Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಲ್ಪಾಯುಷ್ಯಾವೆಂದು ಹೆಸರನ್ನೇ ಬದಲಾಯಿಸಿದ್ರು : ಅಪ್ಪು ಹೆಸರು ಬದಲಾಯಿಸಿದ್ದರ ಬಗ್ಗೆ ಕುಮಾರ ಬಂಗಾರಪ್ಪ ಮಾತು

Facebook
Twitter
Telegram
WhatsApp

ಬೆಂಗಳೂರು: ಅಪ್ಪು ಈಗ ಎಲ್ಲರ ಮನಸ್ಸಲ್ಲೂ ಅಜರಾಮರವಾಗಿದ್ದಾರೆ. ಆದ್ರೆ ಅಪ್ಪುವಿನ ಹೆಸರು ಈ ಮುನ್ನ ಲೋಹಿತಾಶ್ವ ಅಂತ ಯಾರಿಗಾದ್ರೂ ಗೊತ್ತಿತ್ತಾ..? ಸಾಕಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ಸಿನಿಮಾದಲ್ಲಿ ಪರಿಚಿತರಾಗಿದ್ದೆ ಪುನೀತ್ ರಾಜ್‍ಕುಮಾರ್ ಅಂತ.‌ ಮೊದಲ ಸಿನಿಮಾದಲ್ಲೇ ಮನ ಗೆದ್ದಿದ್ದು ಅಪ್ಪು ಅವ್ರು ಅಂತ.

ಆದ್ರೆ ಅಪ್ಪು ಮೊದಲ ಹೆಸರು ಲೋಹಿತ್ ಅಂತ.‌ ಬಾಲ್ಯದ ನಂತರ ಆ ಹೆಸರನ್ನ ಬದಲಾಯಿಸಿ ಪುನೀತ್ ಅಂತ ಬದಲಾಯಿಸಲಾಯಿತು. ಅದ್ಯಾಕೆ ಅನ್ನೋ ಮನಸ್ಸಿನ ಮಾತನ್ನ ಕುಮಾರ್ ಬಂಗಾರಪ್ಪ ಹೇಳಿಕೊಂಡಿದ್ದಾರೆ.

ಅಪ್ಪು ಅಂತ್ಯಕ್ರಿಯೆ ಇಂದು ಮುಗಿದಿದೆ. ಅಂತ್ಯಕ್ರಿಯೆ ಬಳಿಕ ಮಾತನಾಡಿರುವ ಕುಮಾರ್‌ ಬಂಗಾರಪ್ಪ ಆ ವಿಚಾರವನ್ನ ಬಿಚ್ಚಿಟ್ಟಿದ್ದಾರೆ. ಪುನೀತ್ ಗೆ ಬಾಲ್ಯದಲ್ಲಿ ಲೋಹಿತ್ ಎಂದು ಹೆಸರಿಡಲಾಗಿತ್ತು. ಸತ್ಯಹರಿಶ್ಚಂದ್ರ ನಾಟಕದಲ್ಲಿ ಲೋಹಿತನಿಗೆ ಅಲ್ಪ ಆಯುಷ್ಯ ಎಂದು ಗೊತ್ತಾಗಿ ಮನೆ ಮಂದಿಯೆಲ್ಲಾ ಬೇಸರ ಮಾಡಿಕೊಂಡಿದ್ರು.

ಹಿರಿಯರಿಗೂ ಆ ಹೆಸರು ಬೇಸರ ತರಿಸಿತ್ತು. ಎಲ್ಲರ ನಿರ್ಧಾರದ ಮೇರೆಗೆ ಜ್ಯೋತಿಷ್ಯರನ್ನ ಕೇಳಿ ಲೋಹಿತ್ ಬದಲಿಗೆ ಪುನೀತ್ ರಾಜ್‍ಕುಮಾರ್ ಅಂತ ಇಡಲಾಗಿತ್ತು. ಮೈಸೂರಿನ ಫಾರ್ಮ್ ಹೌಸ್ ಕೂಡ ಲೋಹಿತ್ ಅಂತಾಲೇ ಮುಂಚೆ ಇಡಲಾಗಿತ್ತು. ಹೆಸರು ಬದಲಾದ ಮೇಲೆ ಪುನೀತ್ ಫಾರ್ಮ್ ಹೌಸ್ ಅಂತ ಬದಲಾವಣೆ ಮಾಡಿದ್ರು.

ಆದ್ರೆ ಲೋಹಿತ್ ಆಗ್ಲಿ, ಪುನೀತ್ ಆಗ್ಲಿ ವಿಧಿಯಾಟವೇ ಬೇರೆ ಇರುತ್ತೆ ಅಲ್ವಾ ಅಂತ ಹಳೆಯದ್ದನ್ನೆಲ್ಲಾ ನೆನದು ಕುಮಾರ್ ಬಂಗಾರಪ್ಪ ಕಣ್ಣೀರು ಹಾಕಿದ್ರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಲೈಸೆನ್ಸ್ ಪಡೆಯದೆ ಡ್ರೋನ್ ಹಾರಿಸಿದ ಪ್ರತಾಪ್ : ಸಾಕ್ಷಿಗಳು ಬಹಿರಂಗ..!

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ರೈತರ ಬೆಳೆಗಳಿಗೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುವುದನ್ನು ನೋಡಬಹುದು. ಇದೀಗ ಡ್ರೋನ್ ವಿಚಾರಕ್ಕೆ ಹೊಸದೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಪ್ರತಾಪ್ ವಿರುದ್ಧ ಸಾಕ್ಷಿಗಳು ಸಿಕ್ಕಿವೆ. ಡ್ರೋನ್ ಪ್ರತಾಪ್

ಮೂವರು ಆಟಗಾರರು ಆಟ ಶುರು ಮಾಡಿದ್ರೆ RCB ಟಚ್ ಮಾಡೋದು ಕಷ್ಟ ಕಷ್ಟ..!

ಪಂಜಾಬ್ ಕಿಂಗ್ಸ್ ಮಣಿಸಿದ ಆರ್ಸಿಬಿ ಇಂದು ಮತ್ತೊಂದು ಆಟಕ್ಕೆ ಸಜ್ಜಾಗಿದೆ. ಕೆಕೆಆರ್ ವಿರುದ್ದ ಜಯ ಗಳಿಸುವ ಆತ್ಮ ವಿಶ್ವಾಸದಲ್ಲಿ ಮೈದಾನಕ್ಕೆ ಇಳಿದಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಜೊತೆಗೆ ಆರ್ಸಿಬಿ ಎರಡನೇ ಪಂದ್ಯವನ್ನಾಡಲಿದೆ. ಆದರೆ ಈ

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

error: Content is protected !!