ರಾತ್ರೋ ರಾತ್ರಿ ರಸ್ತೆಗೆ ನಾಮಕರಣ : ‘ವೀರ ಮದಕರಿ ನಾಯಕ’ನಿಂದ ಸ್ಥಳದಲ್ಲಿ ಉದ್ವಿಘ್ನ..!

suddionenews
1 Min Read

ಬೆಳಗಾವಿ: ಕೆಲವು ದಿನಗಳಿಂದ ಆ ವೃತ್ತಕ್ಕೆ ವೀರಮದಕರಿ‌ ನಾಯಕ ಅನ್ನೋ ಹೆಸರಿಡಬೇಕೆಂಬ ಒತ್ತಾಯ ಸಿಕ್ಕಾಪಟ್ಟೆ ಕೇಳಿ ಬಂದಿತ್ತು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಲಾಗಿತ್ತು. ಆದ್ರೆ ಈಗ ಯಾರ ಒಪ್ಪಿಗೆಯೂ ಇಲ್ಲದೆ, ಅದೇ ಸರ್ಕಲ್ ನಲ್ಲಿ ಬೋರ್ಡ್ ಬಿದ್ದೇ ಬಿಟ್ಟಿದೆ.

ಆರ್ಡಿಪಿ ಸರ್ಕಲ್ ಬೆಳಗಾಗುವುದರೊಳಗಾಗಿ ಸಿಕ್ಕಾಪಟ್ಟೆ ಹೆಸರುವಾಸಿಯಾಗಿದೆ. ಯಾಕಂದ್ರೆ ಯಾರೋ ಆ ಸರ್ಕಲ್ ಗೆ ರಾತ್ರೋ ರಾತ್ರಿ ನಾಮಕರಣ‌ಮಾಡಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲ ದೊಡ್ಡ ಬೋರ್ಡ್ ವೊಂದನ್ನ ನೇತಾಕಿ ಹೋಗಿದ್ದಾರೆ. ಹೀಗಾಗಿ ಎಲ್ಲರ ಬಾಯಲ್ಲೂ ಆರ್ಡಿಪಿ ಸರ್ಕಲ್ ಅದೇ ಮಾತಾಗಿದೆ.

ವೀರ ಮದಕರಿ ನಾಯಕನ ಬೋರ್ಡ್ ನೇತಾಗಿ ಹೋಗಿರೋ ಕಾರಣ ಸ್ಥಳದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿದೆ. ಅಷ್ಟೇ ಅಲ್ಲ ಅಲ್ಲಿನ ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೋಸರೇ ಬರಬೇಕಾಯಿತು. ನಂತರ ಎಲ್ಲವನ್ನು ತಣ್ಣಗೆ ಮಾಡಿ, ಆ ಬೋರ್ಡನ್ನು ತೆರವುಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *