ಸಚಿನ್ ತೆಂಡೂಲ್ಕರ್ ಟ್ರಾಫಿಕ್ ಪೊಲೀಸರಿಗೆ ಥ್ಯಾಂಕ್ಸ್ ಹೇಳಿದ್ದರ ಹಿಂದಿನ ಕಾರಣ ಇಲ್ಲಿದೆ..!

ಮುಂಬೈ: ಕೆಲವೊಮ್ಮೆ ಸಂಚಾರಿ ಪೊಲೀಸರಿಂದಲೂ ಅದೆಷ್ಟೋ ಮಹತ್ಕಾರ್ಯಗಳಾಗಿವೆ. ಪೊಲೀಸರ ಸಮಯ ಪ್ರಜ್ಞೆಯಿಂದ ಪ್ರಾಣಗಳು ಉಳಿದಿರುವ ಉದಾಹರಣೆಗಳಿವೆ. ಇದೀಗ ಇಂಥದ್ದೆ ಸೇವೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಂಚಾರಿ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.

ಸಂಚಾರಿ ಪೊಲೀಸರು ಸಚಿನ್ ತೆಂಡೂಲ್ಕರ್ ಸ್ನೇಹಿತೆಯ ಪ್ರಾಣ ಉಳಿಸಿದ್ದರಂತೆ. ಅದಕ್ಕೆ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, ಕೆಲವು ದಿನಗಳ ಹಿಮನದೆ ಆಪ್ತ ಸ್ನೇಹಿತೆಯೊಬ್ಬರು ಗಂಭೀರ ಅಪಘಾತಕ್ಕೀಡಾಗಿದ್ದರು. ಆ ಕ್ಷಣದಲ್ಲಿ ಸಂಚಾರಿ ಪೊಲೀಸರು ಸಹಾಯ ಮಾಡಿದ್ದಾರೆ. ತಕ್ಷಣ ಆಕೆಯನ್ನ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆ ಕ್ಷಣಕ್ಕೆ ಬೇಕಾದ ಸರಿಯಾದ ಚಿಕಿತ್ಸೆಯನ್ನು ಕೊಡಿಸಿದ್ದಾರೆ. ಇಂತಹ ವ್ಯಕ್ತಿಗಳು ನಮ್ಮ ಸುತ್ತ ಮುತ್ತ ಇರಬೇಕು. ಇರುತ್ತಾರೆ ಕೂಡ. ಅವರು ತಮ್ಮ ಕರ್ತವ್ಯವನ್ನು ಮೀರಿ ಸೇವೆ ಮಾಡುತ್ತಿರುತ್ತಿರುತ್ತಾರೆ. ಅಂಥವರಿಗೆ ಧನ್ಯವಾದ ಹೇಳಲೇಬೇಕು. ನಾನು ಈಗಾಗಲೇ ಖುದ್ದಾಗಿ ಭೇಟಿ ಮಾಡಿ ಧನ್ಯವಾದ ತಿಳಿಸಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *