Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಜ್ವಲ್ ರೇವಣ್ಣ ಮಾತಿನಿಂದ ಕಾಂಗ್ರೆಸ್ ಹೋಗುವ ಯೋಚನೆ ಬಿಡ್ತಾರಾ ಶಿವಲಿಂಗೇಗೌಡ..?

Facebook
Twitter
Telegram
WhatsApp

ಹಾಸನ: ಜೆಡಿಎಸ್ ಶಿವಲಿಂಗೇಗೌಡ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುವ ಪ್ಲ್ಯಾನ್ ನಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲೂ ಇದ್ದಾರೆ ಎನ್ನಲಾಗಿದೆ. ಇದೀಗ ಪ್ರಜ್ವಲ್ ರೇವಣ್ಣ ಮತ್ತೆ ಪರೋಕ್ಷವಾಗಿ ಶಿವಲಿಂಗೇಗೌಡ ಅವರಿಗೆ ಆಫರ್ ನೀಡಿದ್ದಾರೆ. ಜೆಡಿಎಸ್ ನಲ್ಲಿಯೇ ಉಳಿದುಕೊಂಡರೆ ನಮಗೆ ಸಂತೋಷ ಎಂದಿದ್ದಾರೆ.

ಹಾಸನದಲ್ಲಿ ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ನಾವೂ ಅರಸೀಕೆರೆಗೆ ಇನ್ನು ಯಾವ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಹಾಲಿ ಶಾಸಕ ಶಿವಲಿಂಗೇಗೌಡ ನಾನಿನ್ನು ಜೆಡಿಎಸ್ ನಲ್ಲಿಯೇ ಇದ್ದೀನಿ ಅಂತ ಸದನದಲ್ಲಿ ಹೇಳಿದ್ದಾರೆ. ಹಾಸನ ಜಿಲ್ಲೆಯ ಎಲ್ಲಾ ಟಿಕೆಟ್ ಗಳನ್ನು ನಮ್ಮ ಕುಮಾರಣ್ಣನೇ ಅನೌನ್ಸ್ ಮಾಡುತ್ತಾರೆ. ನಾವೂ ಯಾರನ್ನು ಪಕ್ಷ ಬಿಟ್ಟು ಹೋಗಿ ಅಂತ ಹೇಳಿಲ್ಲ.

ಮುಂದಿನ ತಿಂಗಳು ಪಂಚರತ್ನ ರಥಯಾತ್ರೆ ಹಾಸನದಲ್ಲಿ ನಡೆಯಲಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಹಾಗೂ ಅರಸೀಕೆರೆ ಕ್ಷೇತ್ರದವರು ಶಾಸಕರಾಗುವ ತನಕ ಪ್ರಜ್ವಲ್ ರೇವಣ್ಣ ನಿದ್ದೆ ಮಾಡಲ್ಲ. ಯಾವತ್ತಿಗೂ ಶಿವಲಿಂಗಣ್ಣನನ್ನು ಆಚೆ ಹೋಗು ಅಂತ ಹೇಳಿಲ್ಲ. ಯಾರೇ ಅಭ್ಯರ್ಥಿ ಆಗಲಿ ಅವರ ಪರ ನಾವೂ ಕೆಲಸ ಮಾಡಬೇಕು. ಶಿವಲಿಂಗಣ್ಣ ಸದನದಲ್ಲಿ ಹೇಳಿದ್ದನ್ನೇ ಹೊರಗೆ ಬಂದು ಹೇಳಲಿ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ

ಈ ರಾಶಿಯವರು ಇಂದು ತುಂಬಾ ಖುಷಿ ಪಡೆಯುವ ಸಂದೇಶ ಪಡೆಯಲಿದ್ದಾರೆ, ಶನಿವಾರ- ರಾಶಿ ಭವಿಷ್ಯ ಏಪ್ರಿಲ್-20,2024 ಸೂರ್ಯೋದಯ: 06:00, ಸೂರ್ಯಾಸ್ತ : 06:29 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079,

ಚಿತ್ರದುರ್ಗ | ದಾಖಲೆ ಇಲ್ಲದೆ ಸಾಗಿಸುತ್ತಿದ್ದ 20 ಲಕ್ಷ ವಶಕ್ಕೆ 

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್, 19 :  ನಗರದ ತಿರುಮಲ ಡಾಬ ಚೆಕ್ ಪೋಸ್ಟ್ ಬಳಿಯಲ್ಲಿ ಮಧ್ಯಾಹ್ನ ಸುಮಾರು 3.00 ಗಂಟೆ ಸಮಯದಲ್ಲಿ ಯಾವುದೇ ಸೂಕ್ತ ದಾಖಲಾತಿ ಇಲ್ಲದೆ ಸಾಗಿಸುತ್ತಿದ್ದ ರೂ.20,93,928 ರ ಮೊತ್ತವನ್ನು ಸಂಬಂಧಿಸಿದ

error: Content is protected !!