Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಒಂದೇ ಜಾಗದಲ್ಲಿ ಸಮಂತಾ-ನಾಗಚೈತನ್ಯ : ಎದುರುಬದುರಾಗದಂತೆ ಸಿಬ್ಬಂದಿಗಳಿಂದ ಮುಂಜಾಗ್ರತೆ..!

Facebook
Twitter
Telegram
WhatsApp

ಸಿನಿಮಾ ಇಂಡಸ್ಟ್ರಿಯೇ ಹಾಗೇ. ಎಷ್ಟೆರ ಬೇಡ ಎಂದರೂ ಎದುರು ಬದುರು ಆಗಲೇಬೇಕಾದ ಕೆಲವೊಂದು ಪರಿಸ್ಥಿತಿಗಳು ಎದುರಾಗುತ್ತವೆ. ಅಂಥದ್ದೇ ಪರಿಸ್ಥಿತಿ ಸಮಂತಾ ಹಾಗೂ ನಾಗಚೈತನ್ಯಗೂ ಎದುರಾಗಿತ್ತು.

ಇಂದು ಕಾಲದಲ್ಲಿ ಟಾಲಿವುಡ್ ನ ಮೋಸ್ಟ್ ಪಾಪುಲರ್ ಜೋಡಿಗಳಲ್ಲಿ ಸಮಂತಾ ನಾಗಚೈತನ್ಯ ಜೋಡಿ ಕೂಡ ಒಂದಾಗಿತ್ತು. ಅವರಿಬ್ಬರ ಪ್ರೀತಿ ಕಂಡು ಫ್ಯಾನ್ಸ್ ಖುಷಿಯಾಗಿದ್ರು. ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಹಾರೈಸಿದ್ದರು. ಆದ್ರೆ ಅವರಿಬ್ಬರು ದೂರಾದ ಮೇಲೆ ಅಷ್ಟೇ ಬೇಸರ ಕೂಡ ಅಭಿಮಾನಿಗಳನ್ನ ಕಾಡಿತ್ತು.

ಅವರಿಬ್ಬರ ಸಂಬಂಧ ಚೆನ್ನಾಗಿದ್ದಾಗ, ಅವರಿಬ್ಬರು ಹೊರಗೆ ಬಂದಾಗ ಎಲ್ಲರು ಖುಷಿ ಪಡ್ತಾ ಇದ್ರು. ನೋಡೋದಕ್ಕೆ ಕಾತುರದಿಂದ ಕಾಯುತ್ತಿದ್ದರು. ಆದ್ರೆ ಅವರಿಬ್ಬರು ದೂರಾದ ಮೇಲೆ ಎಲ್ಲರ ಮನಸ್ಸಲ್ಲೂ ಕೂಡ ಬೇಸರವಿದೆ‌. ಡಿವೋರ್ಸ್ ಆದ ಮೇಲೆ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಆದ್ರೆ ಬಣ್ಣದ ಲೋಕ ಅದಕ್ಕೆಲ್ಲಿ ಅವಕಾಶ ನೀಡುತ್ತೆ.

ಅದೇ ಕಾರಣ ಸಿನಿಮಾದ ವಿಚಾರವಾಗಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಬಂಗಾರ್ ರಾಜು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಮಂತಾ ಯಶೋದಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎರೆಉ ಸಿನಿಮಾಗಳು ಫೈನಲ್ ಶೆಡ್ಯೂಲಿಂಗ್ ನಲ್ಲಿದೆ. ಹೀಗಾಗಿ ಇಬ್ಬರು ತಮ್ಮ ತಮ್ಮ‌ ಕೆಲಸಗಳಿಗಾಗಿ ರಾಮನಾಯುಡು ಸ್ಟುಡಿಯೋಗೆ ಭೇಟಿ ಕೊಟ್ಟಿದ್ದಾರೆ. ಆದ್ರೆ ಇಬ್ಬರು ಒಟ್ಟಿಗೆ ಎದುರು ಬದುರಾಗದಂತೆ ಅಲ್ಲಿನ ಸಿಬ್ಬಂದಿ ಎಚ್ಚರವಹಿಸಿದ್ದಾರೆ. ಇಬ್ಬರು ಪ್ರತ್ಯೇಕವಾಗಿ ಸ್ಟುಡಿಯೋಗೆ ಭೇಟಿ ನೀಡಿ ಕೆಲಸ ಮುಗಿಸಿ ಹೊರಟಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಮ್ಮ ಮಗಳು ಅಂತವಳಲ್ಲ, ಫೋಟೋ ಹೇಗೆ ಬೇಕೋ ಹಾಗೇ ಎಡಿಟ್ ಮಾಡ್ತಾರೆ : ನೇಹಾ ತಾಯಿ ಹೇಳಿಕೆ

ಹುಬ್ಬಳ್ಳಿ : ಪ್ರೀತಿ ವಿಚಾರಕ್ಕೆ ನೇಹಾರ ಕೊಲೆಯಾಗಿದೆ. ಆರೋಪಿಯ ಬಂಧನವೂ ಆಗಿದೆ. ತನಿಖೆಯೂ ನಡೆಯುತ್ತಿದೆ. ಇದರ ನಡುವೆ ಫಯಾಜ್ ತಂದೆ-ತಾಯಿ ಕ್ಷಮಾಪ್ಪಣೆ ಕೇಳಿ, ಮಗನಿಗೆ ಶಿಕ್ಷೆಯಾಗಲಿ ಎಂದೇ ಒತ್ತಾಯಿದ್ದಾರೆ. ಇಬ್ವರು ಲವ್ ಮಾಡುತ್ತಿದ್ದರು ಅಂತ

ನೇಹಾ ಕೊಲೆ : ಶಿಕ್ಷಕರಾಗಿರುವ ಫಯಾಜ್ ತಂದೆ-ತಾಯಿ ಏನಂದ್ರು..?

ಧಾರವಾಡ: ಚೆನ್ನಾಗಿ ಓದಿ ಉಜ್ವಲ ಭವಿಷ್ಯ ಕನಸು ಕಂಡಿದ್ದ ನೇಹಾ ಜೀವನ ಕಮರಿ ಹೋಗಿದೆ. ಪ್ರೀತಿಯ ಕಾರಣವನ್ನಿಟ್ಟುಕೊಂಡು ಫಯಾಜ್ ಎಂಬಾತ ನೇಹಾಳ ಜೀವನವನ್ನೇ ಅಂತ್ಯ ಮಾಡಿದ್ದಾನೆ. ಅವನಿಗೆ ಗಲ್ಲು ಶಿಕ್ಷೆಯಾಗಲೇಬೇಕೆಂದು ಹೋರಾಟಗಳು ನಡೆಯುತ್ತಿವೆ. ಯುವತಿಯ

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

error: Content is protected !!