ರೇಣುಕಾಸ್ವಾಮಿ ಪ್ರಕರಣ: ನಟ ದರ್ಶನ್​​ ರೈಟ್ ಹ್ಯಾಂಡ್ ವ್ಯಕ್ತಿಗೆ ಜಾಮೀನು ಮಂಜೂರು!

1 Min Read

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ  ಅಪಹರಣ ಮತ್ತು ಹತ್ಯೆ ಪ್ರಕರಣದ 11ನೇ ಆರೋಪಿ ಹಾಗೂ 2ನೇ ಆರೋಪಿ ಮತ್ತು ನಟ ದರ್ಶನ್​​​​​ನ  ಬಲಗೈಬಂಟನಂತಿದ್ದ ನಾಗರಾಜ್​​​ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.

ನಾಗರಾಜ್​​ ಪತ್ನಿಗೆ ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಕೊಲೆ ಆರೋಪಿ ನಾಗರಾಜ್​​​​ಗೆ 10 ದಿನ ಮಧ್ಯಂತರ ಜಾಮೀನನ್ನು ಇಂದು ಕೋರ್ಟ್​​​ ಮಂಜೂರು ಮಾಡಿದೆ. ನ್ಯಾಯಾಲಯ ಮಧ್ಯಂತರ ಬೇಲ್ ನೀಡಿದ್ದಲ್ಲದೇ, ಪ್ರತಿನಿತ್ಯ ಬೆಳಗ್ಗೆ 8ಕ್ಕೆ ಮತ್ತು ರಾತ್ರಿ 7ಗಂಟೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಸಹಿ ಹಾಕುವಂತೆ ಆರೋಪಿಗೆ ಕೋರ್ಟ್​ ಷರತ್ತು ವಿಧಿಸಿದೆ.

ನಾಗರಾಜ್​​ ನಟ ದರ್ಶನ್​​ ಜೊತೆ ಕಳೆದ 15 ವರ್ಷಗಳಿಂದ ಗುರುತಿಸಿಕೊಂಡಿದ್ದು, ದರ್ಶನ್​​ಗೆ ನಾಗರಾಜ್​​​ ಭಾರೀ ಆಪ್ತ ಹಾಗೂ ಬಲಗೈ ಬಂಟನಂತಿದ್ದ ಎನ್ನಲಾಗಿದೆ.ನಾಗರಾಜ್​​​​, ದರ್ಶನ್​​​​ ಪರಿಚಯಕ್ಕೂ ಮೊದಲು ಪೆಟ್ರೋಲ್ ಬಂಕ್​​​​ನಲ್ಲಿ ಕೆಲಸ ಮಾಡುತ್ತಿದ್ದನಂತೆ. ದರ್ಶನ್​​​​​ನ ಪರಿಚಯವಾದ ನಂತರದ ದಿನಗಳಲ್ಲಿ ನಾಗರಾಜ್, ಡಿಬಾಸ್​​​​​​ನ ವಿಶ್ವಾಸ ಗಳಿಸಿ ರೈಟ್​​​ ಹ್ಯಾಂಡ್​​ ಎಂಬಂತೆ ‘ಡಿ’ ಗ್ಯಾಂಗ್​​​ ಬಳಗದಲ್ಲಿ ಗುರುತಿಸಿಕೊಂಡಿದ್ದ.

Share This Article
Enable Notifications OK No thanks