ನೊಂದಿರುವ ತಮ್ಮ ಬಂಧುಗಳ ಮನೆಯಲ್ಲಿ
ತಮಂಧವೇ ತುಂಬಿರುವಾಗ
ಒಂದು ಹಣತೆಯನ್ನು ಹಚ್ಚಿಡಲಾಗದ
ನಾವು, ದೇವರ ಹೆಸರಿನಲ್ಲಿ
ಲಕ್ಷದೀಪೋತ್ಸವ ನಡೆಸುತ್ತೇವೆ.
ಮೃಷ್ಟಾನ್ನ ಬೋಜನದ
ಜಿಡ್ಡಿನಲ್ಲೆ ಜಡ್ಡುಗಟ್ಟಿರುವ ನಮಗೆ
ಅಳುವ ಹಸುಗೂಸುಗಳ
ಹಸಿವಿನ ಸಂಕಟ
ಅರಿಯಲಾರದ ನಾವು
ದೇವರ ಹೆಸರಲ್ಲಿ
ಹಾಲಿನಭಿಷೇಕ ಮಾಡುತ್ತೇವೆ.
ಹತ್ತು ಜನ್ಮ ಹೊತ್ತು ತಿರುಗಿದರು
ಸವೆಯದ ಪಾಪದ ಹೊರೆಯನ್ನ
ಹರಿವ ಹೊಳೆಯಲ್ಲಿ
ತೊಳೆಯಲು ತವಕಿಸುತ್ತಾ
ನೊಂದವರಿಗೆ ನೆರವಾಗುವುದನ್ನೆ
ಮರೆತ ನಾವು
ದೇವರ ಹೆಸರಲ್ಲಿ
ಕಿರೀಟ ಕಂಠೀಹಾರ ಮಾಡಿಸುತ್ತೇವೆ.
ಕಾಣದ ದೇವರಿಗಾಗಿ
ಮಂದಿರ, ಮಸೀದಿ, ಇಗರ್ಚಿಗಳನು
ಕೆಡವಿ ಕಟ್ಟುವ ಉನ್ಮಾದದಲ್ಲಿ
ನಮ್ಮ ಎದೆಗಳೇ ಕಲ್ಲಾಗುತ್ತಿವೆ
ನೆತ್ತರಿಗೆ ನೆತ್ತರೇ ಉತ್ತರವೆಂಬ
ಉನ್ಮತ್ತಿನಲ್ಲಿ ಕೊಲ್ಲುವ ನಾವು,
ದೇವರ ಹೆಸರಲ್ಲಿ
ಪ್ರೀತಿಸುವುದನ್ನೇ ಮರೆತಿದ್ದೇವೆ.
ಕವಿ : ಮೋದೂರು ತೇಜ , ಚಳ್ಳಕೆರೆ,
ಮೊ : 9945562909
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15…
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…