ಪ್ರತಿ ವರ್ಷ 50 ಸಾವಿರ ಕೋಟಿ ಗೋಮಾಂಸ ರಫ್ತಾಗುತ್ತಿದೆ : ಪ್ರಮೋದ್ ಮುತಾಲಿಕ್ ಕಿಡಿ..!

suddionenews
1 Min Read

ಧಾರವಾಡ: ಗೋಮಾಂಸ ರಫ್ತಿನ ಬಗ್ಗೆ ಮಾತನಾಡಿದ ಮುತಾಲಿಕ್ ನೇರವಾಗಿ ಪ್ರಧಾನಿ ಮೋದಿಯವರನ್ನ ಪ್ರಶ್ನಿಸಿದ್ದಾರೆ. ಪ್ರತಿ ವರ್ಷ 50 ಸಾವಿರ ಕೋಟಿ ಗೋಮಾಂಸ ರಫ್ತಾಗುತ್ತಿದ್ದರು ಪ್ರಧಾನಿ ಮೌನವಹಿಸಿರುವುದು ಏಕೆ ಎಂದಿದ್ದಾರೆ.

ನಗರದಲ್ಲಿ ಮಾತನಾಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಮನಮೋಹನ್ ಸಿಂಗ್ ಸರ್ಕಾರವಿದ್ದಾಗ ಗೋ ಮಾಂಸ ರಪ್ತು ಬಗ್ಗೆ ನರೇಂದ್ರ ಮೋದಿಯವರೇ ಆರೋಪ ಮಾಡಿದ್ದರು. ಗೋ ಹಂತಕರನ್ನು ಮತ್ತು ಕಸಾಯಿಖಾನೆಯನ್ನು ಬೆಳೆಸಿದ್ದೇ ಕಾಂಗ್ರೆಸ್. ಈಗ ಬಿಜೆಪಿ ಅದನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮಠಾಧೀಶರನ್ನು ತರಾಟೆಗೆ ತೆಗೆದುಕೊಂಡಿದ್ದಾತೆ. ಲಿಂಗಾಯತ ಹೆಣ್ಣುಮಕ್ಕಳನ್ನ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಲಿಂಗಾಯತ ಸ್ವಾಮೀಜಿಗಳು ಎಲ್ಲಿದ್ದಾರೆ. ಮೊದಲು ಹೊರಗೆ ಬನ್ನಿ ಎಂದಿದ್ದಾರೆ. ಅಷ್ಟೇ ಅಲ್ಲ ಹಿಂದುತ್ವವನ್ನ ಕಾಪಾಡುವುದು ಕೇವಲ‌ ನನ್ನ ಕೆಲಸವಷ್ಟೇ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *