Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಾಗತಿಕ ತಾಪಮಾನ ತಗ್ಗಿಸುವುದು ಪ್ರತಿಯೊಬ್ಬರ ಹೊಣೆ ; ಜೆ. ಪರಶುರಾಮ

Facebook
Twitter
Telegram
WhatsApp

ಚಿತ್ರದುರ್ಗ : ಜಿಲ್ಲೆಯಲ್ಲಿ ಕಳೆದ ಸುಮಾರು ವರ್ಷಗಳಿಂದ ಸಾಕಷ್ಟು ಗಣಿ ಗುತ್ತಿಗೆ ಪ್ರದೇಶಗಳನ್ನು ಗಣಿ ಕಾಯ್ದೆ ಉಲ್ಲಂಘನೆ ಮೇರೆಗೆ ಹಾಗೂ ಪರಿಸರ ಸಂರಕ್ಷಣಾ ಹಿತದಿಂದ ಘನ ಸರ್ಕಾರವು ರದ್ದುಗೊಳಿಸಿದೆ. ಆ ಪ್ರದೇಶದಲ್ಲಿ ಗಿಡಮರಗಳನ್ನು ಬೆಳಸಲು ಘನ ಸರ್ಕಾರ ಮುಂದಾಗ ಬೇಕೆಂದು ಮನವಿ ಮಾಡಲಾಗಿದೆ.

ಜಾಗತಿಕ ತಾಪಮಾನದಿಂದ ಕಳೆದ 4 ವರ್ಷಗಳಿಂದ ಪ್ರಕೃತಿಯಲ್ಲಿ ಸಾಕಷ್ಟು ಬದಲಾವಣೆ ಯಾಗಿರುವುದು ಎಲ್ಲರಿಗೂ ತಿಳಿದಂತಹ ವಿಷಯ, ಜಾಗತಿಕ ತಾಪಮಾನ ತಗ್ಗಿಸಲು ಪ್ರತಿಯೊಬ್ಬರ ಹೊಣೆಯಾಗಿದೆ. ಜಾಗತಿಕ ತಾಪಮಾನಕ್ಕೆ ಕಾರಣಗಳಾದ ಇಂಗಾಲದ ಡೈಆಕ್ಸೈಡ್, ಮಿಥೇನ್, ನೈಟ್ರಡ್ ಆಕ್ಸೈಡ್ ಮತ್ತು ಓಜೋನ್‍ಗಳ ಪ್ರಮಾಣ ಅಧಿಕಗೊಳ್ಳುವುದು. ಅರಣ್ಯಗಳ ನಾಶ, ಇಂಧನಗಳ ಬಳಕೆ, ನಗರಗಳಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳು, ಡಾಂಬರಿಕರಣ ರಸ್ತೆಗಳು, ಗಿಡಮರಗಳ ನಾಶ ಜನಸಂಖ್ಯೆಯ ಹೆಚ್ಚಳ ಮತ್ತು ಸಾಂದ್ರತೆ ಕಾರ್ಖಾನೆ ಹಾಗೂ ಕೈಗಾರಿಕೆಗಳ ಹೆಚ್ಚಳ ಮುಂತಾದವುಗಳು ಕಾರಣವಿರುತ್ತವೆ. ಈ ಅಪಾಯವನ್ನು ದೂರಗೊಳಿಸಲು ಅರಣ್ಯಗಳ ವೃದ್ಧಿ ಪಡಿಸಬೇಕು. ವಿದ್ಯುಚ್ಛಕ್ತಿಯ ಮಿತವ್ಯಯ ಆಗಬೇಕು. ಅದೇ ರೀತಿ ಕಲ್ಲಿದ್ದಲು, ಇದ್ದಿಲು ಹಾಗೂ ಭೂಮಿಯ ಕೆಳಸ್ತರಗಳಲ್ಲಿನ ಇಂಧನದ ಬಳಕೆ ಕಡಿಮೆಯಾಗಬೇಕು. ಓಜೋನ್ ಬಹುಮುಖ್ಯವಾದುದು. ಈ ಓಜೋನ್ ಪದರವು ಸೂರ್ಯನಿಂದ ಭುಮಿಯತ್ತ ಹೊಮ್ಮುವ ತೀಕ್ಷ್ಣ ಹಾಗೂ ಅಪಾಯಕಾರಿ ಕಿರಣಗಳ ಪ್ರಭಾವವನ್ನು ನಾಶಗೊಳಿಸುತ್ತದೆ. ಓಜೋನ್ ಉತ್ಪತ್ತಿಯಾಗುತ್ತೆ ಮತ್ತು ನಶಿಸುತ್ತಾ ಇರುತ್ತದೆ. ಹಾಗಾಗಿ ಅದುಯಾವಾಗಲೂ ಸ್ಥಿರವಾಗಿ ರುವಂತದ್ದು. ಸೂರ್ಯನ ಕಿರಣಗಳಲ್ಲಿನ ಹಾನಿಕರಕ ನೀಲಿ ಲೋಹಿತಾತೀತ ಕಿರಣಗಳ ವಿರುದ್ಧ ಒಂದು ಅಡ್ಡಗೋಡೆಯಂತೆ ಕೆಲಸ ಮಾಡುತ್ತದೆ. ಹಾಗೂ ಭೂಮಟ್ಟಕ್ಕೆ ತಲಪದಂತೆ ತನ್ನೊಳಕ್ಕೆ ಹೀರಿಕೊಳ್ಳುತ್ತದೆ. ಇದು ಪ್ರಕೃತಿಯ ಬಹಳ ದೊಡ್ಡದು ಹಾಗೂ ಅಪೂರ್ವ ಕೊಡುಗೆಯಾಗಿದೆ. ಅದು ಇಲ್ಲದೇ ಹೋಗಿದ್ದರೆ ಭೂಮಿಯ ಮೇಲೆ ಜೀವಿಗಳು ಉಳಿಯುತ್ತಿರಲಿಲ್ಲ ಎಂದು ನಿವೃತ್ತ ಹಿರಿಯ ಭೂವಿಜ್ಞಾನಿ ಜೆ. ಪರಶುರಾಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೆ. ಪರಶುರಾಮ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ.
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.) ಮೊ : 9448338821

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

ಇದು ಪಿಕ್ ಪಾಕೆಟ್ ಸರ್ಕಾರ : ಹಿರಿಯೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

ಸುದ್ದಿಒನ್, ಹಿರಿಯೂರು, ಏಪ್ರಿಲ್, 19  : ಗ್ಯಾರಂಟಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು ಕುಟುಂಬದ ಮುಖ್ಯಸ್ಥರಿಂದ ಪ್ರತಿ ತಿಂಗಳು  5 ರಿಂದ 6 ಸಾವಿರ ವಸೂಲಿ ಮಾಡುತ್ತಿದ್ದಾರೆ . ಇದು

error: Content is protected !!