ಅಪ್ಪು ಫೋಟೋ ಮುಂದೆ ಪ್ರತ್ಯಕ್ಷನಾದ ನಾಗಪ್ಪ : ಅಲ್ಲೆ ಇದ್ದವರು ಶಾಕ್..!

1 Min Read

ಹುಬ್ಬಳ್ಳಿ: ಅಪ್ಪು.. ಅಪ್ಪು .. ಅಪ್ಪು.. ಇನ್ನು ಯಾರಿಗೂ ಆ ದುಃಖ, ನೋವು ತಡೆದುಕೊಳ್ಳಲಾಗ್ತಾ ಇಲ್ಲ.. ಮೊದಲ ದಿನಗಳಷ್ಟು ಕಾಡದೆ ಇದ್ದರು ಅಪ್ಪು ಇಲ್ಲ ಎಂದಾಗ ಆ ಕ್ಷಣದಲ್ಲಿ ಮತ್ತೆ ಆಘಾತವಾಗ್ತಿದೆ. ಅಯ್ಯೋ ಅಪ್ಪು ಇಲ್ಲ ಅನ್ನೋದನ್ನ ಅರಗಿಸಿಕೊಳ್ಳೋಕೆ ಸಾಧ್ಯವಿಲ್ಲ ಬಿಡಿ ಎಂತಿದ್ದಾರೆ.

ಈ ಮಧ್ಯೆ ಅಪ್ಪು ಮಾಡಿದ ಅದೆಷ್ಟು ಕಾಣದ ಸಹಾಯಗಳಿಂದ ಅಪ್ಪು ಇಂದು ದೇವರಾಗಿದ್ದಾರೆ. ಸಾಕಷ್ಟು ಜನ ಅವರ ಫೋಟೋಗಳನ್ನ ದೇವರ ಮನೆಯಲ್ಲಿಟ್ಟು ಪೂಜೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಇಂದು ಅಪ್ಪು ಫೋಟೋ ಮುಂದೆ ನಾಗಪ್ಪ ದರ್ಶನ ಕೊಟ್ಟು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಅಣ್ಣಾವ್ರು, ಶಿವಣ್ಣ, ಪುನೀತ್ ರಾಜ್ ಕುಮಾರ್ ಎಲ್ಲರು ಅಯ್ಯಪ್ಪ ಮಾಲೆ ಧರಿಸಿ, ಶವರಿಗೆ ಹೋಗುವ ಪದ್ಧತಿ ರೂಢಿ ಮಾಡಿಕೊಂಡಿದ್ರು. ಅಣ್ಣಾವ್ರು ಹಾಕಿಕೊಂಡ ದಾರಿಯಲ್ಲೇ ಮಕ್ಕಳು ನಡೆದುಕೊಂಡು ಬರ್ತಿದ್ದರು. ಆದ್ರೆ ಇಂದು ಅಪ್ಪು ಎಲ್ಲರನ್ನ ಬಿಟಗಟು ಹೋಗಿದ್ದಾರೆ. ಆದ್ರೆ ಅವರ ಭಕ್ತರು ಆ ಪದ್ಧತಿಗಳನ್ನ ಬಿಟ್ಟಿಲ್ಲ. ಹುಬ್ಬಳ್ಳಿಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆಯಲ್ಲಿ ಅಭಿಮಾನಿಗಳು ಅಪ್ಪು ಫೋಟೋವನ್ನು ಇಟ್ಟು ಪೂಜೆ ಮಾಡುತ್ತಿದ್ದರು. ಆ ವೇಳೆ ಅಪ್ಪು ಫೋಟೋ ಮುಂದೆ ಬಂದ ನಾಗಪ್ಪ, ಒಂದು ರೌಂಡ್ ಸುತ್ತು ಹಾಕಿದ್ದಾನೆ‌. ಈ ದೃಶ್ಯ ನೋಡಿ ಎಲ್ಲರು ಅಚ್ಚರಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *