ಮೆಟ್ರೋ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ನಾಳೆಯಿಂದ ದರ ಏರಿಕೆ..!

 

 

ಬೆಂಗಳೂರು: ಸಿಲಿಕಾನ್ ಸಿಟಿ ಮಂದಿಗೆ ಮೆಟ್ರೋ ನೆಮ್ಮದಿಯ ಪ್ರಯಾಣ ಅಂತಾನೇ ಹೇಳಬಹುದು. ದೂರಕ್ಕೆ ಹೋಗುವವರಿಗೆ ಟ್ರಾಫಿಕ್ ಸಮಸ್ಯೆಯ ಅನ್ನೋದು ಭೂತವಾಗಿ ಕಾಡುತ್ತದೆ. ಗಂಟೆಗಟ್ಟಲೇ ಟ್ರಾಫಿಕ್ ನಲ್ಲಿಯೇ ಸಿಲುಕಬೇಕಾಗುತ್ತದೆ. ಆದರೆ ಈ ಟ್ರಾಫಿಕ್ ಸಮಸ್ಯೆಯಿಂದ ಕೊಂಚ ನೆಮ್ಮದಿ ಕೊಡಿಸಿದ್ದು ಮಾತ್ರ ನಮ್ಮ ಮೆಟ್ರೋ. ಪ್ರತಿದಿನ ಸಾವಿರಾರು ಮಂದಿ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಾರೆ. ಇದೀಗ ಮೆಟ್ರೋ ಪ್ರಯಾಣ ದರವನ್ನು ಏರಿಸಿ, ಪ್ರತಿದಿ‌ನ ಓಡಾಡುವವರಿಗೆ ಶಾಕ್ ನೀಡಿದೆ ಬಿಎಂಆರ್ಸಿಎಲ್.

ಇಂದಿನ ದರ ನಾಳೆ ಬದಲಾಗಲಿದೆ. ನಾಳೆ ಅಂದ್ರೆ ಫೆಬ್ರವರಿ 9 ರಿಂದ ದರ ಬದಲಾಗಲಿದೆ. ಹಾಗಾದ್ರೆ ದರ ನಾಳೆಗೆ ಎಷ್ಟು ಏರಿಕೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ. ಕಿಲೋ ಮೀಟರ್ ಮೇಲೆ ದರ ಏರಿಕೆಯಾಗಿದೆ.

0-2 ಕಿಮೀಟರ್ ವರೆಗೆ ಸದ್ಯಕ್ಕೆ 10 ರೂಪಾಯಿ ಇದೆ. ಅದರ ದರ ಯಾವುದೇ ಏರಿಕೆಯಾಗಿಲ್ಲ. 2 ಕಿಲೋ ಮೀಟರ್ ವರೆಗೆ ಅದೇ ದರ ಇದೆ. ಉಳಿದಂತೆ 2-4 ಕಿ.ಮೀಗೆ 5 ರೂಪಾಯಿ ಹೆಚ್ಚಳವಾಗಿದೆ. 4-6 ಕಿ.ಮೀ 10 ರೂಪಾಯಿ ಏರಿಕೆಯಾಗಿದೆ. 6-8 ಕಿಮೀಗೆ 12 ರೂಪಾಯಿ, 8-10 ಕಿಮೀಗೆ 15 ರೂಪಾಯಿ, 10-15 ಕಿಮೀಗೆ 20 ರೂಪಾಯಿ, 15-20 ಕಿಮೀಗೆ 20 ರೂಪಾಯಿ, 20-25 ಕಿಮೀಗೆ 20 ರೂಪಾಯಿ, 25-30 ಕಿಮೀಗೆ 90 ರೂಪಾಯಿ ಹೆಚ್ಚಳವಾಗಿದೆ. ನಾಳೆಯಿಂದಾನೆ ಪರಿಷ್ಕೃತ ದರ ಜಾರಿಯಾಗಲಿದೆ. ಇನ್ನು ಸ್ಮಾರ್ಟ್ ಕಾರ್ಡ್ ಹೊಂದಿರುವವರಿಗೆ ಟಿಕೆಟ್ ದರದ ಮೇಲೆ ಶೇಕಡ 6ರಷ್ಟು ರಿಯಾಯಿತಿ ಸಿಗಲಿದೆ.

suddionenews

Recent Posts

ಸೋಲಿನ ಬಗ್ಗೆ ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು ?

ಸುದ್ದಿಒನ್ ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಸುಮಾರು 27 ವರ್ಷಗಳ ನಂತರ, ಕೇಸರಿ ಪಕ್ಷವು ತನ್ನ ಧ್ವಜವನ್ನು ದೆಹಲಿ ಗದ್ದುಗೆ…

5 hours ago

ಮೆದೇಹಳ್ಳಿ ಮಹಿಳೆ ಕೊಲೆ ಪ್ರಕರಣ : 24 ಗಂಟೆಯೊಳಗೆ ಆರೋಪಿ ಬಂಧನ

  ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 08 : ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮೆದೇಹಳ್ಳಿಯ ಮನೆಯೊಂದರಲ್ಲಿ ಪತ್ನಿಯನ್ನು ಸೀರೆಯಿಂದ…

6 hours ago

ದೆಹಲಿಯಲ್ಲಿ ಬಿಜೆಪಿ ಪಕ್ಷದ ಗೆಲುವಿಗೆ ಪ್ರಮುಖ ಕಾರಣಗಳೇ‌ನು ಗೊತ್ತಾ ?

ಸುದ್ದಿಒನ್ : ದೇಶದಲ್ಲಿ ಮೂರು ಅವಧಿಗೆ ಅಧಿಕಾರ ಗೆದ್ದಿದ್ದರೂ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಧ್ವಜ ಹಾರಿಸಲು ಸಾಧ್ಯವಾಗದ ಭಾರತೀಯ…

9 hours ago

ದೆಹಲಿಯಲ್ಲಿ ಬಿಜೆಪಿ ಗೆಲುವು : ಚಿತ್ರದುರ್ಗದಲ್ಲಿ ಕಾರ್ಯಕರ್ತರ ವಿಜಯೋತ್ಸವ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ. 08…

10 hours ago

ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್‌ ಗೆಲ್ಲಿಸುವುದು ನಮ್ಮ ಗುರಿ : ಕಾರೇಹಳ್ಳಿ ಉಲ್ಲಾಸ್

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ.ಫೆ. 08 :…

10 hours ago

ದಾವಣಗೆರೆ ವಿಶ್ವವಿದ್ಯಾಲಯ : ಎಸ್.ಜೆ.ಎಂ. ಕಾಲೇಜಿಗೆ 5 ನೇ ರ‌್ಯಾಂಕ್

ಚಿತ್ರದುರ್ಗ, ಫೆಬ್ರವರಿ. 08 : ದಾವಣಗೆರೆ ವಿಶ್ವವಿದ್ಯಾಲಯವು ನಡೆಸಿದ 2023-24ನೇ ಸಾಲಿನ ಬಿ.ಕಾಂ. ಪದವಿ ಪರೀಕ್ಷೆಯಲ್ಲಿ ನಗರದ ಚಂದ್ರವಳ್ಳಿಯ ಎಸ್.ಜೆ.ಎಂ.…

11 hours ago