ಆರ್ ಎಸ್ಎಸ್ ಆಡಳಿತ ನಡೆಸುವ ಸಂಸ್ಥೆಯಲ್ಲ, ಸೇವೆ ಮಾಡುವ ಸಂಸ್ಥೆ : ರವಿ ಕುಮಾರ್

suddionenews
1 Min Read

ಬೆಂಗಳೂರು: ಆರ್ ಎಸ್ಎಸ್ ಆಡಳಿತ ನಡೆಸುವ ಸಂಸ್ಥೆಯಲ್ಲ, ಸೇವೆ ಮಾಡುವ ಸಂಸ್ಥೆ ಎಂದು ವಿಧಾನ ಪರಿಷತ್ ಸದಸ್ಯ ಎನ್ ರವಿ ಕುಮಾರ್ ಹೇಳಿದರು. ಈ ವೇಳೆ ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರಿಗೆ ಸೇವೆ ಮನೋಭಾವ ಬೆಳೆಸುವ ಪ್ರಪಂಚದ ಪ್ರಮುಖ ಸಂಸ್ಥೆ ಆರ್ ಎಸ್ ಎಸ್.

ಕುಮಾರಸ್ವಾಮಿ ಬಾಯಿ ಹರಕೆಯಿಂದ ಹಾಗೆಯೇ ಆಗಲಿ,ನಿಜಕ್ಕೂ ಆಗ ದೇಶಕ್ಕೆ ಒಳ್ಳೆದಾಗತ್ತೆ. ಆರ್ ಎಸ್ ಎಸ್ ಎಲ್ಲಿ ಇರತ್ತೋ ಅಲ್ಲಿ ಬಹಳ ಒಳ್ಳೆಯ ಕೆಲಸಗಳಾಗುತ್ತವೆ.

ಕುಮಾರಸ್ವಾಮಿಯವರಿಗೆ ಡೌಟ್ ಬೇಡ, ಆರ್ ಎಸ್ ಎಸ್ ಇರುವುದರಿಂದ ದೇಶದಲ್ಲಿ ಒಳ್ಳೆಯ ಕೆಲಸಗಳಾಗುತ್ತಿವೆ,ಕಾಶ್ಮೀರದಲ್ಲಿ ೩೭೦ ನೇ ವಿಧಿ ಹೋಯ್ತು, ಭಯೋತ್ಪಾದನೆ‌ ನಿರ್ಮೂಲನೆ ಆಯ್ತು.೪೦೦೦ ಜನ ಅನ್ನೋದು ಬಹಳ ದೊಡ್ಡ ಸಂಖ್ಯೆ ಕುಮಾರಸ್ವಾಮಿ ಬಾಯಿ ಹರಕೆಯಿಂದ ಅಷ್ಟು ಮಂದಿ ಆರ್ ಎಸ್ ಎಸ್ ನವರು ಐಎಎಸ್ ಅಧಿಕಾರಿಗಳಾಗಲಿ. ಆದರೆ ತಾಲೀಬಾನಿಗಳು ಎನ್ನುವ ಸಿದ್ದರಾಮಯ್ಯ ಗೆ ತಲೆ ಕೆಟ್ಟಿದೆ.ಅವರನ್ನು ನಿಮ್ಹಾನ್ಸ್ ಗೆ ಸೇರಿಸಬೇಕು ಅಪಘಾನಿಸ್ತಾನ್ ದಲ್ಲಿ ಆಗುವ ಹತ್ಯೆಗಳನ್ನು ಸಿದ್ದರಾಮಯ್ಯ ಒಪ್ಪಿಕೊಳ್ತಾರಾ ಎಂದು ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *