ರಾಜೀವ್ ಗಾಂಧಿ ಹತ್ಯೆಯ ಮತ್ತೊಬ್ಬಳು ಆರೋಪಿ ಬಿಡುಗಡೆಯಾಗುತ್ತಾಳಾ.?: ನಳಿನಿ ತಾಯಿ ಹೇಳಿದ್ದೇನು..?

ನವದೆಹಲಿ: ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಹಂತಕ ಪೆರಾರಿವಾಲನ್ ಬಿಡುಗಡೆಯಾಗಿದ್ದಾನೆ. ಈ ಸಂಬಂಧ ಇದೀಗ ಇನ್ನೊಬ್ಬ ಆರೋಪಿ ನಳಿನಿ ಮನೆಯಲ್ಲೂ ಭರವಸೆ ಮೂಡಿದೆ. ಆಕೆಯ ತಾಯಿ ನನ್ನ ಮಗಳು ಬಿಡುಗಡೆಯಾಗುತ್ತಾಳೆಂಬ ನಂಬಿಕೆ ಹೊರ ಹಾಕಿದ್ದಾರೆ.

ಈ ಸಂಬಂಧ ಮಾತನಾಡಿದ ನಳಿನಿ ತಾಯಿ ಪದ್ಮಾ ಶಂಕರನಾರಾಯಣನ್, ಪೆರಾರಿವಾಲನ್ ಬಿಡುಗಡೆಯಾಗಿರುವುದು ಅವರ ಕುಟುಂಬಕ್ಕೆ ಸಂತಸ ತಂದಿದೆ. ಅವರ ತಾಯಿ ಅರ್ಪುತಮ್ಮಾಳ್ ಸಾಕಷ್ಟು ನೋವು ಅನುಭವಿಸಿದ್ದರು. ಮಗನನ್ನು ಕರೆದುಕೊಂಡು ಬರಲು ಹಲವು ನಾಯಕರನ್ನು ಭೇಟಿ ಮಾಡಿದ್ದರು. ಆದರೆ ನನಗೆ ಆ ರೀತಿಯ ಯಾವ ಬೆಂಬಲವೂ ಇಲ್ಲ ಎಂದಿದ್ದಾಳೆ.

ಇನ್ನುಳಿದ ಆರು ಮಂದಿಯ ಬಿಡುಗಡೆಗೆ ತಮಿಳುನಾಡು ಸರ್ಕಾರ ಶ್ರಮಿಸಲಿದೆ ಎಂದು ಹೇಳಿದ್ದನ್ನು ಟಿವಿ ಯಲ್ಲಿ ನೋಡಿದ್ದೆ. ನನ್ನ ಮಗಳೂ ಕೂಡ ಶೀಘ್ರದಲ್ಲಿಯೇ ಬರುತ್ತಾಳೆ. ಆಕೆಗೆ ಮಗುವಿದ್ದ ಕಾರಣ ಮರಣದಂಡನೆ ತೆಗೆದು ಹಾಕಿದ್ದರು ಎಂದಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *