ಗಣರಾಜ್ಯೋತ್ಸವ ಸಂಭ್ರಮ : ಉಗ್ರರನ್ನು ಹೊಡೆದುರುಳಿಸಿದ ಬಾಬುರಾಂಗೆ ಅಶೋಕ ಚಕ್ರ

ನವದೆಹಲಿ: ಇಂದು ಗಣರಾಜ್ಯೋತ್ಸವದ ಸಂಭ್ರಮ. ಇಡೀ ದೇಶವೇ ಈ ದಿನವನ್ನ ಸಂಭ್ರಮದಿಂದ ಆಚರಿಸುತ್ತಿದೆ. ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿದ್ದು, ರಾಜ್ ಪಥ್ ನಲ್ಲಿ ಸಂಭ್ರಮ ಕಳೆಗಟ್ಟಿದೆ.

ರಾಜ್ ಪಥ್ ನಲ್ಲಿ ಪರೇಡ್ ಆರಂಭವಾಗಿದೆ. ರಾಷ್ಟ್ರ ಧ್ವಜಕ್ಕೆ‌ ಹೆಲಿಕಾಪ್ಟರ್ ಗಳಿಂದ ಪುಷ್ಪಾರ್ಚನೆ ಮಾಡಿದ್ದು, ರಕ್ಷಣಾ ಪಡೆಗಳ ಮುಖ್ಯಸ್ಥರು, ವಿವಿಧ ಗಣ್ಯರು ಭಾಗಿಯಾಗಿದ್ದಾರೆ. ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಧ್ವಜಾರೋಹಣ ಮಾಡಿದ್ದಾರೆ.

ಇನ್ನು ಇದೇ ವೇಳೆ ASI ಬಾಬು ರಾಮ್ ಅವರಿಗೆ ಅಶೋಕ ಚಕ್ರ ಪ್ರದಾನ ಮಾಡಲಾಗಿದೆ. ಮರಣೋತ್ತರ ಅಶೋಕ ಚಕ್ರವನ್ನ ರಾಷ್ಟ್ರಪತಿ ಪ್ರಧಾನ ಮಾಡಲಿದ್ದಾರೆ. 9 ಉಗ್ರರನ್ನು ಹೊಡೆದುರುಳಿಸಿದ್ದ ಬಾಬುರಾಂ ಜಮ್ಮು ಮತ್ತು ಕಾಶ್ಮೀರದ ಎಎಸ್ಐ ಆಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *