ತಂದೆ ಬೈದಿದ್ದಕ್ಕೆ ಚಾಕುವಿನಿಂದ ಆತ್ಮಹತ್ಯೆ ಮಾಡಿಕೊಂಡ ಮಗ..!

suddionenews
1 Min Read

 

ಬೆಂಗಳೂರು: ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಮಕ್ಕಳನ್ನ ಅರ್ಥ ಮಾಡಿಕೊಂಡು, ಅವರ ತಪ್ಪನ್ನ ತಿದ್ದಬೇಕು. ತಂದೆ ತಾಯಿ ಹೇಳುವ ಬುದ್ದಿ ಮಾತನ್ನ ಮಕ್ಕಳೇನಾದರೂ ತಪ್ಪಾಗಿ ಅರ್ಥ ಮಾಡಿಕೊಂಡರೆ, ಸಾಕಷ್ಟು ಅನಾಹುತಗಳಾಗೋದು ಗ್ಯಾರಂಟಿ. ಅಂತದ್ದೊಂದು ಘಟನೆ ನಗರದ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

23 ವರ್ಷದ ಸೈಯದ್ ಸಾಯಿಲ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಮಗನಿಗೆ ತಂದೆ ಬೈದದ್ದೇ ಆತ್ಮಹತ್ಯೆಗೆ ಕಾರಣವಾಗಿದೆ. ಟಿವಿ ನೋಡುತ್ತಾ ಕುಳಿತಿದ್ದ ಸೈಯದ್ ಸಾಯಿಲ್ ಗೆ ಅವರ ತಂದೆ ಬಂದು ಬೈದಿದ್ದಾರೆ. ಯಾವಾಗಲೂ ಟಿವಿ ನೋಡಿಕೊಂಡು ಕೂತಿರು, ಕೆಲಸಕ್ಕೆ ಹೋಗಬೇಡ ಎಂದು.

ಈ ಮಾತಿನಿಂದ ಮನನೊಂದೋ ಅಥವಾ ಕೋಪಗೊಂಡಿನೋ ಗೊತ್ತಿಲ್ಲ. ಅಲ್ಲಿಂದ ಎದ್ದು ಹೋದವನು ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ರಾತ್ರಿ‌ ನಡೆದಿದೆ. ಘಟನಾ ಸ್ಥಳಕ್ಕೆ ಜೆಜೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *