ಚಿತ್ರದುರ್ಗದಲ್ಲಿ ಜನವರಿ 25 ರಂದು ರಂಗಸೌರಭ ರಂಗೋತ್ಸವ

suddionenews
1 Min Read

ಚಿತ್ರದುರ್ಗ, (ಜ.23): ರಂಗಸೌರಭ ಕಲಾ ಸಂಘ ಮತ್ತು ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಶ್ರೀ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜನವರಿ ಇಪ್ಪತ್ತೈದರಂದು ಬೆಳಿಗ್ಗೆ ಹನ್ನೊಂದು ಗಂಟೆಗೆ ರಂಗಸೌರಭ ರಂಗೋತ್ಸವ ಅಂಗವಾಗಿ ರಂಗ ಉಪನ್ಯಾಸ, ಗೀತಗಾಯನ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ ಮಲ್ಲಿಕಾರ್ಜುನ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಪ್ರಾಚಾರ್ಯ ಡಾ.ಎ.ಜಿ.ಬಸವರಾಜಪ್ಪ ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಶಿಕ್ಷಣ ಪರಿಷತ್ತಿನ ಜಿಲ್ಲಾಧ್ಯಕ್ಷ ಮಾಲತೇಶ್ ಅರಸ್ ಹರ್ತಿಕೋಟೆ ಇವರು ಶಿಕ್ಷಣದಲ್ಲಿ ಸಾಂಸ್ಕøತಿಕ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ. ಚಲನಚಿತ್ರ ಹಾಸ್ಯನಟ ಮತ್ತು ನಾಟಕಕಾರ ಮೈಸೂರು ರಮಾನಂದ, ರಂಗನಿರ್ದೇಶಕ ಕೆಪಿಎಂ.ಗಣೇಶಯ್ಯ, ಉಪನ್ಯಾಸಕರಾದ ಬಿ.ಎಸ್.ನಟರಾಜ, ಡಾ.ಮೋಹನ್ ಕುಮಾರ್, ಮಹಾಂತೇಶ್.ಹೆಚ್, ಹೇಮಲತ.ಬಿ, ಸ್ವಾತಿ ಮುಂತಾದವರು ಮುಖ್ಯಅತಿಥಿಗಳಾಗಿ ಉಪಸ್ಥಿತರಿರುವರು.

ಬೆಂಗಳೂರಿನ ಗೆಜ್ಜೆಹೆಜ್ಜೆ ರಂಗತಂಡದವರಿಂದ ಕಂಡಕ್ಟರ್ ಗಂಗರಾಜು ವಿರಚಿತ ರಂಗಯ್ಯನ ರಾದ್ಧಾಂತ ನಾಟಕ ಪ್ರದರ್ಶನ, ರಂಗಸೌರಭ ಕಲಾವಿದರಿಂದ ಗೀತಗಾಯನ, ಮಧ್ಯಾಹ್ನ 2-30 ಗಂಟೆಗೆ ಇಂಗಳದಾಳ್ ತಳವಾರ ಸಂಚಾಲಪ್ಪ ಪ್ರೌಢಶಾಲೆ ಆವರಣದಲ್ಲಿ ಮೈಸೂರುರಮಾನಂದ ನಿರ್ದೇಶನದಲ್ಲಿ ನಿಂತ್ಕೋಳಿ ಅಲ್ಲಲ್ಲ ಕುಂತ್ಕೋಳಿ ಎಂಬ ಹಾಸ್ಯನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗಸೌರಭ ಕಲಾ ಸಂಘದ ನಿರ್ದೇಶಕ ಎಂ.ವಿ.ನಟರಾಜ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *