ಉತ್ತರ ಪ್ರದೇಶ: ಹಬ್ಬಕ್ಕೋ.. ಮದುವೆಗೋ, ಇನ್ಯಾವುದೇ ಸಮಾರಂಭವಿರಲಿ ಮೆಹಂದಿ ಹಾಕಿಸಿಕೊಳ್ಳಬೇಕು ಎಂದಾಕ್ಷಣಾ ಬುಕ್ ಮಾಡುವುದು ಮುಸ್ಲಿಂ ಮಹಿಳೆಯರನ್ನು. ಮೆಹಂದಿ ಹಾಕುವುದರಲ್ಲಿ ಮುಸ್ಲಿಂ ಮಹಿಳೆಯರು ಎತ್ತಿದ ಕೈ. ಹೀಗಾಗಿ ಮೆಹಂದಿ ಎಂದು ಬಂದಾಗ ಅವರನ್ನೇ ಕಾಂಟ್ಯಾಕ್ಟ್ ಮಾಡಲಾಗುತ್ತದೆ. ಆದರೆ ಉತ್ತರ ಪ್ರದೇಶದಲ್ಲಿ ಈಗ ಮುಸ್ಲಿಂ ಮಹಿಳೆಯರು ಹಿಂದೂಗಳಿಗೆ ಮೆಹಂದಿ ಹಾಕುವುದು ಬೇಡ ಎಂಬ ಸೂಚನೆ ನೀಡಲಾಗಿದೆ.
ಉತ್ತರ ಪ್ರದೇಶದಲ್ಲಿ ಇಂದು ಮತ್ತು ನಾಳೆ ಕಾರ್ವಾಚೌತ್ ನಡೆಯುತ್ತಿದೆ. ಇದು ವಿವಾಹಿತ ಮಹಿಳೆಯರಿಗೆ ತುಂಬಾನೇ ಮುಖ್ಯವಾದ ಆಚರಣೆಯಾಗಿದೆ. ಗಂಡಂದಿರ ಆಯಸ್ಸು ಹಾಗೂ ಆರೋಗ್ಯಕ್ಕಾಗಿ ಪತ್ನಿಯರು ಉಪವಾಸ ಇರುತ್ತಾರೆ. ಹಲವು ಆಚರಣೆಗಳ ನಡುವೆ ಮಹಿಳೆಯರ ಕೈಗೆ ಹಾಕುವ ಮೆಹಂದಿಯೇ ಇಲ್ಲಿನ ಹೈಲೇಟ್ ಆಗಿರುತ್ತದೆ.
ಆದರೆ ಈ ಬಾರಿ ಹಿಂದೂ ಮಹಿಳೆಯರು ಮುಸ್ಲಿಂ ಮಹಿಳೆಯರಿಂದ ಮೆಹಂದಿ ಹಾಕಿಸಿಕೊಳ್ಳಬಾರದು ಎಂಬುದಾಗಿ ಮುಜಾಫರ್ ನಗರದಲ್ಲಿ ಎಚ್ಚರಿಕೆ ನೀಡಲಾಗಿದೆಯಂತೆ. ವಿಶ್ವ ಹಿಂದೂ ಪರಿಷತ್ ಹಾಗೂ ಹಲವು ಹಿಂದೂಪರ ಸಂಘಟನೆಗಳು ಮೆಹಂದಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಹಿಂದೂಗಳಿಂದಾನೇ ಮೆಹಂದಿ ಹಾಕಿಸಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. 13 ಗೋರಂಟಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಹಿಂದೂ ಮಹಳೆಯರನ್ನು ಮಾತ್ರ ನೇಮಕ ಮಾಡಲಾಗಿದೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…