ತುಂಬಾ ಅನುಭವ ಇರುವ ರಾಜಕಾರಣಿಯಂತೆ ಸಲಹೆ ಕೊಟ್ಟರು, ಸ್ವೀಕರಿಸೋಣಾ : ನಿಖಿಲ್ ಬಗ್ಗೆ ಸುಮಲತಾ ವ್ಯಂಗ್ಯ

suddionenews
1 Min Read

 

ದೆಹಲಿ: ಆತ್ಮಾವಲೋಕನ ಮಾಡಿಕೊಳ್ಳಬೇಕು ಅವರು. ಅವರದ್ದು ಏನು ಸಾಧನೆ, ಏನು ಕೊಡುಗೆ ಅನ್ನೋ ರೀತಿ ನಿಖಿಲ್ ಕುಮಾರಸ್ವಾಮಿ ಅವರು ಮಾತಾಡಿದ್ದರು. ಇದೀಗ ಆ ಮಾತಿಗೆ ಸಂಸದೆ ಸುಮಲತಾ ತಿರುಗೇಟು ಕೊಟ್ಟಿದ್ದಾರೆ.

ಮೊನ್ನೆ ನಿಖಿಲ್ ಕುಮಾರಸ್ವಾಮಿ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದರು. ರಾಜಕಾರಣದಲ್ಲಿ ಅನುಭವ ಇರುವಂತ ದೊಡ್ಡವರು ಹೇಗೆ ಸಲಹೆಯನ್ನ ಕೊಡುತಾರೆ ಆ ರೀತಿ ಒಂದು ಸಲಹೆಯನ್ನ ಕೊಟ್ಟಿದ್ದರು. ಅದು ಸಂತೋಷವೇ ನನಗೆ. ಚಿಕ್ಕವರಾದರೂ ಸರಿ ದೊಡ್ಡವರಾದರೂ ಸರಿ ನನ್ನಲ್ಲಿ ತಪ್ಪು ಅಂತ ಕಂಡು ಬಂದಿದ್ದನ್ನ ಹೇಳಿದ್ರೆ ಅದನ್ನ ಆತ್ಮಾವಲೋಕನ ಮಾಡಿಕೊಳ್ಳುತ್ತೇನೆ. ನನ್ನಲ್ಲಿ ತಪ್ಪಿದ್ರೆ ತಿದ್ದಿಕೊಳ್ಳುತ್ತೇನೆ.

ರವೀಂದ್ರ ಶ್ರೀಕಂಠಯ್ಯ ಅವರು ಮಾತಾಡಿದ್ದರು, ಅಂಬರೀಶ್ ಅವರು 25-30 ವರ್ಷ ಎಂಪಿ ಸ್ಥಾನದಲ್ಲಿದ್ದರು. ಮಂಡ್ಯ ಜಿಲ್ಲೆಯಂತು ಏನು ಅಭಿವೃದ್ಧಿಯಾಗಿಲ್ಲ. ಪಕ್ಕದ ಹಾಸನ ಜಿಲ್ಲೆಯೇ ಹೆಚ್ಚು ಅಭಿವೃದ್ಧಿಯಾಗಿದೆ ಎಂದಿದ್ದರು. ಆ ಮಾತಿಗೆ ನಾನು ಸ್ಪಷ್ಟನೆ ಕೊಡ್ತೀನಿ. ರವೀಂದ್ರ ಶ್ರೀಕಂಠಯ್ಯ ಅವರ ಕುಟುಂಬಸ್ಥರು ಹಲವಾರು ವರ್ಷ ರಾಜಕಾರಣದಲ್ಲಿ ಇರುವುದರಿಂದ ಸತ್ಯ ಏನು ಅನ್ನೋದನ್ನ ತಿಳಿದು ಮಾತಾನಾಡಬೇಕು.

ಅಂಬರೀಶ್ ಅವರು 25-30 ವರ್ಷ ರಾಜಕೀಯದಲ್ಲಿ ಇರಲಿಲ್ಲ. ಬರೀ 11 ವರ್ಷ ರಾಜಕಾರಣದಲ್ಲಿ ಇದ್ದವರು. ಮೂರು ಟೈಮ್ ಎಂಪಿ ಆಗಿದ್ದರು. ನಿಮ್ಮ ಪಕ್ಷದವರೆ ಎರಡು ಬಾರೀ ಮುಖ್ಯಮಂತ್ರಿಯಾಗಿದ್ದಾರೆ. ಅದರಲ್ಲಿ ಮಂಡ್ಯ ಜಿಲ್ಲೆ ಅಭಿವೃದ್ಧಿಯಾಗಿಲ್ಲ ಹಾಸನ ಆಗಿದೆ ಎಂದಾಗ ನೀವೆ ಪಾಯಿಂಟ್ ಔಟ್ ಮಾಡಿದ ಹಾಗೇ ಅಯ್ತಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *