ಒಂದೇ ಜಾಗದಲ್ಲಿ ಸಮಂತಾ-ನಾಗಚೈತನ್ಯ : ಎದುರುಬದುರಾಗದಂತೆ ಸಿಬ್ಬಂದಿಗಳಿಂದ ಮುಂಜಾಗ್ರತೆ..!

ಸಿನಿಮಾ ಇಂಡಸ್ಟ್ರಿಯೇ ಹಾಗೇ. ಎಷ್ಟೆರ ಬೇಡ ಎಂದರೂ ಎದುರು ಬದುರು ಆಗಲೇಬೇಕಾದ ಕೆಲವೊಂದು ಪರಿಸ್ಥಿತಿಗಳು ಎದುರಾಗುತ್ತವೆ. ಅಂಥದ್ದೇ ಪರಿಸ್ಥಿತಿ ಸಮಂತಾ ಹಾಗೂ ನಾಗಚೈತನ್ಯಗೂ ಎದುರಾಗಿತ್ತು.

ಇಂದು ಕಾಲದಲ್ಲಿ ಟಾಲಿವುಡ್ ನ ಮೋಸ್ಟ್ ಪಾಪುಲರ್ ಜೋಡಿಗಳಲ್ಲಿ ಸಮಂತಾ ನಾಗಚೈತನ್ಯ ಜೋಡಿ ಕೂಡ ಒಂದಾಗಿತ್ತು. ಅವರಿಬ್ಬರ ಪ್ರೀತಿ ಕಂಡು ಫ್ಯಾನ್ಸ್ ಖುಷಿಯಾಗಿದ್ರು. ಅವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಹಾರೈಸಿದ್ದರು. ಆದ್ರೆ ಅವರಿಬ್ಬರು ದೂರಾದ ಮೇಲೆ ಅಷ್ಟೇ ಬೇಸರ ಕೂಡ ಅಭಿಮಾನಿಗಳನ್ನ ಕಾಡಿತ್ತು.

ಅವರಿಬ್ಬರ ಸಂಬಂಧ ಚೆನ್ನಾಗಿದ್ದಾಗ, ಅವರಿಬ್ಬರು ಹೊರಗೆ ಬಂದಾಗ ಎಲ್ಲರು ಖುಷಿ ಪಡ್ತಾ ಇದ್ರು. ನೋಡೋದಕ್ಕೆ ಕಾತುರದಿಂದ ಕಾಯುತ್ತಿದ್ದರು. ಆದ್ರೆ ಅವರಿಬ್ಬರು ದೂರಾದ ಮೇಲೆ ಎಲ್ಲರ ಮನಸ್ಸಲ್ಲೂ ಕೂಡ ಬೇಸರವಿದೆ‌. ಡಿವೋರ್ಸ್ ಆದ ಮೇಲೆ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಆದ್ರೆ ಬಣ್ಣದ ಲೋಕ ಅದಕ್ಕೆಲ್ಲಿ ಅವಕಾಶ ನೀಡುತ್ತೆ.

ಅದೇ ಕಾರಣ ಸಿನಿಮಾದ ವಿಚಾರವಾಗಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಬಂಗಾರ್ ರಾಜು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಮಂತಾ ಯಶೋದಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಎರೆಉ ಸಿನಿಮಾಗಳು ಫೈನಲ್ ಶೆಡ್ಯೂಲಿಂಗ್ ನಲ್ಲಿದೆ. ಹೀಗಾಗಿ ಇಬ್ಬರು ತಮ್ಮ ತಮ್ಮ‌ ಕೆಲಸಗಳಿಗಾಗಿ ರಾಮನಾಯುಡು ಸ್ಟುಡಿಯೋಗೆ ಭೇಟಿ ಕೊಟ್ಟಿದ್ದಾರೆ. ಆದ್ರೆ ಇಬ್ಬರು ಒಟ್ಟಿಗೆ ಎದುರು ಬದುರಾಗದಂತೆ ಅಲ್ಲಿನ ಸಿಬ್ಬಂದಿ ಎಚ್ಚರವಹಿಸಿದ್ದಾರೆ. ಇಬ್ಬರು ಪ್ರತ್ಯೇಕವಾಗಿ ಸ್ಟುಡಿಯೋಗೆ ಭೇಟಿ ನೀಡಿ ಕೆಲಸ ಮುಗಿಸಿ ಹೊರಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *