SDA ನೌಕರ ಆತ್ಮಹತ್ಯೆ : PA ಹೆಸರು ಕೇಳಿ ಬಂದಿದ್ದಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಏನಂದ್ರು..?

ಬೆಳಗಾವಿ: ರುದ್ರಣ್ಣ ಆತ್ಮಹತ್ಯೆ ಕೇಸಲ್ಲಿ ಸಚಿವೆ ಲಕ್ಷ್ಮೀ ಹೆಬ್ವಾಳ್ಕರ್ ಪಿಎ ಹೆಸರು ಕೇಳಿ ಬಂದಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ಈ ಘಟನೆ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘಟನೆಗಳು ನಡೆಯಬಾರದು. ನಿನ್ನೆ ಮಾಧ್ಯಮದಲ್ಲಿ ನೋಡಿದಾಗಲೇ ಈ ವಿಚಾರ ಗೊತ್ತಾಗಿದ್ದು. ಸ್ವಲ್ಪ ಬ್ಯುಸಿ ಇದ್ದ ಕಾರಣ. ತನಿಖೆ ನಡೀತಾ ಇದೆ.

ಅದರ ಬಗ್ಗೆ ನನಗೆ ಏನು ಗೊತ್ತಿಲ್ಲ. ಮಾಧ್ಯಮದ ಸಹೋದರರಿಗೆ ರುದ್ರಣ್ಣ ಎಂಬುವವರು ಫೋನ್ ಮಾಡಿ, ಇದರ ಬಗ್ಗೆ ಮೇಡಂರಿಗೆ ಗಮನಕ್ಕಿಲ್ಲ ಎಂದು ಅವರೇ ಮಾತಾಡಿರುವುದನ್ನು ಮೀಡಿಯಾದವರು ಪ್ರಸಾರ ಮಾಡಿರೋದನ್ನ ನೋಡಿದ್ದೀನಿ. ನಾನ್ಯಾವತ್ತು ಅವರನ್ನು ಭೇಟಿಯಾಗಿಲ್ಲ. ಯಾವುದೇ ಒಂದು ಕೆಲಸಕ್ಕೂ ಕೂಡ ಅವರನ್ನ ಸಂಪರ್ಕ ಮಾಡಿಲ್ಲ. ವೈಯಕ್ತಿಕವಾಗಿಯೂ ಅವರನ್ನು ಭೇಟಿಯಾಗಿಲ್ಲ. ಈಗ ಏನಾಗಿದೆ ಅನ್ನೋದು ಪ್ರಾಥಮಿಕವಾಗಿ ತನಿಖೆ ನಡೀತಾ ಇದೆ.

ಮಂತ್ರಿಗಳು ಅಂದ್ಮೇಲೆ 10-15 ಪಿಎಗಳು ಇರ್ತಾರೆ. ಪ್ರತಿಯೊಬ್ಬರು ಕೂಡ ನಾವು ಹೇಳಿರುವಂತ ಕ್ಷೇತ್ರದ ಕೆಲಸಗಳನ್ನು ಆಗಬೇಕು ಎಂಬ ವಿಚಾರಕ್ಕೆ ಪಿಎ ಗಳನ್ನ ನೇಮಿಸಿರುತ್ತೇವೆ. ಸದ್ಯಕ್ಕೆ ಏನನ್ನು ಹೇಳುವುದಕ್ಕೆ ಬಯಸುವುದಿಲ್ಲ. ಇದು ತನಿಖೆಯ ಹಂತದಲ್ಲಿದೆ. ನಾನೊಬ್ಬ ಮಂತ್ರಿಯಾಗಿ, ಅದರಲ್ಲೂ ಒಂದು ಜವಾವ್ದಾರಿಯುತ ಸ್ಥಾನದಲ್ಲಿರುವ ಮಹಿಳೆಯಾಗಿ ಆ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡುತ್ತೇನೆ, ಸಾಂತ್ವಾನ ಹೇಳುತ್ತೇನೆ. ಮತ್ತೆ ನಿಷ್ಪಕ್ಷಪಾತವಾಗಿ ಈ ತನಿಖೆ ನಡೆಯಲಿ ಎಂದೇ ಬಯಸುತ್ತೇನೆ. ನಿರಂತರವಾಗಿ ನಾನು ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳ ಸಂಪರ್ಕದಲ್ಲಿದ್ದೇನೆ. ಊಹಾ ಪೋಹಗಳು ಶುರುವಾದರೆ ಹೆಚ್ಚಾಗುತ್ತಲೆ ಇರುತ್ತದೆ. ಹೀಗಾಗಿ ಕೂಲಂಕುಷವಾಗಿ ತನಿಖೆ ನಡೆಸಿ, ಬೇಗ ಸತ್ಉಅಸತಚಯತೆ ಹೊರಗೆ ಬರಬೇಕು. ಹಾಗೂ ಆ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದೇ ನಮ್ಮ ಆಸೆ ಕೂಡ ಎಂದಿದ್ದಾರೆ.

suddionenews

Recent Posts

ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ರದ್ದು ಮಾಡಿ : ಕರುನಾಡ ವಿಜಯಸೇನೆ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 23…

8 minutes ago

ಪರಮೇಶ್ವರ್ ಅಥವಾ ಮುನಿಯಪ್ಪನನ್ನು ಸಿಎಂ ಮಾಡಿ : ಗೋವಿಂದ ಕಾರಜೋಳ ಕಾಂಗ್ರೆಸ್ ಗೆ ಸಲಹೆ..!

ಬೆಳಗಾವಿ; ಕಾಂಗ್ರೆಸ್ ಸರ್ಕಾರದಲ್ಲಿ ಸದ್ಯ ಸಿಎಂ ಬದಲಾವಣೆ ಚರ್ಚೆ ಹಾಗೂ ಕೆಪಿಸಿಸಿ ಅಧ್ಯಕ್ಷರ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ನಲ್ಲಿ…

2 hours ago

ಅಪ್ಪು 11 ಕ್ರಿಕೆಟ್ ಕಪ್ – 2025 : ವಿಜೇತರಾಗಿ ರಾಹುಲ್ ತಂಡ

ಸುದ್ದಿಒನ್, ಚಿತ್ರದುರ್ಗ, ಫೆ.23: ಚಿತ್ರದುರ್ಗ ಅಪ್ಪು ಗೆಳೆಯರ ಬಳಗ ವತಿಯಿಂದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವಕ ಸ್ವಾಮೀಜಿರವರ ನೇತೃತ್ವದಲ್ಲಿ, ಹಳೇ…

2 hours ago

ಮಾರ್ಚ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆ : ಹೇಗಿದೆ ಇಲಾಖೆಯಿಂದ ತಯಾರಿ.. ಖಡಕ್ ರೂಲ್ಸ್ ಜಾರಿ..!

    ಬೆಂಗಳೂರು; ಇನ್ನೊಂದು ವಾರವಷ್ಟೇ ಶೈಕ್ಷಣಿಕ ವರ್ಷದ ಪರೀಕ್ಷೆಗಳು ಆರಂಭವಾಗುತ್ತವೆ. ಮಾರ್ಚ್ 1ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗುತ್ತಿವೆ.…

5 hours ago

ಭಾರತ – ಪಾಕ್ ಪಂದ್ಯಕ್ಕೆ ಕ್ಷಣಗಣನೆ : ಗೆದ್ದು ಬಾ ಇಂಡಿಯಾ : ಗೆಲುವಿಗಾಗಿ ವಿಶೇಷ ಪೂಜೆ…!

ಇಂದು ಭಾರತ ವರ್ಸಸ್ ಪಾಕ್ ಪಂದ್ಯ ನಡೆಯಲಿದೆ. ಸಾಂಪ್ರಾದಾಯಿಕ ವೈರಿಗಳನ್ನು ಕಟ್ಟಿ ಹಾಕಲು ಭಾರತ ತಂಡ ಸಜ್ಜಾಗಿದೆ. ಈ ಪಂದ್ಯವನ್ನ…

5 hours ago

IND vs PAK: ಕೆಲಹೊತ್ತಿನಲ್ಲಿ ಭಾರತ-ಪಾಕ್ ಪಂದ್ಯ : ದುಬೈನಲ್ಲಿ ಹವಾಮಾನ ಹೇಗಿದೆ ? ಪಿಚ್ ವರದಿಯ ಸಂಪೂರ್ಣ ಮಾಹಿತಿ ಇಲ್ಲಿದೆ…!

ಸುದ್ದಿಒನ್ : ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಇಂದು ಮಧ್ಯಾನ್ಹ 2.30 ಕ್ಕೆ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಭಾರತ vs ಪಾಕಿಸ್ತಾನ…

8 hours ago