ಬರೋಬ್ಬರಿ 4 ವರ್ಷಗಳ ಬಳಿಕ ಐಪಿಎಲ್ ಆರಂಭಕ್ಕೆ ರಂಗು : ಕ್ರೇಜ್ ನೀಡಲಿದ್ದಾರೆ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ

ಐಪಿಎಲ್ ಅಂದ್ರೆನೇ ಅದೊಂಥರ ಕಿಕ್ ಸ್ಟಾರ್ಟ್. ಇಂಡೋ – ಆಸಿಸ್ ಏಕದಿನ ಪಂದ್ಯ ಅಂತ್ಯಗೊಂಡ ಬೆನ್ನಲ್ಲೇ ಈಗ ಎಲ್ಲರ ಚಿತ್ತ ಐಪಿಎಲ್ ನತ್ತ ನೆಟ್ಟಿದೆ. ಆ ಕುತೂಹಲಕ್ಕೆ ತಕ್ಕಂತೆ ಇದೀಗ ಆರಂಭದಲ್ಲಿಯೇ ಕಿಕ್ ಸಿಗಲಿದೆ ಅನ್ನೋದಂತು ಕನ್ಫರ್ಮ್ ಆಗಿದೆ. ಜಬರ್ದಸ್ತ್ ಎಂಟರ್ಟೈನ್ಮೆಂಟ್ ಕೊಡುವುದಕ್ಕೆ ಕೊಡಗಿಮ ಕುವರಿ ರಶ್ಮಿಕಾ ಮಂದಣ್ಣ ರೆಡಿಯಾಗಿದ್ದಾರೆ.

ಈ ಬಾರಿ ಅಹಮದಾಬಾದ್ ನ ನರೇಂದ್ರ ಮೋದಿ ಮೈದಾನದಲ್ಲಿ ಮಾರ್ಚ್ 31ಕ್ಕೆ ಪಂದ್ಯ ಆರಂಭವಾಗಲಿದೆ‌. ಮೊದಲ ದಿನ ಗುಹರಾತ್ ವರ್ಸಸ್ ಚೆನ್ನೈ ಮ್ಯಾಚ್ ನಡೆಯಲಿದೆ. ಅದಕ್ಕೂ ಮುನ್ನ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಿ ರಂಜಿಸಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಡೆದ ಮಹಿಳಾ ಐಪಿಎಲ್ ಆರಂಭಕ್ಕೂ ಮುನ್ನ ನಟಿ ಕಿಯಾರ ಅಡ್ವಾಣಿ ಹಾಗೂ ಕೃತಿ ಸನೋನ್ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದರು. ಈ ಬಾರಿ ಮೂಲಗಳ ಪ್ರಕಾರ ರಶ್ಮಿಕಾ ಮಂದಣ್ಣ ಟ್ರೀಟ್ ನೀಡಲಿದ್ದಾರೆ.

ಇನ್ನು ಐಪಿಎಲ್ ಶುರುವಾದಾಗಿನಿಂದ ಅಂದ್ರೆ 2008ರಿಂದಾನೂ ಆರಂಭ ಜಬರ್ದಸ್ತ್ ಆಗಿಯೇ ಮೂಡಿ ಬಂದಿದೆ. 2019ರಲ್ಲಿ ತಮನ್ನಾ ಬಾಟೀಯಾ ಡ್ಯಾನ್ಸ್ ಮಾಡಿ ಕಿಕ್ ಕೊಟ್ಟಿದ್ದಷ್ಟೇ ಬಳಿಕ ಐಪಿಎಲ್ ಆರಂಭ ಗ್ರ್ಯಾಂಡ್ ಆಗಿ ನಡೆದಿರಲಿಲ್ಲ. ಅದಕ್ಕೆ ಕಾರಣವೂ ಇದೆ. ಪುಲ್ವಾಮ ದಾಳಿಯಲ್ಲಿ ನಮ್ಮ ಯೋಧರನ್ನು ಕಳೆದುಕೊಂಡಿದ್ದು, ಬಳಿಕ ಕೊರೊನಾ ಸಂಕಷ್ಟ ಈ ಎಲ್ಲಾ ಸಮಸ್ಯೆಯಿಂದ ಐಪಿಎಲ್ ಆರಂಭದ ರಂಗು ಮರೆಮಾಚಿತ್ತು. ಆದರೆ ಈ ಬಾರಿ ಎಲ್ಲವೂ ಸರಿ ಇದ್ದು, ಐಪಿಎಲ್ ಆರಂಭ ಕೂಡ ಜಬರ್ದಸ್ತ್ ಆಗಿರಲಿದೆ.

suddionenews

Recent Posts

ರಾಜ್ಯ ಬಜೆಟ್ ಗೆ ಸಿದ್ದತೆ : ಮದುವೆ ಮನೆಯಿಂದ ಸಿದ್ದರಾಮಯ್ಯ ನಿವಾಸಕ್ಕೆ ಬಂದ ಡಿಕೆಶಿ

ಬೆಂಗಳೂರು: ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ರಾಜ್ಯ ಬಜೆಟ್ ನತ್ತ ಜನರ ಚಿತ್ತ ನೆಟ್ಟಿದೆ. ರಾಜ್ಯ ಬಜೆಟ್ ನಲ್ಲಿ ಇನ್ನಷ್ಟು…

5 minutes ago

ರತನ್ ಟಾಟಾ ಉಯಿಲ್ ನಲ್ಲಿ ಮೋಹಿನಿಗೆ 500 ಕೋಟಿ : ಹುಡುಕಾಟ ಶುರು..!

ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾದ ರತನ್ ಟಾಟಾ ಕಳೆದ ವರ್ಷ ಇಹಲೋಕ ತ್ಯಜಿಸಿದ್ದರು. ರತನ್ ಟಾಟಾ ಅವರಿಗೆ ಮದುವೆಯಾಗಿರಲಿಲ್ಲ. ಹೀಗಾಗಿ…

17 minutes ago

ಬಗರ್‍ಹುಕುಂ ಅರ್ಜಿಗಳನ್ನು ಮರು ಪರಿಶೀಲಿಸಿ : ಕುಮಾರ್ ಸಮತಳ ಒತ್ತಾಯ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 07…

23 minutes ago

ಹೈಕೋರ್ಟ್ ತೀರ್ಪು : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಭ್ರಮಾಚರಣೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

27 minutes ago

ದಾವಣಗೆರೆ ವಿಶ್ವವಿದ್ಯಾನಿಲಯ : ಹೊಳಲ್ಕೆರೆ ವಿದ್ಯಾರ್ಥಿನಿ ಗಂಗಮ್ಮ ಪ್ರಥಮ ರ‌್ಯಾಂಕ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

30 minutes ago

ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ : ಸಚಿವ ಮಧು ಬಂಗಾರಪ್ಪ

ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…

37 minutes ago