ಸಕಾಲ ಸೇವೆ ಸಾರ್ವಜನಿಕರಿಗೆ ವರದಾನ : ಶಾಸಕ ಟಿ. ರಘುಮೂರ್ತಿ

1 Min Read

 

ಚಳ್ಳಕೆರೆ, (ಏ.20) : ಸಕಾಲ ಸೇವೆ ಸಾರ್ವಜನಿಕರಿಗೆ ವರದಾನವಾಗಿದ್ದು ಈ ಸೇವೆಯ ಎಲ್ಲಾ ಸವಲತ್ತುಗಳನ್ನು  ಸಾರ್ವಜನಿಕರು ಪಡೆದುಕೊಳ್ಳುವಂತೆ  ಶಾಸಕ ಟಿ ರಘುಮೂರ್ತಿ ಹೇಳಿದರು.

ತಾಲೂಕು ಕಚೇರಿಯಲ್ಲಿ ಸಕಾಲ ದಶಮಾನೋತ್ಸವ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಸರ್ಕಾರದ ಸಕಾಲ ಅಧಿನಿಯಮ ಅನುಷ್ಠಾನಕ್ಕೆ ಬಂದಿದ್ದು ಕಳೆದ ಹತ್ತು ವರ್ಷಗಳಿಂದ ಸಾರ್ವಜನಿಕರು ವಿವಿಧ ಇಲಾಖೆಯ 150ಕ್ಕೂ ಹೆಚ್ಚು ಸೇವೆಗಳನ್ನು ನಿಗಧಿತ ಅವಧಿಯೊಳಗೆ ಪಡೆದಿರುವುದು ನಿಜಕ್ಕೂ ಗ್ರಾಮಾಂತರ ಪ್ರದೇಶದ   ಜನರಿಗೆ ಕಿರಿಕಿರಿ ತಪ್ಪಿಸಿದ ಸರ್ಕಾರಿ ಅಧಿಕಾರಿಗಳು ಸೇವೆಯನ್ನು ಪ್ರಾಮಾಣಿಕವಾಗಿ ಮುಂದೆಯೂ ಸಾರ್ವಜನಿಕರಿಗೆ ಒದಗಿಸುವಂತಾಗಬೇಕು ಎಂದರು.

ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ರಘುಮೂರ್ತಿ,  ಕಳೆದ ಹತ್ತು ವರ್ಷಗಳಲ್ಲಿ ಈ ಯೋಜನೆಯಿಂದ ರೈತರ ಮತ್ತು ಸಾರ್ವಜನಿಕರ ಬದುಕು ಹಸನಾಗಿದೆ. ಹತ್ತು ವರ್ಷಕ್ಕೂ ಪೂರ್ವದಲ್ಲಿ ವಿವಿಧ ಸೇವೆಗಳ ಹರಸಿ ಬರುವಂತಹ ಸಾರ್ವಜನಿಕರ ಅರ್ಜಿಗಳ ಲೆಕ್ಕ ಪತ್ರವೇ ಇರುತ್ತಿರಲಿಲ್ಲ. ಸಕಾಲದಡಿ ನೀಡುವಂತಹ ಅರ್ಜಿಗಳಿಗೆ ಕಾಲಮಿತಿ ಮತ್ತು ಅರ್ಜಿಗಳ ಪರಿಮಾಣದ ಬಗ್ಗೆ ಲೆಕ್ಕ ವಿರುತ್ತದೆ. ಕಾಲಮಿತಿಯೊಳಗೆ ವಿಲೇವಾರಿ ಮಾಡದ ಅಧಿಕಾರಿ-ನೌಕರರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಬಹುದು. ಆದರೆ ಚಳ್ಳಕೆರೆ ತಾಲೂಕಿನಲ್ಲಿ ಈಗಿರುವ ಸಕಾಲದ ಕಾಲಮಿತಿಯನ್ನು 21ದಿನಗಳಿಂದ 5 ದಿನಕ್ಕೆ ಕಡಿಮೆ ಮಾಡಿ ಸಾರ್ವಜನಿಕರಿಗೆ ಆಗುವಂತಹ ಕಿರಿಕಿರಿ ತಪ್ಪಿಸಲಾಗಿದೆ. ತಾಲೂಕಿನ ಎಲ್ಲ ಜನತೆಯು ಈ ಯೋಜನೆಯ ಉಪಯೋಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಮನವಿ ಮಾಡಿದರು.

ಇದಕ್ಕೂ ಪೂರ್ವದಲ್ಲಿ ತಾಲೂಕು ಕಚೇರಿ ಯಿಂದ ವಿವಿಧ ಕಲಾತಂಡಗಳೊಂದಿಗೆ ಸಕಾಲ ದಶಮಾನೋತ್ಸವ ಜಾಥಾ ಸಂಚರಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಜಾತ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *