Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾಲಕ ಚೇಷ್ಟೇ ಮಾಡಿದನೆಂದು ಮುಖ್ಯ ಶಿಕ್ಷಕ ಈ ರೀತಿ ಮಾಡೋದಾ..?

Facebook
Twitter
Telegram
WhatsApp

ಉತ್ತರ ಪ್ರದೇಶ: ಮಕ್ಕಳೆಂದರೆ ಆಟ-ತುಂಟಾಟ ಸಹಜವಲ್ಲವೆ. ಚೇಷ್ಟೇ ಮಾಡೋದು ಕೂಡ ಮಕ್ಕಳ ಗುಣ. ಆದ್ರೆ ಇದಕ್ಕೆ ಕೋಪಗೊಂಡ ಪ್ರಿನ್ಸಿಪಾಲ್ ಒಬ್ಬರು ಮಗುವನ್ನ ಉಲ್ಟಾ ಹಿಡಿದುಕೊಂಡು ಹೆದರಿಸಿದರೆ ಹೇಗೆ..? ಇಂಥದ್ದೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಉತ್ತರ ಪ್ರದೇಶದ ಮಿರ್ಜಾಪುರ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಹ್ರೌರಾದಲ್ಲಿರುವ ಸದ್ಭಾವನಾ ಶಿಕ್ಷಣ ಸಂಸ್ಥಾನದ ಜ್ಯೂನಿಯರ್​ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 2ನೇ ತರಗತಿ ವಿದ್ಯಾರ್ಥಿ ಸೋನು ಯಾದವ್​ ಏನೊಇ ಚೇಷ್ಟೇ ಮಾಡಿದ್ದ ಎಂಬ ಕಾರಣಕ್ಕೆ ಆ ಬಾಲಕನ ಕಾಲನ್ನ ಹಿಡಿದು ಎರಡನೇ ಮಹಡಿಯಲ್ಲಿ ನಿಂತು ಉಲ್ಟಾ ಹಿಡಿದು ಭಯ ಹುಟ್ಟಿಸಿದ್ದಾರೆ.

ಪ್ರಿನ್ಸಿಪಾಲ್ ಮನೋಜ್ ವಿಶ್ವಕರ್ಮ ಈ ರೀತಿ ನಡೆದುಕೊಂಡಿದ್ದು, ಆ ವಿಡಿಯೋ ನೋಡೋದಕ್ಕೆ ಭಯವಾಗುತ್ತೆ. ಆತನ ಸುತ್ತಮುತ್ತ ಮಕ್ಕಳು ನಿಂತಿದ್ದಾರೆ. ಆ ಮಕ್ಕಳ ಮುಖದಲ್ಲೂ ಭಯ ಕಾಣುತ್ತಿದೆ. ಕೆಳಗೆ ಬಿಟ್ಟು ಬಿಡುತ್ತೇನೆ ಎಂದು ಪ್ರಿನ್ಸಿಪಾಲ್ ಭಯ ಹುಟ್ಟಿಸಿದ್ದಾರೆ. ನಾನು ಇನ್ನು ಚೇಷ್ಟೇ ಮಾಡಲ್ಲ ಬಿಟ್ಟು ಬಿಡಿ ಎಂದು ಬೇಡಿಕೊಂಡ ಬಳಿಕ ಪ್ರಿನ್ಸಿಪಾಲ್ ಬಾಲಕನನ್ನ ಮೇಲೆತ್ತಿದ್ದಾರೆ. ಸದ್ಯ ಜಿಲ್ಕಾಧಿಕಾರಿ ಆ ಪ್ರಿನ್ಸಿಪಾಲ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಳ್ಳಕೆರೆ | ರಸ್ತೆ ಅಪಘಾತದಲ್ಲಿ ಛಾಯಾಗ್ರಾಹಕ ಮೃತ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 29 :  ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ

ಚಿತ್ರದುರ್ಗ | ಕಣಿವೆಯಿಂದ ಠಾಣೆಗೆ ಬಂದ ಮಾರಮ್ಮನ ರೋಚಕ ಕಥೆ..!

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 29 :  ಚಿತ್ರದುರ್ಗ ನಗರ ಪೊಲೀಸ್ ಠಾಣೆ ಆವರಣದಲ್ಲಿ ಶ್ರೀ ಕಣಿವೆ ಮಾರಮ್ಮ ದೇವಿ ಆಸೀನಳಾಗಿ ಬಹು ವಿಜೃಂಭಣೆಯಿಂದ ರಾರಾಜಿಸುತ್ತಿದ್ದಾಳೆ, ತಾಯಿ. ಅಸಂಖ್ಯಾತ ಭಕ್ತಜನ ದಿನದಿನವೂ ಅರ್ಚನೆ, ಹರಕೆಗಳಿಂದ ಇದೀಗ

ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ!

ಈ ರಾಶಿ ಒಲ್ಲದ ಮನಸಿಗೆ ಮದುವೆ ಯೋಗ, ಈ ರಾಶಿಯ ದಂಪತಿಗಳಿಗೆ ಸಂತಾನದ ವಿಷಯ ಕೇಳಿ ಹರ್ಷವೋ ಹರ್ಷ! ಶುಕ್ರವಾರ- ರಾಶಿ ಭವಿಷ್ಯ ಮಾರ್ಚ್-29,2024 ಸೂರ್ಯೋದಯ: 06:16, ಸೂರ್ಯಾಸ್ತ : 06:25 ಶಾಲಿವಾಹನ ಶಕೆ1944,

error: Content is protected !!