿಂಗಳ 26 ಕ್ಕೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ರನ್ನ ಹೆಚ್ಚು ಮತಗಳಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡ್ತೀನಿ. ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಮೋದಿಯವರು ಪ್ರಧಾನಿಯಾಗಿದ್ದಾರೆ.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸುತ್ತೇವೆ: ಪ್ರಿಯಾಂಕಾಗಾಂಧಿ ಭರವಸೆ

ಚಿತ್ರದುರ್ಗ ಏ 23: ಕಾಡುಗೊಲ್ಲ ಸಮುದಾಯವನ್ನು ST ಗೆ ಸೇರಿಸಲು ಮೇಲದ ಮೇಲೆ ನಾವು ಕೇಂದ್ರಕ್ಕೆ ಕೇಳುತ್ತಲೇ ಇದ್ದೇವೆ. ಆದರೂ ಇದುವರೆಗೂ ಏಕೆ ಸ್ಪಂದಿಸುತ್ತಿಲ್ಲ ಮೋದಿಯವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು. ಇಲ್ಲಿ

ಪ್ರತೀ ಬಾರಿ ಭಾರತೀಯರನ್ನು ನಂಬಿಸಿ ಮೋಸ ಮಾಡೋದು ಮೋದಿಯವರಿಗೆ ರೂಢಿಯಾಗಿದೆ: ಸಿ.ಎಂ. ಸಿದ್ದರಾಮಯ್ಯ

ಚಿತ್ರದುರ್ಗ ಏ 23: ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಡಿ ದೇಶದ ರೈತರ 76 ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಮೋದಿ ಪ್ರಧಾನಿಯಾಗಿ ಅತ್ಯಂತ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ

error: Content is protected !!