Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾರ್ಚ್ 17 ರಂದು ಹೊರಕೇರಿದೇವರಪುರದಲ್ಲಿ ಶ್ರೀಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ

Facebook
Twitter
Telegram
WhatsApp

 

ಚಿತ್ರದುರ್ಗ, ಮಾರ್ಚ್ 11: ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊರಕೇರಿದೇವರಪುರ ಪುಣ್ಯಕ್ಷೇತ್ರದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವವು ಮಾರ್ಚ್ 17ರಂದು ಮಧ್ಯಾಹ್ನ 3.30 ರಿಂದ 4.30 ರವರೆಗೆ ನಡೆಯಲಿದೆ.

ಶ್ರೀಲಕ್ಷೀನರಸಿಂಹಸ್ವಾಮಿ ಜಾತ್ರೆಯು ಈಗಾಗಲೇ ಮಾರ್ಚ್ 10 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 20 ರವರೆಗೆ ನಡೆಯಲಿದೆ.

ಮಾರ್ಚ್ 10ರ ಬೆಳಿಗ್ಗೆ ಅಂಕುರಾರ್ಪಣೆ, ರಾತ್ರಿ ಹರಣಿ ಕೊಡುವ ಸೇವೆ, 11ರಂದು ಬೆಳಿಗ್ಗೆ ಧ್ವಜಾರೋಹಣ, ಪೀಠೋತ್ಸವ, ರಾತ್ರಿ ಪೀಠೋತ್ಸವ ಬೇರಿ ತಾಂಡವ, 12ರಂದು ಬೆಳಿಗ್ಗೆ  ಪಲ್ಲಕ್ಕಿ ಉತ್ಸವ, ರಾತ್ರಿ ಸಿಂಹೋತ್ಸವ, 13ರಂದು ಬೆಳಿಗ್ಗೆ ಪಲ್ಲಕ್ಕಿ ಉತ್ಸವ, ಚೌಕಿ ಉತ್ಸವ,ರಾತ್ರಿ ಹನುಮಮಂತೋತ್ಸವಕ್ಕೆ ಸ್ವಾಮಿ ಆಗಮನ, ಹನುಮಂತೋತ್ಸವ,  14ರಂದು ಬೆಳಿಗ್ಗೆ ಚೌಕಿ ಉತ್ಸವ, ರಾತ್ರಿ ಹನುಮಂತೋತ್ಸವ, 15ರಂದು ಬೆಳಿಗ್ಗೆ  ಶೇಷೋತ್ಸವ, ರಾತ್ರಿ ಮೊದಲ ಮೀಸಲು ಮತ್ತು ಶೇಷೋತ್ಸವ ಮತಿಘಟ್ಟ ಗ್ರಾಮಸ್ಥರಿಂದ, 16ರಂದು ಬೆಳಿಗ್ಗೆ ಗರುಡೋತ್ಸವ, ರಾತ್ರಿ ಗರುಡೋತ್ಸವ, ರಾತ್ರಿ 10.30ಕ್ಕೆ ಕಲ್ಯಾಣೋತ್ಸವ ನಡೆಯಲಿದೆ.

ಮಾರ್ಚ್ 17ರಂದು ಬೆಳಿಗ್ಗೆ ಆನೆ ಉತ್ಸವ,  ಮಧ್ಯಾಹ್ನ 3.30 ರಿಂದ 4.30 ಗಂಟೆಯರೆಗೆ ಸಲ್ಲುವ ವೃಶ್ಚಿಕಾ ಲಗ್ನದ ಶುಭ ಪುಬ್ಭಾ ನಕ್ಷತ್ರದ ಶುಭಾಂಶದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಬಳಿಕ ಪಾನಕ ಪೂಜಾ ವಸಂತೋತ್ಸವ, ಅನ್ನ ಸಂತರ್ಪಣೆ ಇರಲಿದೆ.

ಮಾರ್ಚ್ 18 ರಂದು ಬೆಳಿಗ್ಗೆ  ಭೂತಬಲಿ ಸೇವಾ, ಧೂಳೋತ್ಸವ, ಪೀಠೋತ್ಸವ, ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಚೌಕಿ ಉತ್ಸವ, ಅನ್ನಸಂತರ್ಪಣೆ, ಉಯ್ಯಾಲೋತ್ಸವ, ಚೌಕಿ ಉತ್ಸವ, ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿ ಅಶ್ವವಾಹನೋತ್ಸವ ಪಾರ್ವಟೋತ್ಸವ ಇರಲಿದೆ.

ಮಾರ್ಚ್ 19 ರಂದು ಅವಭೃಥ ಪಲ್ಲಕ್ಕಿ ಉತ್ಸವ, ಸಂತರ್ಪಣೆ, ಪೀಠೋತ್ಸವ ನಡೆಯಲಿದೆ. ಮಾರ್ಚ್ 19 ರಂದು ನವಿಲೋತ್ಸವಕ್ಕೆ ಸ್ವಾಮಿಯು ಆಗಮಿಸಲಿದ್ದು ರಾತ್ರಿ 9:30ಕ್ಕೆ  ಹೂವಿನ ಪಲ್ಲಕ್ಕಿ ಮಹೋತ್ಸವ  ನಡೆಯಲಿದೆ. ಮಾರ್ಚ್ 20ರಂದು  ಶಯನೋತ್ಸವ, ರಥಕ್ಕೆ ಅರಿಶಿನ, ಕುಂಕುಮ ಸೇವೆ ನೇರವೇರಲಿದೆ.

ಬ್ರಹ್ಮರಥೋತ್ಸವದಲ್ಲಿ ಹೊಳಲ್ಕೆರೆ ಶಾಸಕರು ಹಾಗೂ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಂ ಚಂದ್ರಪ್ಪ, ಜಿಲ್ಲಾಧಿಕಾರಿ ಕವಿತ ಎಸ್ ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಈ. ಬಾಲಕೃಷ್ಣ, ಉಪ ವಿಭಾಗಾಧಿಕಾರಿ ಆರ್ ಚಂದ್ರಯ್ಯ, ತಹಶೀಲ್ದಾರ್ ಎಂ.ರಮೇಶ ಚಾರಿ, ಮುಜಾರಾಯಿ ತಹಶೀಲ್ದಾರ್ ಬಿ.ಎಸ್ ವೆಂಕಟೇಶ್, ದೇವಸ್ಥಾನದ ಆಡಳಿತಧಿಕಾರಿ ಹಾಗೂ ಉಪ ತಹಶೀಲ್ದಾರ್ ಅಶೋಕ, ತಾಳ್ಯದ ರಾಜಸ್ವ ನಿರೀಕ್ಷಕರು ಎಂ.ಜಿ ವೆಂಕಟೇಶ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!