ಬೆಂಗಳೂರು: ಅಪ್ಪು ಅವರನ್ನ ಯಾರು ಮರೆಯೋದಕ್ಕೆ ಸಾಧ್ಯ.. ಯಾರು ನೆನೆಯದೆ ಇರಲು ಸಾಧ್ಯವೇಳಿ. ಅಂಥ ಅಪರಂಜಿಯ ಗುಣ ಉಳ್ಳವರು ನಮ್ಮ ಅಪ್ಪು. ಆದ್ರೆ ಅವರಿಲ್ಲ ಅನ್ನೋ ನೋವು ಎಲ್ಲರನ್ನು ಅಷ್ಟೇ ಬಾಧಿಸುತ್ತಿದೆ. ಅದು ಬರೀ ಸ್ಯಾಂಡಲ್ವುಡ್ ಗೆ ಮಾತ್ರವಲ್ಲ.. ಬರೀ ಕನ್ನಡಿಗರಿಗೆ ಮಾತ್ರವಲ್ಲ. ಇದಕ್ಕೆ ಉದಾಹರಣೆ ಅಪ್ಪು ಎಲ್ಲರ ಜೊತೆಗು ಇರುತ್ತಿದ್ದ ರೀತಿ, ಹೊಂದಿದ್ದ ಬಾಂಧವ್ಯದ ರೀತಿ. ಇದೀಗ ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಅಪ್ಪು ಅವರನ್ನ ನೆನೆದು ಭಾವುಕರಾಗಿದ್ದಾರೆ.
ಇಂದು ರಾಜಮೌಳಿ ನಿರ್ದೇಶನದ ನೆಕ್ಸ್ಟ್ ಸಿನಿಮಾ ಆರ್ ಆರ್ ಆರ್ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ಹಿನ್ನೆಲೆ ಪುನೀತ್ ರಾಜ್ ಕುಮಾರ್ ಅವರ ಮನೆಗೂ ಭೇಟಿ ನೀಡಿದ್ದಾರೆ. ರಾಜಮೌಳಿ ಜೊತೆಗೆ ಅವರ ಪತ್ನಿ ರಮಾ ರಾಜಮೌಳಿ ಕೂಡ ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಜಮೌಳಿ, ಅವರು ಇಲ್ಲ ಅನ್ನೋದನ್ಬ ಊಹಿಸಿಕೊಳ್ಳೋದಕ್ಕೂ ಸಾಧ್ಯವಾಗ್ತಾ ಇಲ್ಲ. ಅವರಿಲ್ಲ ಅನ್ನೋದನ್ನ ಸ್ವೀಕರಿಸೋಕು ಆಗ್ತಾ ಇಲ್ಲ. ಅವರನ್ನ ಭೆರಟಿಯಾದಾಗ ಅವರೊಬ್ಬ ಸ್ಟಾರ್ ಅಂತ ಅನ್ನೊಸುತ್ತಲೇ ಇರಲಿಲ್ಲ. ಹೇಗೆ ಬದುಕಬೇಕು, ಹೇಗೆ ಸಾಮಾಜಿಕ ಕೆಲಸಗಳನ್ನ ಮಾಡಬೇಕು ಎಂಬುದು ಅವರಿಂದ ಕಲಿಯಬೇಕು. ಅವರ ಸಾಮಾಜಿಕ ಕಾರ್ಯಗಳು ಜಗತ್ತಿಗೆ ತಿಳಿದಿದೆ ಎಂದು ಅಪ್ಪು ಅವರನ್ನ ರಾಜಮೌಳಿ ನೆನೆದಿದ್ದಾರೆ.
ಮಂಡ್ಯ: ಇತ್ತೀಚೆಗೆ ಸಾಲದಿಂದ ಮನನೊಂದು ಮೈಸೂರಿನ ವಿಶ್ವೇಶ್ವರಯ್ಯ ನಗರ ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ…
ಚಿತ್ರದುರ್ಗ ಫೆ. 24 : ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಮಾ. 01…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ತಾಂತ್ರಿಕ ಸಹಾಯಕರಾಗಿ…
ಚಿತ್ರದುರ್ಗ ಫೆ. 24 : ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿ ಮಾಡಿ,…
ಮೈಸೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿಗೆ ಭೇಟಿ ನೀಡಿದ್ದಾರೆ. ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ನಡೆಸುತ್ತಿರುವ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…