ಬೆಂಗಳೂರು: ಲವ್ ಯು ರಚ್ಚು ಸಿನಿಮಾದ ದುರಂತ ಎಲ್ರಿಗೂ ನೆನಪಿದ್ದೆ ಇರುತ್ತೆ. ಆ ದುರಂತದಲ್ಲಿ ಫೈಟರ್ ವಿವೇಕ್ ಹೈಟೆನ್ಶನ್ ವೈಯರ್ ತಗುಲಿ ಸಾವನ್ನಪ್ಪಿದ್ರು. ಅದಾದ ಬಳಿಕ ಪರಿಹಾರ ನೀಡುವ ಭರವಸೆ ಮಾತುಗಳನ್ನಾಡಿದ್ದ ನಿರ್ಮಾಪಕರ ಪತ್ನಿ ಅತ್ತ ಸುಳಿದಿರಲಿಲ್ಲ. 24 ದಿನಗಳ ಬಳಿಕ ಇಂದು ಫೈಟರ್ ವಿವೇಕ್ ಕುಟುಂಬಕ್ಕೆ ಪರಿಹಾರ ಸಿಕ್ಕಿದೆ.
ಹತ್ತು ಲಕ್ಷ ನೀಡುವುದಾಗಿ ಹೇಳಿದ್ದ ಗುರುದೇಶಪಾಂಡೆ ಇಂದು ಪತ್ನಿ ಹಾಗೂ ಫೈಟ್ ಮಾಸ್ಟರ್ ಜೊತೆಗೆ ವಿವೇಕ್ ಮನೆಗೆ ಬಂದಿದ್ರು. ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಐದು ಲಕ್ಷದ ಚೆಕ್ ಅನ್ನು ಕೂಡ ಹಸ್ತಾಂತರಿಸಿದ್ದಾರೆ. ಜೊತೆಗೆ ತಮ್ಮನ ಓದಿನ ಖರ್ಚನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿರ್ಮಾಪಕ ಗುರುದೇಶಪಾಂಡೆ, ಅಚಾನಕ್ಕಾಗಿ ಈ ಘಟನೆ ನಡೆದು ಹೋಗಿದೆ. ಮತ್ತೆ ಮಗನನ್ನು ವಾಪಾಸ್ಸು ತಂದು ಕೊಡಲು ಸಾಧ್ಯವಿಲ್ಲ. ಆತನ ಜಾಗದಲ್ಲಿ ನಿಂತು ನಾನು ಆ ಜವಬ್ದಾರಿಯನ್ನ ತೆಗೆದುಕೊಳ್ತೇನೆ. ಈಗ ಅರ್ಧ ಹಣ ನೀಡಿದ್ದೇನೆ. ಇನ್ನುಳಿದ ಹಣವನ್ನ ಸಿನಿಮಾ ರಿಲೀಸ್ ಆದ್ಮೇಲೆ ನೀಡುತ್ತೇನೆ ಎಂದಿದ್ದಾರೆ.