ಅಯೋಧ್ಯೆಗೆ ಹೊರಟಿದ್ದ ಬೀದರ್ ಏಳು ಮಂದಿ ಸಾವು : ಗಾಯಾಳುಗಳ ಬಗ್ಗೆ ಸಿಎಂ ಬೊಮ್ಮಾಯಿ ಏನಂದ್ರು..?

suddionenews
1 Min Read

ಬೀದರ್: ಜಿಲ್ಲೆಯಿಂದ ಅಯೋಧ್ಯೆಗೆ ತೆರಳಿದ್ದವರು ದಾರಿ ಮಧ್ಯೆ ಅಪಘಾತದಿಂದಾಗಿ ಒಂದೇ ಮನೆಯ ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಕರಣದಲ್ಲಿ ಒಂಭತ್ತು ಮಂದಿ ಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟೆಂಪೋ ಟ್ರಾವೆಲ್ ಮತ್ತು ಲಾರಿ ಡಿಕ್ಕಿ ಹೊಡೆದ ಪರಿಣಾಮ ಉತ್ತರ ಪ್ರದೇಶದಲ್ಲಿ ಅಪಘಾತ ಸಂಭವಿಸಿತ್ತು. ಈ ಘಟನೆಯಲ್ಲಿ ಬೀದರ್ ನ ಏಳು ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಾತನಾಡಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಗಾಯಾಳುಗಳಿಗೆ ಚಿಕಿತ್ಸೆ ನೀಡುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆಂದು ಹೇಳುತ್ತೇನೆ ಎಂದಿದ್ದಾರೆ.

ಲಖೀಂಪುರದಲ್ಲಿ ನಡೆದ ಅಪಘಾತ ಎಲ್ಲರನ್ನು ಶಾಕ್ ಗೆ ದೂಡಿತ್ತು. ಅಯೋಧ್ಯೆಗೆ ಹೊರಟಿದ್ದವರು ಮಸಣ ಸೇರಿದ್ದಾರೆ. ಮೃತಪಟ್ಟ ಏಳು ಜನರ ಮೃತದೇಹವನ್ನು ಈಗಾಗಲೇ ಹೈದ್ರಾಬಾದ್ ಗೆ ರವಾನೆ ಮಾಡಲಾಗಿದೆ. ಹೈದ್ರಾಬಾದ್ ನಿಂದ ರಸ್ತೆ ಮಾರ್ಗದಲ್ಲಿ ಬೀದರ್ ಗೆ ರವಾನಿಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಗ್ಗೆ ಆರು ಗಂಟೆಗೆ ಈ ಅಪಘಾತ ನಡೆದಿತ್ತು. ಪ್ರವಾಸಕ್ಕೆಂದು 16 ಮಂದಿ ಹೊರಟಿದ್ದರು. ಅದರಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *