ಬೆಂಗಳೂರು: ರಮೇಶದ ಜಾರಕಿಹೊಳಿ ಅವರ ಸಿಡಿ ವಿಚಾರ ಮತ್ತೆ ಮತ್ತೆ ಸದ್ದು ಮಾಡುತ್ತಿದೆ. ಈ ಸಿಡಿ ಮಾಡಿಸಿದರ ಹಿಂದೆ ಡಿಕೆ ಶಿವಕುಮಾರ್ ಕೈವಾಡವಿದೆ. ನನ್ನ ಬಳಿ ಎಲ್ಲಾ ಸಾಕ್ಷಿಗಳು ಇದೆ. ಇದನ್ನು ಈಗ ಸಿಬಿಐ ತನಿಖೆಗೆ ವಹಿಸಬೇಕೆಂದು ರಮೇಶ್ ಜಾರಕಿಹೊಳಿ ಇತ್ತಿಚೆಗಷ್ಟೇ ಸುದ್ದಿಗೋಷ್ಟಿ ನಡೆಸಿ, ಹೌಹಾರಿದ್ದರು. ನೇರವಾಗಿ ಡಿಕೆಶಿ ಮೇಲೆ ವಾಗ್ದಾಳಿ ನಡೆಸಿದ್ದರು. ಪರೋಕ್ಷವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆಯೂ ಕೆಂಡಾಮಂಡಲರಾಗಿದ್ದರು.
ಇದಾದ ಬಳಿಕ ಡಿಕೆ ಶಿವಕುಮಾರ್ ಆಗಲಿ, ಲಕ್ಷ್ಮೀ ಹೆಬ್ಬಾಳ್ಕರ್ ಆಗಲಿ ಮಾತನಾಡಿರಲಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಏನೇ ಆಗಲಿ, ಏನೇ ಹೋಗಲಿ ಇನ್ನು ಮೂರು ತಿಂಗಳು ಕೆಟ್ಟದ್ದನ್ನು ಮಾತನಾಡಲ್ಲ, ಕೆಟ್ಟದ್ದನ್ನು ನೋಡಲ್ಲ, ಕೆಟ್ಟದ್ದನ್ನು ಕೇಳಲ್ಲ ಎಂವ ವಾಗ್ದಾನ ತೆಗೆದುಕೊಂಡಿದ್ದಾರೆ. ಆದರೆ ಡಿಕೆ ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಅವರು ಏನು ಬೇಡಿಕೆ ಕೇಳಿದ್ದಾರೆ ಅದನ್ನ ಈಡೇರಿಸಲಿ. ಕೇಂದ್ರ ಸರ್ಕಾರ ಅವರ ಮನವಿಯನ್ನು ಪುರಸ್ಕರಿಸಲಿ. ಸಿಡಿ ಕೇಸನ್ನು ಯಾವ ಸಂಸ್ಥೆ ಬೇಕಾದರೂ ತನಿಖೆ ಮಾಡಲಿ. ಆದ್ರೆ ಅವರು ಕೋರ್ಟ್ ಗೆ ಏನು ಅಫಿಡೆವಿಟ್ ಹಾಕಿದ್ದಾರೆ. ಕೋರ್ಟ್ ಏನು ನ್ಯಾಯ ನೀಡಿದೆ. ಕೋರ್ಟ್ ಗೆ ಏನಂತ ಅರ್ಜಿ ಹಾಕಿದ್ದರು. ಪಾಪ ಅವ್ರು ಮತ್ತು ಈಶ್ವರಪ್ಪ ಅವರು ಇಬ್ಬರು ಕೂಡ ಮಂತ್ರಿ ಸ್ಥಾನ ಕಳೆದುಕೊಂಡಿದ್ದೇವೆ ಅಂತ ಅಥಾಶರಾಗಿದ್ದಾರೆ. ನೀವೆಲ್ಲಾ ಗೃಹ ಸಚಿವರಿಗೆ ಹೇಳಿ ಅವರಿಗೆ ಸಹಾಯ ಮಾಡಿ” ಎಂದಿದ್ದಾರೆ.