ಕಾಂಗ್ರೆಸ್ ನಲ್ಲಿ ಯಾರೋ ಒಬ್ಬರು ಟಿಕೆಟ್ ಕೊಡಲ್ಲ : ದಿನೇಶ್ ಗುಂಡೂರಾವ್

suddionenews
1 Min Read

ಬೆಂಗಳೂರು: ಕೆಲಸ ಮಾಡದೆ ಇದ್ದರೆ ಚುನಾವಣೆಗಡ ನಿಲ್ಲಲು ಟಿಕೆಟ್ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ದಿನೇಶ್ ಗುಂಡೂರಾವ್, ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್ ನಲ್ಲಿ ಯಾರೋ ಒಬ್ಬರು ಟಿಕೆಟ್ ಕೊಡಲ್ಲ ಅಂತ ಹೇಳಿದರೆ ಆಗಲ್ಲ ಎಂದಿದ್ದಾರೆ.

ಟಿಕೆಟ್ ಘೋಷಿಸುವುದಕ್ಕೂ ಮುನ್ನ ಹೈಕಮಾಂಡ್ ಎಲ್ಲೆ ಅಭಿಪ್ರಾಯ ಪಡೆದು ಘೋಷಣೆ ಮಾಡಲಾಗುತ್ತದೆ. ಇಲ್ಲಿ ಜಿಲ್ಲಾ ಮಟ್ಟದಿಂದ, ರಾಜ್ಯಮಟ್ಟದಿಂದ ಅಭಿಪ್ರಾಯ ಹೇಳುತ್ತಾರೆ. ಸಮಿತಿ ಇರುತ್ತೆ, ಸ್ಕ್ರೀನಿಂಗ್ ಕಮಿಟಿ ಇರುತ್ತೆ. ಒಬ್ಬರಿಂದ ಡಿಸೈಡ್ ಮಾಡುವಂತದ್ದಲ್ಲ. ಎಲ್ಲಾರು ಸೇರಿ ಮಾಡುತ್ತಾರೆ ಎಂದಿದ್ದಾರೆ.

ಯಾರೋ ಒಬ್ಬರು ಟಿಕೆಟ್ ಘೋಷಣೆ ನನ್ನಿಂದಾನೆ ಅಂತ ಹೇಳುವ ಹಾಗಿಲ್ಲ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೊನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ್ದರು. ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಭಾಗವಹಿಸದೇ ಇದ್ದವರಿಗೆ ಟಿಕೆಟ್ ಸಿಗುವುದಿಲ್ಲ ಎಂದಿದ್ದರು. ಈ ವಿಚಾರ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *