ಸಾವರ್ಕರ್ ಫೋಟೋ ಕಸದ ತೊಟ್ಟಿ ಮೇಲೂ ಹಾಕಲು ಯೋಗ್ಯವಲ್ಲ : ಬಿ ಕೆ ಹರಿಪ್ರಸಾದ್

1 Min Read

ಬೆಂಗಳೂರು: ಸಾವರ್ಕರ್ ಬಗ್ಗೆ ಪರಿಷತ್ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಸಾವರ್ಕರ್, ನಾಥೂರಾಮ್ ಗೋಡ್ಸೆ ಫೋಟೋಗೆ ಕಿಮ್ಮತ್ತಿಲ್ಲ. ಕಸದ ತೊಟ್ಟಿಯ ಮೇಲೂ ಇವರ ಫೋಟೋ ಹಾಕಲು ಯೋಗ್ಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಡಗಿನಲ್ಲಿ ಜನ ಏನೇ ಇದ್ದರು ನೇರವಾಗಿ ಬಂದು ಮಾಡುತ್ತಾರೆ. ಈ ಥರಹ ಮೊಟ್ಟೆ ಎಸೆದು ಓಡಿ ಹೋಗುವವರಲ್ಲ ಕೊಡಗಿನ ಜನ. ಸಂಘ ಪರಿವಾರದವರೇ ಚರ್ಚೆಗೆ ಬನ್ನಿ ನಿಮ್ಮ ಮಾನ ಹರಾಜಾಕುತ್ತೇವೆ ಎಂದಿದ್ದಾರೆ.

ಇದೆ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಗರಂ ಆಗಿದ್ದು, ಜ್ಞಾನ ಇಲ್ಲದ ಗೃಹಮಂತ್ರಿ ಆರಗ ಜ್ಞಾನೇಂದ್ರ. ರಾಜ್ಯದ ಗೃಹಮಂತ್ರಿಯನ್ನು ಮೊದಲು ಜೈಲಿಗೆ ಹಾಕಬೇಕು. ಆರ್ ಎಸ್ ಎಸ್, ಬಿಜೆಪಿಯವರು ಕದ್ದು ಮೊಟ್ಟೆ ತಿನ್ನುತ್ತಾರೆ. ಬೆಂಗಳಯುರಿನ ರಸೆಲ್ ಮಾರ್ಕೆಟ್ ನಲ್ಲಿ ಕದ್ದು ಮಾಂಸ ತಿನ್ನುತ್ತಾರೆ. ಇವರು ತಿನ್ನೋದು ಸಗಣಿ, ಕುಡಿಯೋದು ಗಂಜಲ. ಆರ್ ಎಸ್ ಎಸ್ ವಿರುದ್ಧ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *