Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಲೈವ್ ಪ್ರದರ್ಶನಕ್ಕೆ ಹೆದರಿ ಆಸ್ಕರ್ ಅವಾರ್ಡ್ ವೇದಿಕೆಯಲ್ಲಿ ಹೆಜ್ಜೆ ಹಾಕಲಿಲ್ಲವಾ‌ರಾಮ್ ಚರಣ್ ಮತ್ತು ಜೂ.NTR..?

Facebook
Twitter
Telegram
WhatsApp

ಇತ್ತಿಚೆಗೆ ಭಾರತೀಯರೆಲ್ಲ ಹೆಮ್ಮೆ ಪಡುವಂತೆ ಮಾಡಿದೆ RRR ಸಿನಿಮಾ. ಆಸ್ಕರ್ ಅವಾರ್ಡ್ ಗೆದ್ದು ಎಲ್ಲರೂ proud feel ಮಾಡುವಂತೆ ಮಾಡಿದೆ. ಆಸ್ಕರ್ ಅವಾರ್ಡ್ ನೀಡುವಾಗ ವೇದಿಕೆ ಮೇಲೆ ನಾಟು ನಾಟು ಹಾಡಿಗೆ ಪ್ರದರ್ಶನ ನೀಡಲಾಗಿತ್ತು. ಆದ್ರೆ ಆ ಪ್ರದರ್ಶನದಲ್ಲಿ ರಿಯಲ್ ಸ್ಟಾರ್ ಗಳು ಕಾಣಿಸಿರಲಿಲ್ಲ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಹೆಜ್ಜೆ ಹಾಕಲಿಲ್ಲ. ನೋಡುಗರಿಗೆ ನಿರೀಕ್ಷೆಯೂ ಇತ್ತು. ಆದ್ರೆ ಯಾಕೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ನಾಟು ನಾಟು ಹಾಡು ಸಿನಿಮಾದಲ್ಲಿ ಮಾಡಲು ಸುಮಾರು ಎರಡು ತಿಂಗಳುಗಳ ಕಾಲ ರಿಹರ್ಸಲ್ ಮಾಡಲಾಗಿದೆ. ಈ ಒಂದು ಸಾಂಗ್ ಗಾಗಿ ಸುಮಾರು 15 ದಿನಗಳ ಕಾಲ ಮೀಸಲಿಡಲಾಗಿದೆ. ಹೀಗಾಗಿ ಆ ಹಾಡು ಅದ್ಭುತವಾಗಿ ಮೂಡಿ ಬಂದಿದ್ದು, ಆಸ್ಕರ್ ಅವಾರ್ಡ್ ಕೂಡ ತನ್ನದಾಗಿಸಿಕೊಂಡಿದೆ. ಆದ್ರೆ ರಿಯಲ್ ಸ್ಟಾರ್ ಗಳು ಯಾಕೆ ಪರ್ಫಾಮ್ ಮಾಡಲಿಲ್ಲ ಎಂಬುದಕ್ಕೆ ಬಾಲಿವುಡ್ ನಿರ್ಮಾಪಕ ರಾಜ್ ಕಪೂರ್ ತಿಳಿಸಿದ್ದಾರೆ.

ಈ ಹಾಡಿಗೆ ಡ್ಯಾನ್ಸ್ ಮಾಡುವುದಕ್ಕೆ ರಾಮ್ ಚರಣ್ ಹಾಗೂ ಜೂ. NTR ಅವರನ್ನೇ ಕೇಳಲಾಗಿತ್ತು. ಆದರೆ ಅವರು ಲೈವ್ ಪ್ರದರ್ಶನ ನೀಡಲು ರೆಡಿ ಇರಲಿಲ್ಲ. ಉತ್ತಮ ಪ್ರದರ್ಶನ ನೀಡಬೇಕೆಂದರೆ ಸಿನಿಮಾದಲ್ಲಿದ್ದ ತಂಡವೇ ಬಂದರೆ ಮಾತ್ರ ಸಾಧ್ಯ ಅಂತ ಹೇಳಿದ್ರು. ಆದ್ರೆ ಇಡೀ ತಂಡದವರಿಗೆ ವೀಸಾ ಸಮಸ್ಯೆ ಎದುರಾಯಿತು. ಜೊತೆಗೆ ಆಸ್ಕರ್ ವೇದಿಕೆ ಮೇಲೆ ಆ ಡ್ಯಾನ್ಸ್ ಮಾಡಲು ಬಹಳಷ್ಟು ರಿಹರ್ಸಲ್ ಬೇಕಿತ್ತು. ಅಷ್ಟು ಸಮಯ ಆ ಇಬ್ಬರಿಗೆ ಇರಲಿಲ್ಲ. ಡ್ಯಾನ್ಸ್ ಮಾಡಿದ ಟೀಂ ಕೇವಲ 18 ಗಂಟೆಯಲ್ಲಿ ಪ್ರಾಕ್ಟೀಸ್ ಮಾಡಿ ಶೋ ನೀಡಿದೆ ಎಂದು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!