in

ಉಡುಪಿ ದೇಗುಲದ ವಿಚಾರಕ್ಕೆ ಕೋಪಗೊಂಡ ರಕ್ಷಿತ್ ಶೆಟ್ಟಿ : ಕಾಂಗ್ರೆಸ್ ಮುಖಂಡ ಮಿಥುನ್ ರೈಗೆ ಕ್ಲಾಸ್..!

suddione whatsapp group join

ಉಡುಪಿ: ಇತ್ತಿಚೆಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈ ಉಪುಡಿ ಶ್ರೀಕೃಷ್ಣ ಮಠಕ್ಕೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ನೀಡಿದ್ದರು. ಮಠಕ್ಕೆ ಭೂಮಿ ಕೊಟ್ಟಿದ್ದು, ಒಬ್ಬ ಮುಸ್ಲಿಂ ವ್ಯಕ್ತಿ ಎಂದು. ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಚರ್ಚೆಗೆ ಗ್ರಾಸವಾಗಿತ್ತು. ಸ್ವಪಕ್ಷೀಯರಿಂದಾನೇ ವಿರೋಧ ಕೂಡ ಕೇಳಿ ಬಂದಿತ್ತು. ಇದೀಗ ನಟ ರಕ್ಷಿತ್ ಶೆಟ್ಟಿ ಕೂಡ ಈ ವಿಚಾರಕ್ಕೆ ಎಂಟ್ರಿಯಾಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿರುವ ರಕ್ಷಿತ್ ಶೆಟ್ಟಿ, ಮಿಥುನ್ ರೈ ಅವರ ಹೆಸರನ್ನು ಬಳಸದೆ ಕಿಡಿಕಾರಿದ್ದಾರೆ. ಉಡುಪಿ ದೇವಸ್ಥಾನಕ್ಕೆ ಸಾವಿರಾರು ವರ್ಷದ ಇತಿಹಾಸವಿದೆ. ಮಾಹಿತಿ ಗೊತ್ತಿಲ್ಲದೆ ಸಾರ್ವಜನಿಕವಾಗಿ ಏನೇನೋ ನಾನ್ ಸೆನ್ಸ್ ರೀತಿಯಲ್ಲಿ ಮಾತನಾಡುವುದು ಯಾಕೆ..? ಎಂದು ಪ್ರಶ್ನಿಸಿದ್ದಾರೆ.

ಉಡುಪಿ ಮಠಕ್ಕೆ ಸಂಬಂಧಿಸಿದಂತೆ ಮಿಥುನ್ ರೈ ನೀಡಿರುವ ಹೇಳಿಕೆಗೆ ಸಾಕಷ್ಟು ವಿರೋಧ ಈಗಾಗಲೇ ಸೃಷ್ಟಿಯಾಗಿದೆ. ಇನ್ನು ರಾಜಕೀಯ ವಿಚಾರಕ್ಕೆ, ರಾಜಕಾರಣಿಗಳ ವಿಚಾರಕ್ಕೆ ಮಾತೇ ಆಡದ ರಕ್ಷಿತ್ ಶೆಟ್ಟಿ ಕೂಡ ಉಡುಪಿ ದೇವಸ್ಥಾನ ಎಂದ ಕೂಡಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ನಾಳೆ ಧ್ರುವ ನಾರಾಯಣ್ ಅಂತಯಕ್ರಿಯೆ : ಅಷ್ಟಕ್ಕೂ ಆಗಿದ್ದೇನು..? ವೈದ್ಯರು ಹೇಳಿದ್ದೇನು..?

ಲಂಚ ಕೇಳೋ ಅಧಿಕಾರಿಗಳಿಗೆ ಈ ರೈತನ ರೀತಿ ಬುದ್ಧಿ ಕಲಿಸಬೇಕು ನೋಡಿ..!