Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶ್ರೀ ಮಠದ ಪ್ರಗತಿಗಾಗಿ ಎಸ್.ಕೆ. ಬಸವರಾಜನ್ ಆಡಳಿತಾಧಿಕಾರಿಯಾಗಿ ನೇಮಕ : ಡಾ. ಶಿವಮೂರ್ತಿ ಮುರುಘಾ ಶರಣರು

Facebook
Twitter
Telegram
WhatsApp

ಚಿತ್ರದುರ್ಗ, (ಮಾ.08) : ಮಠವನ್ನು ಪ್ರಗತಿ ಹಾದಿಯಲ್ಲಿ ನಡೆಸಬೇಕೆಂದು ತೀರ್ಮಾನಿಸಿ, ಪ್ರಗತಿಯ ತೀವ್ರತೆಯನ್ನು ಹೆಚ್ಚಿಸುವ, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಎಸ್.ಕೆ. ಬಸವರಾಜನ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ಹಾಗು ವಿದ್ಯಾಪೀಠಕ್ಕೆ ಗೌ| ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

ಶ್ರೀಮಠದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚಾರಿತ್ರಿಕ ಹಿನ್ನೆಲೆ ಹೊಂದಿರುವ ಮುರುಘಾಮಠದಲ್ಲಿ ನನ್ನನ್ನು ಸೇರಿದಂತೆ 20 ಮಠಾಧೀಶರು ಆಗಿಹೋಗಿದ್ದಾರೆ. ಉಜ್ಜ್ವಲ ಇತಿಹಾಸ ಹೊಂದಿರುವ ಮಠವನ್ನು 21ನೇ ಶತಮಾನದಲ್ಲಿ ಮುಂದುವರಿಸುತ್ತ ಹೋಗುತ್ತಿದ್ದೇವೆ. 14-15 ವರ್ಷಗಳಿಂದ ಶ್ರೀಮಠವನ್ನು ಕಟ್ಟಿದ್ದೇವೆ. ಅದರ ಕೀರ್ತಿ ಎಲ್ಲೆಡೆ ಪಸರಿಸುವಂತೆ ಮಾಡಿದ್ದೇವೆ.

ನಾವು ಎಲ್ಲ ಆಡಳಿತವನ್ನು ಕೇಂದ್ರಿಕರಿಸಿಕೊಂಡಿದ್ದೆವು. ನಾವೇ ನಿರ್ವಹಿಸುತ್ತಿದ್ದೆವು. ಈ ಮಧ್ಯೆ ಸಂದರ್ಭಕ್ಕನುಗುಣವಾಗಿ ಕಾನೂನು ಸಮರ ನಡೆಸಿದ್ದೆವು. ಇದು ಪ್ರಗತಿಗೆ ಅಡ್ಡಿ ಮಾಡಿದ್ದವು. ರಾಗ, ದ್ವೇಷ ಒಳ್ಳೆಯದಲ್ಲ. ಪರಸ್ಪರ ಪ್ರೀತಿಯಿಂದ ಸಾಧನೆ ಮಾಡಬೇಕಿದೆ. ಇದನ್ನು ಗಮನಿಸಿ ಶಾಶ್ವತವಾದ ಇತಿಶ್ರೀ ಹಾಡಬೇಕೆಂದು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಎಸ್.ಕೆ. ಬಸವರಾಜನ್ ಮಾತನಾಡಿ, ನನ್ನ ಸೇವೆಯನ್ನು ಗುರುತಿಸಿ ಶ್ರೀಗಳು ಎರಡನೇ ಬಾರಿ ಅವಕಾಶ ಮಾಡಿಕೊಟ್ಟಿದ್ದಾರೆ. ರಾಜಕೀಯಕ್ಕೆ ಹೋಗದೆ ಅವರ ಆದೇಶದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!