ಅವ್ರು ಜೋಡೆತ್ತಲ್ಲ.. ಕಾಡೆತ್ತು : ನಳೀನ್ ಕುಮಾರ್ ಕಟೀಲು ಹೀಗೆ ವ್ಯಂಗ್ಯ ಮಾಡಿದ್ದ್ಯಾರಿಗೆ..?

suddionenews
1 Min Read

ಹುಬ್ಬಳ್ಳಿ: ಸ್ಯಾಂಡಲ್ ವುಡ್ ನಲ್ಲಿ ಯಶ್ ಹಾಗೂ ದರ್ಶನ್ ಗೆ ಜೋಡೆತ್ತು ಅಂದ್ರೆ ರಾಜಕೀಯದಲ್ಲಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಗೆ ಜೋಡೆತ್ತು ಅಂತಾರೆ. ಇದೀಗ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಈ ವಿಚಾರವಾಗಿ ಗೇಲಿ ಮಾಡಿದ್ದಾರೆ. ವ್ಯಂಗ್ಯವಾಡಿದ್ದಾರೆ.

ಸಿದ್ದರಾಮಯ್ಯ ಹಾಗೂ ಡಿಕೆಶಿ ಜೋಡೆತ್ತುಗಳಲ್ಲ ಕಾಡೆತ್ತುಗಳು ಎಂದಿದ್ದಾರೆ. ಅದಕ್ಕಾಗಿ ಒಬ್ಬರಿಗೊಬ್ಬರು ಕಾದಾಟ ಶುರು ಮಾಡಿಕೊಂಡಿದ್ದಾರೆ ಎಂದಿದ್ದಾರೆ. ಕಮಗ್ರೆಸ್ ಪಕ್ಷವು ಮುಂದಿನ ಚುನಾವಣೆಗೆ ಒಟ್ಟಾಗಿ ಹೋಗಲ್ಲ. ಎರಡು ಹೋಳಾಗಿ ಹೋಗುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ನವರಿಗೆ ಸೋಲುವ ಭೀತಿ ಎದುರಾಗಿದೆ. ನಮ್ಮ ಪ್ರಧಾನಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಂದ್ರೆ ಸಿದ್ದರಾಮಯ್ಯ ನವರು ಮಾತ್ರ ಸಾಬರ್ ಕಾ ಸಾಥ್ ಸಾಬರ್ ಕಾ ವಿಕಾಸ್ ಎನ್ನುವ ಮಂತ್ರ ಜಪಿಸುತ್ತಿದ್ದಾರೆ.

ಕಾಂಗ್ರೆಸ್ ನಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿಗೆ ಪಕ್ಷ ಮುನ್ನಡೆಸೋದಕ್ಕೆ ಆಗ್ತಿಲ್ಲ. ಇನ್ನು ದೇಶ ಮುನ್ನಡೆಸುತ್ತಾರಾ.. ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟರ್, ಒಬ್ಬ ಡ್ರಗ್ ಪೆಡ್ಲರ್ ಎಂಬ ಆರೋಪವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *