ಅವರನ್ನ ಭೇಟಿಯಾದ್ರೆ ಸ್ಟಾರ್ ಭೇಟಿಯಾಗಿದ್ದೀವಿ ಅಂತ ಅನ್ನಿಸ್ತಿರಲಿಲ್ಲ : ಅಪ್ಪು ನೆನೆದ ಎಸ್ ಎಸ್ ರಾಜಮೌಳಿ

 

ಬೆಂಗಳೂರು: ಅಪ್ಪು ಅವರನ್ನ ಯಾರು ಮರೆಯೋದಕ್ಕೆ ಸಾಧ್ಯ.. ಯಾರು ನೆನೆಯದೆ ಇರಲು ಸಾಧ್ಯವೇಳಿ. ಅಂಥ ಅಪರಂಜಿಯ ಗುಣ ಉಳ್ಳವರು ನಮ್ಮ ಅಪ್ಪು. ಆದ್ರೆ ಅವರಿಲ್ಲ ಅನ್ನೋ ನೋವು ಎಲ್ಲರನ್ನು ಅಷ್ಟೇ ಬಾಧಿಸುತ್ತಿದೆ. ಅದು ಬರೀ ಸ್ಯಾಂಡಲ್ವುಡ್ ಗೆ ಮಾತ್ರವಲ್ಲ.. ಬರೀ ಕನ್ನಡಿಗರಿಗೆ ಮಾತ್ರವಲ್ಲ. ಇದಕ್ಕೆ ಉದಾಹರಣೆ ಅಪ್ಪು ಎಲ್ಲರ ಜೊತೆಗು ಇರುತ್ತಿದ್ದ ರೀತಿ, ಹೊಂದಿದ್ದ ಬಾಂಧವ್ಯದ ರೀತಿ. ಇದೀಗ ಬಾಹುಬಲಿ ಖ್ಯಾತಿಯ ನಿರ್ದೇಶಕ ಎಸ್ ಎಸ್ ರಾಜಮೌಳಿ ಅಪ್ಪು ಅವರನ್ನ ನೆನೆದು ಭಾವುಕರಾಗಿದ್ದಾರೆ.

ಇಂದು ರಾಜಮೌಳಿ ನಿರ್ದೇಶನದ ನೆಕ್ಸ್ಟ್ ಸಿನಿಮಾ ಆರ್ ಆರ್ ಆರ್ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ಹಿನ್ನೆಲೆ ಪುನೀತ್ ರಾಜ್ ಕುಮಾರ್ ಅವರ ಮನೆಗೂ ಭೇಟಿ ನೀಡಿದ್ದಾರೆ. ರಾಜಮೌಳಿ ಜೊತೆಗೆ ಅವರ ಪತ್ನಿ ರಮಾ ರಾಜಮೌಳಿ ಕೂಡ ಆಗಮಿಸಿದ್ದರು. ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಜಮೌಳಿ, ಅವರು ಇಲ್ಲ ಅನ್ನೋದನ್ಬ ಊಹಿಸಿಕೊಳ್ಳೋದಕ್ಕೂ ಸಾಧ್ಯವಾಗ್ತಾ ಇಲ್ಲ. ಅವರಿಲ್ಲ ಅನ್ನೋದನ್ನ ಸ್ವೀಕರಿಸೋಕು ಆಗ್ತಾ ಇಲ್ಲ. ಅವರನ್ನ ಭೆರಟಿಯಾದಾಗ ಅವರೊಬ್ಬ ಸ್ಟಾರ್ ಅಂತ ಅನ್ನೊಸುತ್ತಲೇ ಇರಲಿಲ್ಲ. ಹೇಗೆ ಬದುಕಬೇಕು, ಹೇಗೆ ಸಾಮಾಜಿಕ ಕೆಲಸಗಳನ್ನ ಮಾಡಬೇಕು ಎಂಬುದು ಅವರಿಂದ ಕಲಿಯಬೇಕು. ಅವರ ಸಾಮಾಜಿಕ ಕಾರ್ಯಗಳು ಜಗತ್ತಿಗೆ ತಿಳಿದಿದೆ ಎಂದು ಅಪ್ಪು ಅವರನ್ನ ರಾಜಮೌಳಿ ನೆನೆದಿದ್ದಾರೆ.

suddionenews

Recent Posts

ಮೈಸೂರಿನ ಘಟನೆ ಮಾಸುವ ಮುನ್ನವೇ ವಿಸಿ ನಾಲೆಗೆ ಹಾರಿದ ಒಂದೇ ಕುಟುಂಬದ ಮೂವರು..!

ಮಂಡ್ಯ: ಇತ್ತೀಚೆಗೆ ಸಾಲದಿಂದ ಮನನೊಂದು ಮೈಸೂರಿನ ವಿಶ್ವೇಶ್ವರಯ್ಯ ನಗರ ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ…

39 minutes ago

ಮಾರ್ಚ್ 01 ರಂದು ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಚಿತ್ರದುರ್ಗ ಫೆ. 24 : ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಮಾ. 01…

2 hours ago

ನರೇಗಾ : ಕರ್ತವ್ಯಕ್ಕೆ ಗೈರಾದ ತಾಂತ್ರಿಕ ಸಹಾಯಕರ ಬಿಡುಗಡೆ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ತಾಂತ್ರಿಕ ಸಹಾಯಕರಾಗಿ…

2 hours ago

ಕರ ವಸೂಲಾತಿಯಲ್ಲಿ ನಿರ್ಲಕ್ಷ್ಯ : ಮೂವರು ಪಿಡಿಒ ಗಳ ವಾರ್ಷಿಕ ವೇತನ ಬಡ್ತಿಗೆ ತಡೆ

ಚಿತ್ರದುರ್ಗ ಫೆ. 24 : ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿ ಮಾಡಿ,…

2 hours ago

ಮೈಸೂರಲ್ಲಿ ವಿಜಯೇಂದ್ರ : ಭೇಟಿಗೆ ಓಡಿ ಬಂದ ಪ್ರತಾಪ್ ಸಿಂಹ : ಇವರ್ಯಾರ ಬಣ ಎಂಬುದೇ ದೊಡ್ಡ ಪ್ರಶ್ನೆ..!

    ಮೈಸೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿಗೆ ಭೇಟಿ ನೀಡಿದ್ದಾರೆ. ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ನಡೆಸುತ್ತಿರುವ…

2 hours ago

ಚಿತ್ರದುರ್ಗ APMC | ಶೇಂಗಾ, ಕಡಲೆ, ಸೂರ್ಯಕಾಂತಿ ಸೇರಿದಂತೆ ಇತರೆ ಉತ್ಪನ್ನಗಳ ಫೆಬ್ರವರಿ 24 ರ ಮಾರುಕಟ್ಟೆ ಧಾರಣೆ ವಿವಿರ ಇಲ್ಲಿದೆ…!

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…

2 hours ago