ಅಂಬೇಡ್ಕರ್ ಅಷ್ಟು ಓದಿಬಿಟ್ಟಿದ್ದಾನಾ : ಪ್ರತಾಪ್ ಸಿಂಹಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ

suddionenews
1 Min Read

 

ಶಿವಮೊಗ್ಗ: ಜಿಲ್ಲಾ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದಿದ್ದಾರೆ. ಅವರಿಗೆ ಸಾಮಾನ್ಯ ಜ್ಞಾನ ಇದೆಯೋ ಇಲ್ಲವೋ. ಅರುಣ್ ಜೇಟ್ಲಿ ಯಾವ ಎಕನಾಮಿಸ್ಟ್ ಆಗಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಅರ್ಥಶಾಸ್ತ್ರಜ್ಞರ..? ಮೋದಿ ಏನು ಓದಿದ್ದಾರೆ. ಪ್ರೈಮ್ ಮಿನಿಸ್ಟರ್ ಆಗಿದ್ದಾರಲ್ಲ ಏನ್ ಓದಿದ್ದೀನಿ ಅಂತ ಹೇಳಲಿ. ನಾನು ಆಗಬಾರದು ಎಂಬುದನ್ನು ಹೇಳಲ್ಲ. ಆದರೆ ಅವರು ಏನು ಓದಿದ್ದಾರೆ. ಪ್ರಧಾನಮಂತ್ರಿ ಆಗಲಿಕ್ಕೆ ಎಲಿಜಿಬಲಿಟಿ ಇದೆ. ಆಗಲಿ ಬೇಡ ಎನ್ನಲ್ಲ.

ಸಿದ್ದರಾಮಯ್ಯ ಅವರ ಜೊತೆ ಚರ್ಚೆಗೆ ಸಿದ್ದರಿದ್ದೀವಿ. ಯಾರ್ ಯಾರನ್ನೋ ಕಳುಹಿಸುವುದು ಬೇಡ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಆ ಮಾತಿಗೆ ಸಿದ್ದರಾಮಯ್ಯ ಉತ್ತರಿಸಿದ್ದು, ನಾನಲ್ಲ ಆ ಚಾಲೆಂಜ್ ಎಸೆದಿದ್ದು. ಲಕ್ಷ್ಮಣ ಎಸೆದಿರುವುದು. ಅವರು ಬಿಇ ಗ್ರಾಜ್ಯುಯೃಟ್ ಇವರು ಏನು ಓದಿದ್ದಾರೆ. ಏನು ಅಂಬೇಡ್ಕರ್ ಅವರಷ್ಟು ಓದಿದ್ದಾರಾ..? ಮೊದಲು ಅವರ ಜೊತೆಗೆ ಚರ್ಚೆ ಮಾಡಲಿ, ನನ್ನ ಜೊತೆ ಅಲ್ಲ. ಏನು ಓದಿದ್ದಾರೆ. ಲೋಕಸಭಾ ಮೆಂಬರ್ ಆಗಿಬಿಟ್ಟಿದ್ದಾರಲ್ಲ.

ಕೇವಲ ಅವರು ಲಾ ಓದಿದ್ದಾರಷ್ಟೇ ಎಕಾನಮಿಸ್ಟ್ ಅಲ್ಲ ಎಂದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನಾನು ಎಲ್ಲಿಯೂ ಎಕಾನಾಮಿಸ್ಟ್ ಎಂದು ಹೇಳಿಕೊಂಡಿಲ್ಲ. ನಾನು ಲಾ ಗ್ರಾಜ್ಯೂಯೇಟ್ ತೆಗೆದುಕೊಂಡಿದ್ದೇನೆ. ನಾನು 13 ಬಜೆಟ್ ಮಂಡಿಸಿದ್ದೇನೆ. ಪ್ರತಾಪ್ ಸಿಂಹ ಎಷ್ಟು ಬಜೆಟ್ ಮಂಡಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *