ಹೊಟೇಲ್ ಮುಂದೆ ಟು ಡೇ ಸ್ಪೆಷಲ್ ಬೋರ್ಡ್ ಇರುತ್ತಲ್ಲ, ಹಂಗೆ ಡಿಕೆಶಿ, ಸಿದ್ದರಾಮಯ್ಯಂದು : ಸಚಿವ ಅಶೋಕ್

1 Min Read

 

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿ ಆರು ತಿಂಗಳು. ಸರ್ಕಾರದಿಂದ ಕಲ್ಯಾಣ ಕಾರ್ಯಕ್ರಮವನ್ನ ಮಾಡಲಾಗಿದೆ. ಈ ಸಂಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರ ಏನೂ ಸಾಧನೆ ಮಾಡಿಲ್ಲ ಎಂದಿದ್ದರು.

ಆ ಬಗ್ಗೆ ಸಚಿವ ಆರ್ ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರಿಗೆ ನಾನು ಮಾಡಿದ್ದೆ ಸರಿ ಎಂಬ ಭಾವನೆ ಇದೆ. ಹೆಚ್ಚು ಬಜೆಟ್ ಮಂಡನೆ ಮಾಡಿದ್ದೇನೆಂಬ ಅಹಂ ಜಾಸ್ತಿಯಾಗಿದೆ. ಎಲ್ಲಾ ವಿಚಾರ ಕ್ಕೂ ಒಂದು ರಿಯಾಕ್ಷನ್ ಕೊಡಬೇಕೆಂಬ ಚಟ ಅವರಿಗಿದೆ. ಹಾಗಾಗಿ ಎಲ್ಲದಕ್ಕೂ ಮಾತಾಡ್ತಾ ಇರ್ತಾರೆ.

ಸಿದ್ದರಾಮಯ್ಯ ಅವರು ಐದು ವರ್ಷ ಆಡಳಿತ ನಡೆಸಿದ್ರು ಕೂಡ ಏನು ಮಾಡ್ಲಿಲ್ಲ. ಆದ್ರೆ ಬಸವರಾಜ್ ಬೊಮ್ಮಾಯಿ ಅವರು ಆರೇ ತಿಂಗಳಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಜನ ಈಗಾಗ್ಲೇ ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ. ಆದ್ರೂ ಡಿಕೆಶಿ, ಸಿದ್ದರಾಮಯ್ಯ ಶೋ ನಡೀತಾ ಇದೆ. ಹೊಟೇಲ್ ಮುಂದೆ ಟುಡೇ ಸ್ಪೆಷಲ್ ಬೋರ್ಡ್ ಇರುತ್ತಲ್ಲ ಆ ಥರ ಇವರಿಬ್ಬರ ಶೋ ಇರುತ್ತೆ.

17 ಜನ ಕಾಂಗ್ರೆಸ್ ಬಿಟ್ಟು ಬಂದ್ರಲ್ಲ. ಆಗಲೇ ಕಾಂಗ್ರೆಸ್ ಸತ್ಯಶೋಧನ ಸಮಿತಿ ಮಾಡ್ಬೇಕಿತ್ತು. ಅವರೆಲ್ಲಾ ಕಾಂಗ್ರೆಸ್ ಬಿಟ್ಟಿದ್ದು ಯಾಕೆ ಅಂತ ತಿಳಿದುಕೊಳ್ಳಬೇಕಿತ್ತು. ಈಗ ಸಿ ಎಂ ಇಬ್ರಾಹಿಂ ಅವರು ಕೂಡ ಕಾಂಗ್ರೆಸ್ ಬಿಡ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *