ಕೇರಳದಲ್ಲಿ ಪೊಲೀಸರಿಗೆ ಭದ್ರತೆ ನೀಡುತ್ತಿವೆ ಹಾವುಗಳು..!

ಹಾವು ಕಂಡರೆ ಯಾರಿಗೆ ತಾನೇ ಭಯವಾಗುವುದಿಲ್ಲ. ತೀರಾ ಭಯಗೊಂಡವರು ಅದನ್ನು ಸಾಯಿಸಿಯೇ ಬಿಡುತ್ತಾರೆ. ಇನ್ನು ಕೆಲವರು ಅದನ್ನು ರಕ್ಷಿಸುವ ಕೆಲಸ ಮಾಡುತ್ತಾರೆ. ಆದರೆ ಹಾವುಗಳೇ ಮನುಷ್ಯರನ್ನು ರಕ್ಷಣೆ ಮಾಡುವುದನ್ನು ಕೇಳಿದ್ದೀರಾ. ಸಾಧ್ಯವೇ ಇಲ್ಲ ಅಲ್ವಾ. ಆದರೆ ಕೇರಳದಲ್ಲು ಹಾವುಗಳಿಂದ ಪೊಲೀಸರಿಗೆ ರಕ್ಷಣೆ ಸಿಕ್ಕಿದೆ.

ಕೇರಳದ ಇಡುಕಿಯಲ್ಲಿರುವ ಕುಂಬಮೆಟ್ಟು ಪೊಲೀಸ್ ಠಾಣೆ ಬಳಿ ಕೋತಿಗಳ ಕಾಟ ಹೆಚ್ಚಾಗಿತ್ತು. ಏನೇ ಮಾಡಿದರೂ ಕೋತಿಗಳ ಉಪಟಳವನ್ನು ನಿಲ್ಲಿಸಲು ಪೊಲೀಸರಿಂದ ಸಾಧ್ಯವಾಗಿರಲಿಲ್ಲ. ಆದರೆ ಈಗ ಹಾವುಗಳನ್ನು ಪೊಲೀಸ್ ಠಾಣೆಯ ಗೋಡೆ, ಮರ ಗಿಡ ಮೇಲೆಲ್ಲಾ ಬಿಟ್ಟಿರುವ ಪರಿಣಾಮ ಕೋತಿಗಳು ಬರುತ್ತಿಲ್ಲ. ಆದರೆ ನಿಜವಾದ ಹಾವುಗಳಲ್ಲ ಬದಲಿಗೆ, ಪ್ಲಾಸ್ಟಿಕ್ ಹಾವು.

ಈ ಐಡಿಯಾ ಕೊಟ್ಟಿದ್ದು, ಅದೇ ಊರಿನ ಒಬ್ಬ ರೈತ. ಈ ಬಗ್ಗೆ ಮಾತನಾಡಿದ ಆ ರೈತ, ನಮ್ಮ ಜಮೀನಿನಲ್ಲೂ ಇದೇ ರೀತಿಯ ಕೋತಿಗಳ ಹಾವಳಿ ಇತ್ತು. ನಾನು ಹಾವನ್ನು ತಂದು ಹಾಕಿದ್ದೆ. ಆಗ ಅವುಗಳ ಕಾಟ ಕಡಿಮೆಯಾಗಿದೆ. ಅದಕ್ಕೆ ಆ ಐಡಿಯಾ ಹೇಳಿಕೊಟ್ಟೆ ಎಂದು ಹೇಳಿದ್ದಾರೆ.

ಇನ್ಸ್ಪೆಕ್ಟರ್ ಪಿ ಕೆ ಲಾಲಾಬಾಯಿ ಮಾತನಾಡಿ, ಹಲವು ವರ್ಷಗಲಿಂದಲೂ ಕೋತಿಗಳ ಕಾಟ ಇತ್ತು. ಆದ್ರೆ ರಬ್ಬರ್ ಹಾವುಗಳನ್ನು ಬಳಸಿದ ಮೇಲೆ ಈಗ ಕೋತಿಗಳ ಕಾಟದಿಂದ ಮುಕ್ತಿ ಪಡೆದಿದ್ದೇದೆ. ಇನ್ನಷ್ಟು ರಬ್ಬರ್ ಹಾವುಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕಿದೆ ಎಂದು ಹೇಳಿದ್ದಾರೆ.

suddionenews

Recent Posts

ಈ ರಾಶಿಯವರು ಎಷ್ಟೇ ದುಡಿದರು ಹಣಕಾಸಿನ ಸಮಸ್ಯೆ ಬಗೆಹರಿಯುತ್ತಿಲ್ಲ

ಈ ರಾಶಿಯ ದಂಪತಿಗಳಿಗೆ ಸಂತಾನ ಭಾಗ್ಯ, ಈ ರಾಶಿಯವರು ಎಷ್ಟೇ ದುಡಿದರು ಹಣಕಾಸಿನ ಸಮಸ್ಯೆ ಬಗೆಹರಿಯುತ್ತಿಲ್ಲ, ಶನಿವಾರದ ರಾಶಿ ಭವಿಷ್ಯ…

37 minutes ago

ಇ-ಖಾತಾ ಪಡೆಯಲು ಸಹಾಯವಾಣಿ ಸ್ಥಾಪನೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಕರೆ

ಚಿತ್ರದುರ್ಗ. ಫೆ.21:  ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ, ಆದರೆ ಇದುವರೆಗೂ ಇ-ಖಾತಾ ಪಡೆಯದೇ ಇರುವ ಕಟ್ಟಡಗಳ…

10 hours ago

ಟೀಂ ಇಂಡಿಯಾ ಆಟಗಾರ ಚಹಲ್ ಹಾಗೂ ಧನುಶ್ರೀ ಡಿವೋರ್ಸ್ ಅಧಿಕೃತ : ಪರಿಹಾರ ಕೊಟ್ಟಿದ್ದು ಎಷ್ಟು ಕೋಟಿ..?

ಕಳೆದ ಕೆಲವು ದಿನಗಳಿಂದ ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಹಾಲ್ ಹಾಗೂ ನಟಿ ಧನುಶ್ರೀ ಅವರ ಡಿವೋರ್ಸ್ ವಿಚಾರ ಸಿಕ್ಕಾಪಟ್ಟೆ…

12 hours ago

ಮೈಸೂರು ಚಾಮುಂಡಿ ಬೆಟ್ಟದಲ್ಲಿ ನಿಯಂತ್ರಣವಾಗ್ತಿಲ್ಲ ಬೆಂಕಿ ..!

ಮೈಸೂರು: ತಾಯಿ ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳಿಂದ ಅವಸ್ಥೆಯಾಗಿದೆ. ಮೊದಲೇ ಬಿಸಿಲಿಗೆ ಒಣಗಿದ ಬೆಟ್ಟಕ್ಕೆ ಕಿಡಿತಾಕಿಸಿದ್ದಾರೆ. ಇದೀಗ ಆ ಕಿಡಿ ಜೋರಾಗಿಯೇ…

12 hours ago

ವಯೋ ನಿವೃತ್ತಿ ನಂತರ ಸಿಬ್ಬಂದಿ ಕರ್ತವ್ಯದಲ್ಲಿ ಮುಂದುವರಿಯುವುದು ಬೇಡ : ರವಿಕುಮಾರ್

ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 21 : ತಾಲ್ಲೂಕಿನ ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗೌರವಧನದ ಆಧಾರದ ಮೇಲೆ…

13 hours ago

ಹಸು, ಎತ್ತು ಇದ್ದ ಮನೆಗೆ ವಾಸ್ತು ಬೇಕಾಗಲ್ಲ : ಗೋ ಸೇವಾ ಪ್ರಮುಖ್ ಕುಮಾರಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ. 21…

13 hours ago