Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಹುಲ್ ದ್ರಾವಿಡ್ ಎಂಟ್ರಿಯಿಂದ ಕೊಹ್ಲಿ ಆಟಕ್ಕೆ ಬಿತ್ತಾ ಬ್ರೇಕ್..?

Facebook
Twitter
Telegram
WhatsApp

ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕತ್ವದಿಂದ ಹೊರ ಹೋಗಿದ್ದು ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಏಳು ವರ್ಷ ನಾಯಕತ್ವ ಸ್ಥಾನದಲ್ಲಿದ್ದುಕೊಂಡು ಈಗ ಹೊರ ಹೋಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಬೇಸರವೂ ಮೂಡಿದೆ. ಇದೆಲ್ಲಾ ಬೆಳವಣಿಗೆ ನಡೆದದ್ದು ರಾಹುಲ್ ದ್ರಾವಿಡ್ ಬಂದ ಮೇಲೆ ಎನ್ನಲಾಗುತ್ತಿದೆ.

ರವಿಶಾಸ್ತ್ರಿ ಅವರು ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಕೆಳಗಿಳಿದ ಬಳಿಕ, ರಾಹುಲ್ ದ್ರಾವಿಡ್ ಕೋಚ್ ಹೆಡ್ ಆಗಿ ಎಂಟ್ರಿ ಕೊಟ್ರು. ಬಳಿಕ ಸಾಕಷ್ಟು ಬದಲಾವಣೆಯೂ ಶುರುವಾಯ್ತು. ದ್ರಾವಿಡ್ ಬರುವ ಮುನ್ನ ಎಲ್ಲ ಆಟಗಾರರು ಕೊಹ್ಲಿ ಅವರ ಹಿಡಿತದಲ್ಲಿದ್ರು. ಆದ್ರೆ ರಾಹುಲ್ ದ್ರಾವಿಡ್ ಎಂಟ್ರಿ ಬಳಿಕ ಡ್ರೆಸ್ಸಿಂಗ್ ರೂಮ್ ವಾತಾವರಣವೂ ಬದಲಾಯಿತು.

ಈ ಹಿಂದೆ ಕೊಹ್ಲಿ ನಾಯಕನಾಗಿದ್ದರೆ ನಾನು ಕೋಚ್ ಹುದ್ದೆ ಸ್ವೀಕರಿಸಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ರು. ಯಾಕಂದ್ರೆ 2017 ರಲ್ಲಿ ವಿರಾಟ್ ಕೊಹ್ಲಿ ಹಾಗೂ ಅಂದಿನ ಕೋಚ್ ಅನಿಲ್ ಕುಂಬ್ಳೆ ನಡುವೆ ಸಾಕಷ್ಟು ವೈಮನಸ್ಸು ಏರ್ಪಟ್ಟಿತ್ತು. ಕೊಹ್ಲಿ ನಾಯಕನಾಗಿದ್ದರೆ ನನ್ನ ಮಾತು ಕೇಳಲ್ಲ. ಸಾಮಾನ್ಯ ಆಟಗಾರನಾಗಿದ್ದರೆ ನನ್ನ ಮಾತು ಕೇಳುತ್ತಾನೆ ಎಂಬ ಉದ್ದೇಶ ದ್ರಾವಿಡ್ ಅವರದ್ದಾಗಿತ್ತು ಎನಿಸುತ್ತದೆ.

ಹೀಗಾಗಿ ದ್ರಾವಿಡ್ ಅವರನ್ನ ಹೆಡ್ ಕೋಚ್ ಮಾಡೋದಕ್ಕೆ ಹೊರಟಿದ್ದ ಬಿಸಿಸಿಐ ಅವರೆಲ್ಲಾ ಷರತ್ತುಗಳಿಗೆ ಒಪ್ಪಿತ್ತು. ಅಂದಿನಿಂದ ಕೊಹ್ಲಿ ಅವರ ಆಟಗಳಿಗೆ ಬ್ರೇಕ್ ಬೀಳುತ್ತಾ ಬಂದಿದೆ. ಆದ್ರೀಗ ಸಂಪೂರ್ಣವಾಗಿ ನಾಯಕತ್ವದಿಂದ ಕೊಹ್ಲಿ ಕೆಳಗಿಳಿದಿರುವುದು ಬಿಸಿಸಿಐ ಕಿರುಕುಳದಿಂದಲೇ ಎನ್ನಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮಧುಮೇಹ ಇರುವವರು ತುಪ್ಪವನ್ನು ತಿನ್ನಬಹುದಾ ? ತಿಂದರೆ ಏನಾಗುತ್ತದೆ ?

ಸುದ್ದಿಒನ್ : ತುಪ್ಪದಲ್ಲಿ ಕೊಬ್ಬು ಹೆಚ್ಚಾಗಿ ಇರುತ್ತದೆ. ಆದರೆ, ಮಧುಮೇಹ ಇರುವವರು ಇದನ್ನು ತಿನ್ನಬಹುದೇ ಅಥವಾ ಇಲ್ಲವೇ ಎಂಬ ಅನುಮಾನವಿದೆ. ಆದರೆ, ತುಪ್ಪವನ್ನು ಔಷಧಿ ಎಂದು ಹೇಳಬಹುದು.  ಮಧುಮೇಹಿಗಳು ಇದನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.  ತುಪ್ಪವನ್ನು

EXAM Motivation : ಪರೀಕ್ಷೆಯಲ್ಲಿ ಫೇಲ್ ಆದರೆ ಆತ್ಮಹತ್ಯೆ ಪರಿಹಾರವಲ್ಲ : ಬದುಕನ್ನು ನಿರ್ಧರಿಸುವುದು ಪರೀಕ್ಷೆಗಳಲ್ಲ…!

ಸುದ್ದಿಒನ್ : ಇದು ಪರೀಕ್ಷೆಯ ಕಾಲ. ಈ ಸಮಯದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡದಲ್ಲಿರುತ್ತಾರೆ. ಆದರೆ ಪರೀಕ್ಷೆಗಳು ಮಾತ್ರ ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ. ಪರೀಕ್ಷೆಗಳ ನಂತರ ಬಹಳಷ್ಟು ಜೀವನವು ನಮ್ಮ ಮುಂದಿದೆ. ಇತ್ತೀಚಿನ ದಿನಗಳಲ್ಲಿ ಪರೀಕ್ಷೆಯಲ್ಲಿ

ಈ ರಾಶಿಯವರ ದಾಂಪತ್ಯದಲ್ಲಿ ವೈಮನಸ್ಸು

ಈ ರಾಶಿಯವರ ದಾಂಪತ್ಯದಲ್ಲಿ ವೈಮನಸ್ಸು ಮಂಗಳವಾರ ರಾಶಿ ಭವಿಷ್ಯ -ಮಾರ್ಚ್-19,2024 ಸೂರ್ಯೋದಯ: 06:24, ಸೂರ್ಯಾಸ್ತ : 06:23 ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಪಾಲ್ಗುಣ ಮಾಸ , ಶುಕ್ಲ ಪಕ್ಷ, ಉತ್ತರಾಯಣಂ,

error: Content is protected !!