ಚಿತ್ರದುರ್ಗ, ಜ, 16, ಚಿತ್ರದುರ್ಗದ ಬಸವೇಶ್ವರ ವಧು ವರರ ಮಾಹಿತಿ ಕೇಂದ್ರದ ವತಿಯಿಂದ ರಾಜ್ಯಮಟ್ಟದ ಸರ್ವಧರ್ಮ ವಧು ವರರ ಸಮಾವೇಶವನ್ನು ಇದೇ ತಿಂಗಳ 21ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಕೇಂದ್ರದ ಸಂಚಾಲಕ ಹಾಗೂ ವ್ಯವಸ್ಥಾಪಕರೂ ಆದ ಜೆ.ಎಂ. ಜಂಬಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ತಿಂಗಳ 22ನೇ ತಾರೀಕು ಬೆಳಿಗ್ಗೆ 11ಗಂಟೆಗೆ ಭಾನುವಾರ ಬೆಂಗಳೂರಿನ ಗಾಂಧಿನಗರದ, ಎರಡನೇ ಮುಖ್ಯ ರಸ್ತೆಯಲ್ಲಿರುವ ಮಹಾರಾಷ್ಟ್ರ ಮಂಡಳದ ಸಭಾಂಗಣದಲ್ಲಿ ನಡೆಯಲಿದೆ. ಸಮಾವೇಶದ ದಿವ್ಯ ಸಾನಿಧ್ಯವನ್ನು ಬೆಂಗಳೂರು ಸರ್ಪ ಭೂಷಣ ಶಿವಯೋಗಿಗಳ ಮಠದ ಶ್ರೀ ಮಲ್ಲಿಕಾರ್ಜುನ ಮಸ್ವಾಮಿಗಳವರು ಹಾಗೂ ಬೆಳಗಾವಿ ಜಿಲ್ಲೆ ಶಿರಸಂಗಿ ಮಹಲಿಂಗೇಶ್ವರಮಠದ ಶ್ರೀಬಸವ ಮಹಾಂತ ಮಹಾಸ್ವಾಮಿಗಳು ವಹಿಸಲಿದ್ದಾರೆಂದು ತಿಳಿಸಿದ್ದಾರೆ.
ಈ ಮಾಹಿತಿ ಕೇಂದ್ರವು ಕಳೆದ 1996-97ನೇ ಇಸವಿಯಿಂದ ಪ್ರಾರಂಭಗೊಂಡು ಇಲ್ಲಿಯವರೆಗೂ ಇಂತಹ ಸಮಾವೇಶಗಳನ್ನು ರಾಜ್ಯದ ವಿವಿಧಡೆ ನಡೆಸಿ ಹಲವರಿಗೆ ಸಹಕಾರಿಯಾಗಿದೆ ಎಂದಿರುವ ಅವರು ಒಂದು ಜಾತಿ,
,ಜನಾಂಗ, ಧರ್ಮದವರಿಗೆ ಮಾತ್ರ ಸೀಮಿತವಾಗಿರದೆ ಎಲ್ಲರನ್ನೊಳಗೊಂಡ ವಧು ಹಾಗೂ ವರರ, ಪರಸ್ಪರ, ಭೇಟಿ ಚರ್ಚೆ ನಡೆದು ಮುಂದೆ ಒಪ್ಪಿಕೊಂಡು ಕಲ್ಯಾಣ ಮಹೋತ್ಸವಗಳು ನಡೆಯಲು ಒಂದು ವೇದಿಕೆಯಾಗಿದೆ. ಎಷ್ಟೋ ಮದುವೆಗಳು ಈಗಾಗಲೇ ನಡೆದಿವೆ.ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಲು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಜೆ.ಎಂ.ಜಂಬಯ್ಯ, ಸಂಚಾಲಕರು, ಮೊಬೈಲ್ 9980658625 ಸಂಪರ್ಕಿಸಲು ಕೋರಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…