Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅನುಪಮಾ ಜೊತೆಗೆ ಜಗಳ ಲಗೇಜ್ ಪ್ಯಾಕ್ ಮಾಡಿ ಬಿಗ್ ಬಾಸ್ ಮನೆ ಬಿಟ್ಟು ಹೊರಟ ರೂಪೇಶ್ ರಾಜಣ್ಣ..!

Facebook
Twitter
Telegram
WhatsApp

ಬಿಗ್ ಬಾಸ್ ಮನೆಯಲ್ಲಿ ಹಲವು ರೀತಿಯ ಟಾಸ್ಕ್ ಗಳು ಇರುತ್ತವೆ. ಯಾರು ಗೆದ್ದರು, ಯಾರು ಸೋತರು ಇದೆಲ್ಲವನ್ನು ನೋಡಿಕೊಳ್ಳಲು ಕ್ಯಾಪ್ಟನ್ ಇರುತ್ತಾರೆ. ಈ ವಾರದ ಕ್ಯಾಪ್ಟನ್ ಆಗಿ ಅನುಪಮಾ ಇದ್ದಾರೆ. ಬಿಗ್ ಬಾಸ್ ನೀಡಿದ ಹೊಸ ಟಾಸ್ಕ್ ನಲ್ಲಿ ಸಂಬರ್ಗಿ ವಿಚಾರ ಹೇಳಿದ್ದೆ ದೊಡ್ಡ ಜಗಳಕ್ಕೆ ಕಾರಣವಾಗಿದೆ.

ಮೊದಲು ಬಜ್ಹರ್ ಹೊತ್ತುವ ಟಾಸ್ಕ್ ಅದಾಗಿತ್ತು. ಜೋಡಿ ಮೇಲೆ ಆಡುವಾಗ ಪ್ರಶಾಂತ್ ಸಂಬರ್ಗಿ ಹಾಗೂ ರೂಪೇಶ್ ರಾಜಣ್ಣ ಒಟ್ಟಿಗೆ ಆಡಿದ್ರು. ಸಂಬರ್ಗಿ ಮೊದಲು ಬಜ್ಹರ್ ಒತ್ತಿದ್ದನ್ನು ಅನುಪಮಾ ಹೇಳಿದ್ದಾರೆ. ಅದಕ್ಕೆ ರೂಪೇಶ್ ರಾಜಣ್ಣ ಮೊದಲು ನಾನು ಒತ್ತಿದ್ದು ಎಂದಿದ್ದಾರೆ. ಇದು ಜಗಳಕ್ಕೆ ಕಾರಣವಾಗಿದೆ.

ರೂಪೇಶ್ ರಾಜಣ್ಣ: ಮೊದಲು ಒತ್ತಿದ್ದು ನಾನು.

ಅನುಪಮಾ: ಪ್ರಶಾಂತ್ ಸರ್

ರಾಜಣ್ಣ: ದೇವ್ರಿದ್ದಾನೆ.

ಅನುಪಮಾ: ವಾಪಸ್ ತಗೋಳಿ ಆ ಲೈನ್

ರಾಜಣ್ಣ: ಒಬ್ಬರಿಗೆ ಒಂದು ನ್ಯಾಯ ತೋರಿಸ್ತೀರಾ ನೀವೂ

ಅನುಪಮಾ: ನೀಟಾಗಿ ಮಾತಾಡೋ ಹಾಗಿದ್ರೆ ಮಾತಾಡಿ. ನನ್ ಹತ್ರ ಮಾತಾಡ್ ಕೂಡ್ದು.

ರಾಜಣ್ಣ: ಯಾತಕ್ಕೆ ಬರ್ತೀವಿ ಮತ್ತೆ. ಮೋಸದಾಟ ಆಡಿಕೊಂಡು ಥೂ..

ಅನುಪಮಾ: ಫೇವರ್.. ಫೇವರ್ ಅನ್ನೋ ವರ್ಡ್.. ನಾನು ಯಾರಿಗೆ ಫೇವರ್ ಮಾಡೋದಕ್ಕೆ ಬಂದಿದ್ದೀನಿ.

ರಾಜಣ್ಣ: ನಿಮ್ಮನ್ನ ಕಟ್ಕೊಂಡು ನಂಗೆ ಏನು ಆಗ್ಬೇಕಿದೆ.. ನಾನು ಹೊರಡ್ತಾ ಇದ್ದೀನಿ ಎಲ್ಲಾ ತುಂಬಿಕೊಂಡು.

ಅನುಪಮಾ: ನಿಮ್ಮನ್ನ ಕಟ್ಕೊಂಡು ನಂಗು ಏನು ಆಗ್ಬೇಕಿಲ್ಲ.

ಹೀಗೆ ಮಾತುಕತೆ, ಜಗಳದ ನಡುವೆಯೇ ರೂಪೇಶ್ ರಾಜಣ್ಣ ತನ್ನ ಲಗೇಜ್ ಪ್ಯಾಕ್ ಮಾಡಿಕೊಂಡು ಹೊರಟಿದ್ದಾರೆ. ಸಾನ್ಯಾ ಮತ್ತು ರೂಪೇಶ್ ಶೆಟ್ಟಿ ಅವರನ್ನು ತಡೆಯಲು ಯತ್ನಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!