Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

‘ಚಾರುಲತಾ’ಗಾಗಿ‌ ಮಾಡಿದ್ದ ಸಾಲ ವಾಪಸ್ ನೀಡಲು ದ್ವಾರಕೀಶ್ ಗೆ ಒಂದು ತಿಂಗಳ ಗಡುವು..!

Facebook
Twitter
Telegram
WhatsApp

ಬೆಂಗಳೂರು: ಚಾರುಲತಾ ಸಿನಿಮಾಗಾಗಿ ಮಾಡಿದ್ದ ಸಾಲವನ್ನ ವಾಪಾಸ್ ನೀಡುವಂತೆ ಸೆಷನ್ ಕೋರ್ಟ್ ದ್ವಾರಕೀಶ್ ಗೆ ಒಂದು ತಿಂಗಳ ಗಡುವು ನೀಡಿದೆ. 2019 ರಲ್ಲಿ ಮಾಡಿದ್ದ ಸಾಲವದು. ಈ ಸಂಬಂಧ ಕೆಳ ನ್ಯಾಯಲಯದ ತೀರ್ಪು ಪ್ರಶ್ನಿಸಿ ಸೇಷನ್ ಕೋರ್ಟ್ ಗೆ ಹೋಗಿದ್ದರು. ಇದೀಗ ಅಲ್ಲಿಯೂ ದ್ವಾರಕೀಶ್ ಗೆ ಹಿನ್ನಡೆಯಾಗಿದೆ.

2019 ರಲ್ಲಿ ದ್ವಾರಕೀಶ್ ಚಾರುಲತಾ ಸಿನಿಮಾ ಮಾಡಲು ಕೆಸಿಎನ್ ಚಂದ್ರಶೇಖರ್ ಅವರಿಂದ 50 ಲಕ್ಷ ಸಾಲ ಪಡೆದಿದ್ದರು. ದ್ವಾರಕೀಶ್ ಅವರ ಸಂಬಂಧಿ ಸಂಜೀವ್ ಮಧ್ಯಸ್ಥಿಕೆ ವಹಿಸಿದ್ದರು. ಸಾಲ‌ ಪಡೆಯುವಾಗ ದ್ವಾರಕೀಶ್ ಚೆಕ್ ವೊಂದನ್ನ ನೀಡಿದ್ರು. ಆದ್ರೆ ಸಿನಿಮಾ ರಿಲೀಸ್ ಆದ್ಮೇಲು ಹಣ ವಾಪಾಸ್ ನೀಡದೆ ಸತಾಯಿಸುತ್ತಿದ್ದರು.

ಬಳಿಕ ಕೆಸಿಎನ್ ಚಂದ್ರಶೇಖರ್ ಕೋರ್ಟ್ ಮೊರೆ ಹೋಗಿದ್ದರು. ದ್ವಾರಕೀಶ್ ಅಲ್ಲಿಯೂ ಆ ಚೆಕ್ ನಾನ್ ಕೊಟ್ಟಿಲ್ಲ, ಸಹಿ ನನ್ನದಲ್ಲ ಅಂತ ವಾದ ಮಾಡಿದ್ರು. ಫೋರೆನ್ಸಿಕ್ ಲ್ಯಾಬ್ ನಲ್ಲಿ ಸಹಿ ದ್ವಾರಕೀಶ್ ಅವರದ್ದೇ ಎಂದು ದೃಢವಾಗಿತ್ತು. ಕೋರ್ಟ್ ಚಂದ್ರಶೇಖರ್ ಅವರಿಗೆ ಹಣ ಹಿಂತಿರುಗಿಸುವಂತೆ ದ್ವಾರಕೀಶ್ ಅವರಿಗೆ ಸೂಚಿಸಿತ್ತು. ಆ ಬಳಿಕವೂ ದ್ವಾರಕೀಶ್ ಕೆಳ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸೆಷನ್ ಕೋರ್ಟ್ ಗೆ ಹೋಗಿದ್ದರು. ಇದೀಗ ಅಲ್ಲಿಯೂ ದ್ವಾರಕೀಶ್ ಗೆ ಹಿನ್ನಡೆಯಾಗಿದೆ‌ ಕೆಳ‌ ನ್ಯಾಯಲಯದ ತೀರ್ಪನ್ನ ಸೆಷನ್ ಕೋರ್ಟ್ ಎತ್ತಿ ಹಿಡಿದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಭೇಟಿ | ಬಿ. ಫಾರಂಗೆ ಪೂಜೆ ಸಲ್ಲಿಸಿ ಪ್ರಚಾರ ಪ್ರಾರಂಭ

ಸುದ್ದಿಒನ್, ಚಿತ್ರದುರ್ಗ, ಮಾ.29: ದೇವರು ಮತ್ತು ಜನರ ಮೇಲೆ ನಂಬಿಕೆ ಹೊಂದಿದ ವ್ಯಕ್ತಿ ಎಂದೂ ಸಂಕಷ್ಟಕ್ಕೆ ಸಿಲುಕಿದ ಉದಾಹರಣೆ ಇಲ್ಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.

ಗೋ ಬ್ಯಾಕ್ ಗೋವಿಂದ ಕಾರಜೋಳ | ಬಿಜೆಪಿ ಅಭ್ಯರ್ಥಿಗೆ ಚಿತ್ರದುರ್ಗದಲ್ಲಿ ತಟ್ಟಿದ ಬಂಡಾಯದ ಬಿಸಿ..!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29  : ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಬಂಡಾಯದ ಬಿಸಿ ತಟ್ಟಿದೆ. ಟಿಜೆಟ್ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಚಿತ್ರದುರ್ಗಕ್ಕೆ ಆಗಮಿಸಿದ್ದರು. ಆದರೆ ಇದೆ ವೇಳೆ ಟಿಕೆಟ್

ಚಿತ್ರದುರ್ಗ | ಯಾದವ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ

  ಸುದ್ದಿಒನ್, ಚಿತ್ರದುರ್ಗ, ಮಾರ್ಚ್.29 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ರವರು ಯಾದವ ಸಂಸ್ಥಾನ ಮಹಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಬಸವ

error: Content is protected !!