ಬಾದಾಮಿಯವರು ಕರಿತಿದ್ದಾರೆ, ಚಾಮರಾಜಪೇಟೆಯವರು ಆಹ್ವಾನಿಸಿದ್ದಾರೆ : ಹಾಗಾದ್ರೆ ಸಿದ್ದರಾಮಯ್ಯ ನಡೆ ಯಾವ ಕಡೆ..?

suddionenews
1 Min Read

ಬಾಗಲಕೋಟೆ : ಮುಂದಿನ ವಿಧಾನಸಭಾ ಚುನಾವಣೆಗೆ ಒಂದು ವರ್ಷ ಮೂರು ತಿಂಗಳು ಬಾಕಿ‌ ಇರುವಾಗ್ಲೇ ಎಲ್ಲಾ ಪಕ್ಷದವರು ಅಲರ್ಟ್ ಆಗಿದ್ದಾರೆ. ಯಾರ್ ಯಾರು ಯಾವ್ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕೆಂಬುದನ್ನ ಈಗಲೇ ತಯಾರಿ ನಡೆಸಿಕೊಳ್ಳುತ್ತಿದ್ದಾರೆ.

 

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮುಂದಿನ ಚುನಾವಣೆಗೆ ಸಿದ್ಧರಾಗ್ತಾ ಇದ್ದು, ಎಲ್ಲಿ ನಿಲ್ತಾರೆ ಅನ್ನೋ ಕುತೂಹಲಕ್ಕೆ ಉತ್ತರ ನೀಡಿದ್ದಾರೆ. ಇಂದು ಜಿಲ್ಲೆಯಲ್ಲಿ ಮಾತನಾಡಿದ ಅವರು, ನಂಗೆ ಬಾದಾಮಿಯಲ್ಲೂ ಕರೀತಾ ಇದ್ದಾರೆ, ಚಾಮರಾಜಪೇಟೆಯಲ್ಲೂ ಆಹ್ವಾನ ನೀಡಿದ್ದಾರೆ ಎಂದಿದ್ದಾರೆ.

ಹೈಕಮಾಂಡ್ ಹೇಳಿದಂತೆ, ಅವರೇ ಸೂಚಿಸಿದ ಕ್ಷೇತ್ರದಲ್ಲಿ ನಾನು ಸ್ಪರ್ಧೆ ನಡೆಸುತ್ತೇನೆ. ಕೋಲಾರ, ಹುಣಸೂರು, ಚಿಕ್ಕನಾಯಕನಹಳ್ಳಿಯಲ್ಲೂ ಕೂಡ ಇಲ್ಲಿಂದಲೇ ಸ್ಪರ್ಧಿಸಿ ಎಂದಿದ್ದಾರೆ. ನಾನು ರಾಜ್ಯದ ತುಂಬೆಲ್ಲಾ ಪ್ತವಾಸ ಕೈಗೊಳ್ಳಬೇಕು ಎಂದಿದ್ದಾರೆ.

ಒಟ್ಟಾರೆ ಸಿದ್ದರಾಮಯ್ಯ ಅವರು ಸ್ಪರ್ಧಿಸುವ ಕ್ಷೇತ್ರ ಯಾವುದೆಂಬ ಕುತೂಹಲಕ್ಕೆ ಇನ್ನು ಉತ್ತರ ಸಿಕ್ಕಲಿಲ್ಲ. ಆದ್ರೆ ಸಿದ್ದರಾಮಯ್ಯ ಅವರ ಬೆಂಬಲಿಗರು ನಮ್ಮ ಕ್ಷೇತ್ರದಲ್ಲೇ ಸ್ಪರ್ಧಿಸಿ ಎಂಬ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಒಲವು ಯಾವ ಕಡೆ ಇದೆ, ಹೈಕಮಾಂಡ್ ಆ ಕಡೆಗೆ ಸೂಚಿಸುತ್ತಾ ಅನ್ನೋ ಕುತೂಹಲ ಹಾಗೆಯೇ ಉಳಿದಿದೆ.

Share This Article
Leave a Comment

Leave a Reply

Your email address will not be published. Required fields are marked *