ಮಲೇರಿಯಾ ನಿರ್ಮೂಲನೆಗೆ ಗುಣಮಟ್ಟದ ಪರೀಕ್ಷೆ ಅವಶ್ಯಕ : ಡಾ.ಆರ್.ರಂಗನಾಥ್

1 Min Read

 

ಚಿತ್ರದುರ್ಗ, (ಅಕ್ಟೋಬರ್11) : 2025ಕ್ಕೆ  ಮಲೇರಿಯಾ ನಿರ್ಮೂಲನೆ ಮಾಡಬೇಕಾಗಿರುವುದರಿಂದ ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ಕಾರ್ಯ ಮತ್ತು ಗುಣಮಟ್ಟದ ಪರೀಕ್ಷೆ ಮಾಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ರಂಗನಾಥ್ ತಿಳಿಸಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ರೋಗ ವಾಹಕ  ಆಶ್ರಿತ ರೋಗಗಳ  ನಿಯಂತ್ರಣ ಕಛೇರಿ ವತಿಯಿಂದ ರಾಷ್ಟ್ರೀಯ  ಆರೋಗ್ಯ ಅಭಿಯಾನದಡಿಯಲ್ಲಿ  ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳಿಗೆ ಮೂರು ದಿನಗಳ ಮಲೇರಿಯಾ ಇತರೆ ಸಾಂಕ್ರಾಮಿಕ ರೋಗಗಳ ಬಗ್ಗೆ ಮಲೇರಿಯಾ ಮೈಕ್ರೋ ಸ್ಕೋಪಿ ತರಬೇತಿ ಕಾರ್ಯಾಗಾರ  ಉದ್ಘಾಟಿಸಿ ಅವರು ಮಾತನಾಡಿದರು.
ಮಲೇರಿಯಾ ನಿರ್ಮೂಲನೆಗೆ ಗುಣಮಟ್ಟದ ಪರೀಕ್ಷೆ ಮಾಡುವುದರ ಮೂಲಕ 2025ಕ್ಕೆ ನಾವು ಮಲೇರಿಯಾ ಮುಕ್ತ ಭಾರತ ನಿರ್ಮಾಣ ಮಾಡೋಣ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಜಿಲ್ಲಾ ರೋಗ ವಾಹಕ  ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್.ಕಾಶಿ, ಜಿಲ್ಲಾ ತರಬೇತಿ  ಕೇಂದ್ರದ ಪ್ರಾಂಶುಪಾಲ ಡಾ.ರವೀಂದ್ರ, ಸಿ.ಎಂ.ಎಲ್ ಜಂಟಿ ನಿರ್ದೇಶಕರ ಕಛೇರಿ ಸಂನ್ಮೂಲ ವ್ಯಕ್ತಿಗಳಾದ ಮಾದವಿ, ಹೇಮಾವತಿ, ನೋಡಲ್ ಪ್ರಯೋಗ ಶಾಲಾ ತಂತ್ರಜ್ಞ ವೆಂಕಟೇಶ್, ಹಿರಿಯ ಆರೋಗ್ಯ ಮೇಲ್ಚಿಚಾರಕರಾದ ಟಿ.ಮಲ್ಲಿಕಾರ್ಜುನ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಿ.ಶ್ರೀನಿವಾಸ, ಬಿ.ಆರ್.ನಾಗರಾಜ, ಹೆಚ್.ಎ.ನಾಗರಾಜ, ಪಾಂಡು, ಲೋಕೇಶ್ ಹಾಗೂ ಶ್ವೇತಾ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *