ಮೈಸೂರು: ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾರಾ ಮಹೇಶ್ ಬಟ್ಟೆ ಬ್ಯಾಗ್ ಬಾಂಬ್ ಸಿಡಿಸಿದ್ದಾರೆ. ಅದಕ್ಕೆ ಸ್ಪಷ್ಟನೆ ನೀಡಿರುವ ರೋಹಿಣಿ ಸಿಂಧೂರಿ, ಇದೆಲ್ಲ ವ್ಯವಸ್ಥಿತ ಪಿತೂರಿ ಎಂದಿದ್ದಾರೆ.
ವಾಟ್ಸಾಪ್ ಗ್ರೂಪ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ರೋಹಿಣಿ ಸಿಂಧೂರಿ, ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದಾಗಿದೆ. ಯಾಕಂದ್ರೆ ನನ್ನ ಅವಧಿಯಲ್ಲಿ ಒಂದೇ ಒಂದು ಪೈಸೆಯೂ ಹಣ ಬಿಡುಗಡೆಯಾಗಿಲ್ಲ. ಇದು ನನ್ನ ವಿರುದ್ಧ ಮಾಡ್ತಾ ಇರೋ ವ್ಯವಸ್ಥಿತ ಆರೋಪವಾಗಿದೆ.
ತಾವು ಮಾಡಿರೋ ಆರೋಪವನ್ನ ಮುಚ್ಚಿಕೊಳ್ಳಲು ಮತ್ತು ಅಕ್ರಮಗಳ ಬಗ್ಗೆ ತನಿಖೆ ನಡೆಸಬಾರದೆಂದು ಈ ರೀತಿ ಮಾಡುತ್ತಿದ್ದಾರೆ. ಆದ್ರೆ ತನಿಖೆ ನಡೆಸಲು ಯಾವ ಅಧಿಕಾರಿಯೂ ಹೆದರಿಕೊಳ್ಳಬಾರದು ಎಂದಿದ್ದಾರೆ. ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಮಾಡಬೇಕೆಂಬ ಉದ್ದೇಶದಿಂದಲೇ ಸ್ಥಳೀಯ ಸಂಸ್ಥೆಗಳಿಗೆ ಉಚಿತವಾಗಿ ಬಟ್ಟೆ ಬ್ಯಾಗ್ ನೀಡಲು ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ಪ್ರಾಧಿಕಾರಕ್ಕೆ ತಿಳಿಸಲಾಗಿತ್ತು. ಅವರೇ ದರ ನಿಗದಿ ಮಾಡಿ ಪತ್ರ ಕಳಿಸಿದ್ದರು. ಅದರಂತೆ ಅರ್ಡರ್ ನೀಡಲಾಗಿದೆ. ಇದರಲ್ಲಿ ನಂದೇನು ತಪ್ಪಿಲ್ಲ ಎಂದಿದ್ದಾರೆ.