ಚಿತ್ರದುರ್ಗ, (ಸೆಪ್ಟೆಂಬರ್.04) : ನೆಹರು ಯುವಕೇಂದ್ರ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಮತ್ತು ದಿವಂಗತ ಶ್ರೀ ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ಪ್ರೀಡಂ ರನ್2.0 ಕಾರ್ಯಕ್ರಮಕ್ಕೆ ಶನಿವಾರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ರಾಷ್ಟ್ರನಾಯಕ ದಿವಂಗತ ಎಸ್.ನಿಜಲಿಂಗಪ್ಪನವರ ಮನೆಯ ಮುಂಭಾಗದಲ್ಲಿ ಫಿಟ್ ಇಂಡಿಯಾ ಪ್ರತಿಜ್ಞಾವಿಧಿ ಸ್ವೀಕಾರದ ನಂತರ ಓಟಕ್ಕೆ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ರಾಜ್ಯಸಭಾ ಮಾಜಿ ಸದಸ್ಯರು ಹಾಗೂ ದಿವಂಗತ ಶ್ರೀಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಗೌರವ ಕಾರ್ಯದರ್ಶಿ ಹೆಚ್. ಹನುಮಂತಪ್ಪ, ದೇಶವನ್ನು ನಾವು ಅರ್ಥಮಾಡಿಕೊಳ್ಳಬೇಕು. ದೇಶ ನಮ್ಮದು, ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ಭಾರತ ಕಟ್ಟಲು ಯುವಕರು ಸದೃಢವಾಗಿ, ಗುಣವಂತರಾಗಿ ಮತ್ತು ದೇಶವಂತರಾಗಬೇಕು ಎಂದು ಕರೆ ನೀಡಿದರು.
ಈ ಕಾರ್ಯಕ್ರಮವು ಸಮಾಜ ಹಾಗೂ ದೇಶವನ್ನು ಒಟ್ಟು ಮಾಡುವ, ಜೋಡಿಸುವ ಉತ್ತಮ ಕಾರ್ಯವಾಗಿದೆ ಹಾಗೂ ದೇಶದ ಬಗ್ಗೆ ಗೌರವ ಕೊಡುವ ಕಾರ್ಯಕ್ರಮವಾಗಿದೆ ಇಂತಹ ಕಾರ್ಯಕ್ರಮಗಳಿಂದ ಯುವಕರಿಗೆ ನವಚೈತನ್ಯ ಬರಲಿದೆ ಎಂದರು.
ದೇಶ ಎಂದರೆ ಕೇವಲ ಮಣ್ಣು ಕಲ್ಲುಗಳಿಂದ ಕೂಡಿರುವುದಲ್ಲ. ಬದಲಾಗಿ ಸಮಾಜ, ಜೀವಂತ ಜನಗಳಿಂದ ಕೂಡಿದ ಸಮೃದ್ಧವಾಗಿದೆ. ಇಂತಹ ಕಾರ್ಯಕ್ರಮಗಳು ಕೇವಲ ನೆನಪಿಗೆ ಮಾತ್ರ ಆಚರಿಸುವುದಕ್ಕೆ ಸಿಮೀತವಾಗದೇ, ಯುವ ಜನರು ತಮ್ಮ ನಿತ್ಯದ ಜೀವನದಲ್ಲಿ ಅನುಸರಿಸಬೇಕು ಎಂದು ಸಲಹೆ ನೀಡಿದರು.
ರಾಷ್ಟ್ರನಾಯಕ ದಿವಂಗತ ಎಸ್.ನಿಜಲಿಂಗಪ್ಪನವರ ಮನೆಯಿಂದ ಆರಂಭವಾದ ಫಿಟ್ ಇಂಡಿಯಾ ಪ್ರೀಡಂ ರನ್ ರಾಷ್ಟ್ರೀಯ ಹೆದ್ದಾರಿ-4ರ ಸೀಬಾರದ ಬಳಿ ಇರುವ ಎಸ್.ನಿಜಲಿಂಗಪ್ಪ ಅವರ ಸ್ಮಾರಕದವರೆಗೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಧನಂಜಯ, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಎನ್.ಸುಹಾಸ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಮಹೇಂದ್ರನಾಥ್, ಕಾರ್ಯದರ್ಶಿ ಮಜರ್ಉಲ್ಲಾ, ಮುಖಂಡರಾದ ತಾಸ್ವೀರ್, ಕ್ರೀಡಾ ತರಬೇತುದಾರ ಮಹೀಬುಲ್ಲಾ, ಆರತಿ ಮಹಡಿ ಶಿವಮೂರ್ತಿ, ಮಹಡಿ ಶಿವಮೂರ್ತಿ, ರಾಯಲ್ ಸ್ಪೋಟ್ಸ್ ಅಕಾಡೆಮಿ ಲೋಕೇಶ್, ಸ್ಯಾಕ್ ಅಥ್ಲೆಟಿಕ್ಸ್ ಪ್ರೇಮ್, ಚಾಲೇಂಜರ್ಸ್ ಸ್ಫೋಟ್ಸ್ ಕ್ಲಬ್ ಬಾಬು, ಕುಸ್ತಿಪಟು ಸದ್ದಾಂ, ರೋಟರಿ ಕ್ಲಬ್ ಪೋರ್ಟ್ ಅಧ್ಯಕ್ಷರಾದ ಶಿವಕುಮಾರ್, ರೋಟರಿ ಕ್ಲಬ್ ಚಿನ್ಮೂಲಾದ್ರಿ ಕಾರ್ಯದರ್ಶಿ ಅರುಣ್ಕುಮಾರ್, ಎನ್.ಎಸ್.ಎಸ್.ಅಧಿಕಾರಿ ಲೋಕೇಶ್ನಾಯ್ಕ ಹಾಗೂ ಕ್ರೀಡಾಪಟುಗಳು ಸೇರಿದಂತೆ ಇತರರು ಇದ್ದರು.