ತಟ್ಟೆ-ಲೋಟ ಸಮೇತ ಸಿದ್ದರಾಮಯ್ಯ ಹಾಗೂ ಹೆಚ್ಡಿಕೆಗೆ RSS ಶಿಬಿರಕ್ಕೆ ಆಹ್ವಾನ..!

suddionenews
1 Min Read

ಬೆಂಗಳೂರು: ಇತ್ತಿಚೆಗೆ ಮಾಜಿ ಸಿಎಂ ಕುಮಾರಸ್ವಾಮಿ ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ದರು. ಇದೀಗ ಕುಮಾರಸ್ವಾಮಿ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಆರ್ ಎಸ್ ಎಸ್ ಕಾರ್ಯಕರ್ತನೊಬ್ಬ ತಮ್ಮ ಸಂಘಟನೆಗೆ ಆಹ್ವಾನಿಸಿದ್ದಾರೆ. ಅದು ತಟ್ಟೆ ಲೋಟ ಸಮೇತ ಬರುವಂತೆ ಸೂಚಿಸಲಾಗಿದೆ.

ಈ ಸಂಬಂಧ ಪತ್ರ ಬರೆದಿರುವ ಆರ್ಎಸ್ಎಸ್ ಕಾರ್ಯಕರ್ತ ಶಿವಕುಮಾರ್ ಆರಾಧ್ಯ, ಅಕ್ಟೋಬರ್ 17-25 ರವರೆಗೆ ಆರ್ಎಸ್ಎಸ್ ನ ಶಿಕ್ಷಾ ವರ್ಗಾ ಶಿಬಿರ ನಡೆಯಲಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ವಿದ್ಯಾಸಂಸ್ಥೆಯಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಸಂಸ್ಕಾರದ ಬಗ್ಗೆ ಹೇಳಿಕೊಡಲಾಗುತ್ತೆ. ಏಳೆ ದಿನದಲ್ಲಿ ನಿಮ್ಮನ್ನ ಗಟ್ಟಿಗೊಳಿಸಿ, ಈ ದೇಶಕ್ಕೆ ಮತ್ತು ಸಮಾಜಕ್ಕೆ‌ಆರ್ಎಸ್ಎಸ್ ನಿಮ್ಮನ್ನ ಅರ್ಪಣೆ ಮಾಡುತ್ತೆ.

ಈ ಶಿಬಿರಕ್ಕೆ ಬರುವಾಗ ಬುಡಬುಡಕೆ ಬುರಡೇ ದಾಸನ ಥರ ಕೈಬೀಸಿಕೊಂಡು ಬರಬೇಡಿ. ತಟ್ಟೆ, ಲೋಟ, ಬೆಡ್ ಶೀಟ್, ಎರಡು ಜೊತೆ ಬಟ್ಟೆ ಸೇರಿ ಹಲವು ಮೂಲಭೂತ ವಸ್ತುಗಳನ್ನ ತನ್ನ. ಶಿಬಿರದಲ್ಲಿ ಪಾಲ್ಗೊಂಡ ಬಳಿಕ ಆರ್ಎಸ್ಎಸ್ ಬಗ್ಗೆ ಮಾತಾಡಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *